ಕೋವಿಡ್‌ ಲಸಿಕೆ ಖರೀದಿಯ ರಾಜ್ಯಗಳ ಆಶಯಕ್ಕೆ ಹಿನ್ನಡೆ!

Published : May 24, 2021, 10:10 AM ISTUpdated : May 24, 2021, 11:38 AM IST
ಕೋವಿಡ್‌ ಲಸಿಕೆ ಖರೀದಿಯ ರಾಜ್ಯಗಳ ಆಶಯಕ್ಕೆ ಹಿನ್ನಡೆ!

ಸಾರಾಂಶ

* ಕೋವಿಡ್‌ ಲಸಿಕೆ ಖರೀದಿಯ ರಾಜ್ಯಗಳ ಆಶಯಕ್ಕೆ ಹಿನ್ನಡೆ * ರಾಜ್ಯಗಳಿಗೆ ನೇರ ಪೂರೈಕೆ ಇಲ್ಲ * ಕೇಂದ್ರದ ಜೊತೆ ಮಾತ್ರವೇ ಮಾತುಕತೆ: ಮಾಡೆರ್ನಾ

ಚಂಡೀಗಢ(ಮೇ.24): ಅಂತಾರಾಷ್ಟ್ರೀಯ ಲಸಿಕೆ ಉತ್ಪಾದನೆ ಕಂಪನಿಗಳ ಜೊತೆ ನೇರ ಒಪ್ಪಂದದ ಮೂಲಕ ಇಡೀ ದೇಶಾದ್ಯಂತ ಉದ್ಭವವಾಗಿರುವ ಕೋವಿಡ್‌ ಲಸಿಕೆಯ ಹಾಹಾಕಾರ ತಪ್ಪಿಸಬೇಕೆಂಬ ರಾಜ್ಯಗಳ ಮಹತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ.

ಅಮೆರಿಕ ಮೂಲದ ಲಸಿಕೆ ಉತ್ಪಾದನೆಯ ‘ಮಾಡೆರ್ನಾ’ ಕಂಪನಿಯು ನೇರವಾಗಿ ಪಂಜಾಬ್‌ ಸರ್ಕಾರಕ್ಕೆ ಲಸಿಕೆಯನ್ನು ನೀಡಲು ನಿರಾಕರಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ‘ಮಾಡೆರ್ನಾ’, ತಮ್ಮ ಕಂಪನಿಯ ನೀತಿ-ನಿರ್ಣಯಗಳ ಪ್ರಕಾರ ಕೇಂದ್ರ ಸರ್ಕಾರದ ಹೊರತಾಗಿ ಯಾವುದೇ ರಾಜ್ಯ ಸರ್ಕಾರ ಅಥವಾ ಖಾಸಗಿ ಕಂಪನಿಗಳ ಜೊತೆ ಲಸಿಕೆ ರಫ್ತು ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗದು ಎಂದು ಹೇಳಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಲಸಿಕೆ ಕಂಪನಿಗಳ ಜೊತೆ ನೇರ ಒಪ್ಪಂದದ ಮೂಲಕ ತಮಗೆ ಅಗತ್ಯವಿರುವಷ್ಟುಲಸಿಕೆಗಳನ್ನು ಖರೀದಿಸಬೇಕೆಂಬ ರಾಜ್ಯಗಳ ಆಕಾಂಕ್ಷೆಗೆ ಹಿನ್ನಡೆಯಾದಂತಾಗಿದೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ರಾಜ್ಯದ ಎಲ್ಲರಿಗೂ ಶೀಘ್ರದಲ್ಲೇ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಪಂಜಾಬ್‌ ಸರ್ಕಾರ ಲಸಿಕೆಗಳನ್ನು ಪೂರೈಸುವಂತೆ ರಷ್ಯಾದ ಸ್ಪುಟ್ನಿಕ್‌, ಅಮೆರಿಕದ ಫೈಝರ್‌, ಮಾಡೆರ್ನಾ, ಜಾನ್ಸನ್‌ ಅಂಡ್‌ ಜಾನ್ಸನ್‌ ಲಸಿಕೆಯ ಕಂಪನಿಗಳಿಗೆ ಕೋರಿಕೊಂಡಿದೆ. ಆದರೆ ಈ ಎಲ್ಲಾ ಕಂಪನಿಗಳ ಪೈಕಿ ಮಾಡೆರ್ನಾ ಕಂಪನಿ ಮಾತ್ರವೇ, ರಾಜ್ಯಗಳಿಗೆ ಲಸಿಕೆ ಪೂರೈಸಲು ತಮ್ಮ ಕಂಪನಿಯ ಪಾಲಿಸಿಯಲ್ಲಿ ಅನುಮತಿಯಿಲ್ಲ ಎಂದು ಹೇಳಿದೆ. ಆದರೆ ಇತರೆ ಕಂಪನಿಗಳು ಈವರೆಗೆ ಉತ್ತರಿಸಿಲ್ಲ ಎಂದು ಪಂಜಾಬ್‌ನ ಲಸಿಕೆ ಕಾರ‍್ಯಕ್ರಮದ ನೋಡಲ್‌ ಅಧಿಕಾರಿ ವಿಕಾಸ್‌ ಗಾರ್ಗ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್