ಮೊಂಬತ್ತಿ ಬೆಳಗಿಸಿ ಅಂದ್ರೆ ಸ್ಟಂಟ್ ಮಾಡಿದ, ನೋಡ ನೋಡ್ತಿದಂತೆ ಮೈಗೆಲ್ಲಾ ಬೆಂಕಿ!

Published : Apr 08, 2020, 03:57 PM ISTUpdated : Apr 08, 2020, 05:59 PM IST
ಮೊಂಬತ್ತಿ ಬೆಳಗಿಸಿ ಅಂದ್ರೆ ಸ್ಟಂಟ್ ಮಾಡಿದ, ನೋಡ ನೋಡ್ತಿದಂತೆ ಮೈಗೆಲ್ಲಾ ಬೆಂಕಿ!

ಸಾರಾಂಶ

ದೀಪ ಬರೆಗಿಸಿ ಅಂದ್ರೆ ಪಟಾಕಿ, ಮೆರವಣಿಗೆ| ಇಲ್ಲೊಬ್ಬ ಸ್ಟಂಟ್ ಮಾಡಲು ಹೋಗಿ ಕೂದಲೆಳೆ ಅಂತರದಲ್ಲಿ ಪಾರು| ವೈರಲ್ ಆಯ್ತು ವಿಡಿಯೋ

ನವದೆಹಲಿ(ಏ.08): ಕೊರೋನಾ ವೈರಸ್ ಅಟ್ಟಹಾಸ ಎಲ್ಲೆಡೆ ಕಂಡು ಬರುತ್ತಿದೆ. ಹೀಗಿರುವಾಗ ಪ್ರಧಾನಿ ನರೇದ್ರ ಮೋದಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ದೀಪ ಬೆಳಗಿಸುವಂತೆ ಕರೆ ನೀಡಿದ್ದರು. ಹಹೀಗಿರುವಾಗ ದೇಶದ ಮೂಲೆ ಮೂಲೆಗಳಲ್ಲೂ ಜನರು ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು.  ಆದರೆ ಈ ನಡುವೆ ಹಲವಾರು ಕಡೆ ಪಟಾಕಿಯನ್ನೂ ಜನರು ಸಿಡಿಸಿದ್ದರು. ಆದರೆ ಇವೆಲ್ಲದರ ನಡುವೆ ವ್ಯಕ್ತಿಯೊಬ್ಬ ಪಟಾಕಿ, ದೀಪ ಬಿಟ್ಟು ಸ್ಟಂಟ್ ಮಾಡಲು ಹೋಗಿ ಕೂದಲೆಳೆ ಅಂತರದ್ಲಿ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಬಾಯಿಯಿಂದ ಎಂಕಿ ಉಗುಳುವ ಸಾಹಸಕ್ಕೆ ಮುಂದಾಇರುವ ದೃಶ್ಯಗಳಿವೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ವ್ಯಕ್ತಿ ಮೇಣದ ಬತ್ತಿಯ ಸಹಾಯದಿಂದ ಬಾಯಿಯಿಂದ ಬೆಂಕಿಯುಗುಳುವ ಸಾಹಸ ಮಾಡಲು ಮುಂದಾಗುತ್ತಾನೆ. ಆದರೆ ಈ ವೇಳೆ ಅಚಾನಕ್ಕಾಗಿ ಬೆಂಕಿ ಆತನ ಬಾಯಿಗೇ ತಾಗುತ್ತದೆ. ಇದನ್ನು ಗಮನಿಸಿದ ಸ್ಥಳೀಯರು ಓಡೋಡಿ ಬಂದು ಆತನನ್ನು ಪಾರು ಮಾಡುತ್ತಾರೆ.

ಇನ್ನು ದೀಪ ಹಚ್ಚುವಂತೆ ಪ್ರಧಾನಿ ಕರೆ ನೀಡಿದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಒಗ್ಗಟ್ಟು ಪ್ರದರ್ಶನವಾಯ್ತು. ಹೀಗಿರುವಾಗಲೇ ಮೋದಿ ಕರೆಗೆ ಪಟಾಕಿ ಸಿಡಿಸಿ, ಪಂಜಿನ ಮೆರವಣಿಗೆ ನಡೆಸಿದ ದೃಶ್ಯಗಳೂ ವೈರಲ್ ಅಗಿದ್ದವು. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?