
ನವದೆಹಲಿ (ಏ. 12) ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದು ದೇಸಿ ತಳಿಯ ಶ್ವಾನಗಳ ಮಹತ್ವವನ್ನು ಸಾರಿದ್ದರು. ದೇಸಿ ತಳಿಯ ಅತ್ಯುನ್ನತ ಶ್ವಾನಗಳ ಅಭಿವೃದ್ಧಿ ಪಡಿಸುವಿಕೆ ಮತ್ತು ಅವುಗಳನ್ನು ರಫ್ತು ಮಾಡುವಿಕೆಗೆ ಕೇಂದ್ರ ಸರ್ಕಾರ ಹೆಜ್ಜೆ ಇಡಲು ಮುಂದಾಗಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಪಶುಸಂಗೋಪನೆ ಜವಾಬ್ದಾರಿ ಹೊತ್ತಿರುವ ಸಿಂಗ್ ಅಂಥದ್ದೊಂದು ಪ್ರಸ್ತಾಔನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಭಾರತೀಯ ತಳಿಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಇಂಡಿಯನ್ ಕೌನಸ್ಇಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ ಸಂಶೋಧನೆಯಲ್ಲಿ ತೊಡಗಿದೆ ಎಂದು ಮೋದಿ ಹೇಳಿದ್ದರು.
2021 ರ ಜನವರಿಯಲ್ಲಿ ಕ್ಯಾಬಿನೆಟ್ ಸಕ್ರೆಟರಿಗೆ ಮಾಹಿತಿ ನೀಡಲಾಗಿತ್ತು. ಮುಂದಿನ ಬಾರಿ ಮನೆಗೆ ನೀವು ನಾಯಿ ತರುತ್ತೀರಿ ಎಂದಾದರೆ ದೇಸಿ ತಳಿಯ ಶ್ವಾನವನ್ನೇ ತನ್ನಿ ಎಂದು ಮೋದಿ ಕೇಳಿಕೊಂಡಿದ್ದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹೇಳಿದಂತೆ ಪ್ರಸ್ತಾವನೆ ಸಿದ್ಧವಾಗಿದೆ. ಇನ್ನೊಂದು ಕಡೆ 2030 ರ ವೇಳೆಗೆ ರೇಬೀಸ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ವಿಶ್ವಸಂಸ್ಥೆ ಹೇಳಿದೆ.
19 ನೇ ಜಾನುವಾರುಗಳ ಜನಗಣತಿಯ ಪ್ರಕಾರ (2012 ರ), ಭಾರತವು 11.67 ಮಿಲಿಯನ್ ಸಾಕು ನಾಯಿಗಳು ಮತ್ತು 17.13 ಮಿಲಿಯನ್ ಬೀದಿ ನಾಯಿಗಳನ್ನು ಹೊಂದಿದೆ, ಇದರಲ್ಲಿ ಹಲವಾರು ತಳಿಗಳಿದ್ದು ಅವುಗಳ ಪ್ರಾಮುಖ್ಯ ಅರಿಯುವ ಕೆಲಸವಾಗಬೇಕಿದೆ.
ದೇಶಿಯ ತಳಿಗಳಿಗೆ ಮಾರುಕಟ್ಟೆ ನಿರ್ಮಾಣ, ವಿದೇಶದಿಂದ ಆಮದಾಗುವ ತಳಿಗಳ ಬದಲು ನಮ್ಮಲ್ಲಿಯ ಶ್ವಾನಗಳ ಬಳಕೆ ಮಾಡಿಕೊಳ್ಳುವುದು ಮುಖ್ಯ ಉದ್ದೇಶ. ಶ್ವಾನ ಮತ್ತು ಬೆಕ್ಕಿಗೆ ಹೊಸ ರೀತಿಯ ಮಾರುಕಟ್ಟೆ ಕೆಲವೆ ದಿನಗಳಲ್ಲಿ ನಿರ್ಮಾಣ ಆಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ