
ಭೋಪಾಲ್(ಮೇ.24): 1952ರಲ್ಲಿ ಭಾರತದಲ್ಲಿ ಅವಸಾನಗೊಂಡ ಚೀತಾ ಸಂತತಿಯನ್ನು ಮರಳಿ ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 5 ಗಂಡು ಮತ್ತು 5 ಹೆಣ್ಣು ಚೀತಾಗಳು ಮುಂದಿನ ನವೆಂಬರ್ನಲ್ಲಿ ಭಾರತಕ್ಕೆ ಆಗಮಿಸಲಿವೆ. ಆಫ್ರಿಕಾದಿಂದ ತರಲಾಗುವ ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇಟ್ಟು ಸಂತತಿ ಅಭಿವೃದ್ಧಿಗೆ ಯತ್ನಿಸಲಾಗುವುದು. ಭಾರತದ ಕಟ್ಟಕಡೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಚೀತಾ ಸಂತತಿ ಭಾರತದಲ್ಲಿ ಅವಸಾನಗೊಂಡಿದೆ ಎಂದು ಘೋಷಿಸಲಾಗಿತ್ತು. ಭಾರತದಲ್ಲಿ ಚೀತಾ ಸಂತತಿಯನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಫ್ರಿಕಾದಿಂದ ಚೀತಾವನ್ನು ಆಮದು ಮಾಡಿಕೊಳ್ಳುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಚೀತಾಗಳನ್ನು ತರಲು ವ್ಯವಸ್ಥೆ ಮಾಡಲಾಗುತ್ತಿದೆ.
ಇದೇ ಅರಣ್ಯದಲ್ಲಿ ಏಕೆ?
ಮಧ್ಯಪ್ರದೇಶ ಶಿರೋಪುರ್ ಜಿಲ್ಲೆಯ ಚಂಬಲ್ ಪ್ರಾಂತ್ಯದಲ್ಲಿರುವ ಕುನೋ ನ್ಯಾಷನಲ್ ಪಾರ್ಕ್, 750 ಚದರ್ ಕಿ.ಮೀ.ಗೆ ಹರಡಿಕೊಂಡಿದ್ದು, ಚೀತಾಗಳ ಬೇಟೆಗಳಾದ ಚಿಂಕಾರ, ನೀಲಗೈ, ಕಾಡುಹಂದಿ, ಚುಕ್ಕೆ ಜಿಂಕೆ, ಸಂಬಾರ್ ಜಿಂಕೆಗಳ ಆವಾಸ ತಾಣವಾಗಿದೆ. ಈ ಪಾರ್ಕ್ನಲ್ಲಿ ಆಫ್ರಿಕಾದಿಂದ ತಂದ ಚೀತಾಗಳನ್ನು ಸಾಕಲಾಗುತ್ತದೆ
ವಿಶೇಷ ತರಬೇತಿ
ಜುಲೈನಲ್ಲಿ ಭಾರತದ ಅಧಿಕಾರಿಗಳು ಆಫ್ರಿಕಾಕ್ಕೆ ತೆರಳಿ ಭಾರತೀಯ ಪರಿಸ್ಥಿತಿಗೆ ತಕ್ಕಂತೆ ಚೀತಾಗಳ ಸಂತತಿಯನ್ನು ಅಭಿವೃದ್ಧಿಪಡಿಸುವ ಕುರಿತಂತೆ ತರಬೇತಿ ಪಡೆದು ಅಕ್ಟೋಬರ್ ನವೆಂಬರ್ ವೇಳೆಗೆ ಭಾರತಕ್ಕೆ ಚೀತಾಗಳನ್ನು ಕರೆತರಲಿದ್ದಾರೆ ಎಂದು ವಿಜಯ್ ಶಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ