
ಕೋಲ್ಕತ್ತಾ(ಜೂ.16): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಹಾಗೂ ಟಿಎಂಸಿ ಗೆಲುವಿನ ಬಳಿಕವೂ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಹೌದು ಚುನಾವಣಾ ಪ್ರಚಾರ ಭಾಷಣದಲ್ಲಿ ಕಠೋರ ಶಬ್ಧ ಬಳಕೆ ವಿಚಾರವಾಗಿ ಪೊಲೀಸರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಮಮತಾ ಬ್ಯಾನರ್ಜಿ ವಿರುದ್ಧ ಕೆಟ್ಟ ಹಾಗೂ ಅಸಂವಿಧಾನಿಕ ಭಾಷಾ ಪ್ರಯೋಗ ಮಾಡಿರುವ ಆರೋಪವಿದೆ. ಈ ಸಂಬಂಧ ಮಹಾನಗರ ಮಾಣಿಕಲ್ಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾದ್ದು, ಮಿಥುನ್ ದಾ ಅವರನ್ನು ವರ್ಚುವಲ್ ಆಗಿ ವಿಚಾರಣೆಗೊಳಪಡಿಸಲಾಗಿದೆ. ಇನ್ನು ಇಂದು, ಮಂಗಳವಾರ ಮಿಥುನ್ ಚಕ್ರವರ್ತಿಯವರ ಹುಟ್ಟುಹಬ್ಬವಾಗಿದ್ದು, 71 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಮಿಥುನ್ ದಾಗೆ ತಲೆನೋವಾದ ಆ ಎರಡು ಡೈಲಾಗ್
ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಮಿಥುನ್ ಚಕ್ರವರ್ತಿ, ಪಶ್ಚಿಮ ಬಂಗಾಳ ಚುನಾವಣಾ ಸಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಮಿಥುನ್ ದಾ ಎರಡು ಬಂಗಾಳಿ ಡೈಲಾಗ್ಗಳನ್ನು ಬಳಸಿದ್ದರು. 'ಮಾರ್ಬೊ ಎಖಾನೆ ಲ್ಯಾಶ್ ಪೋರ್ಬೆ ಶೋಶೇನ್' ಅಂದರೆ ನಾನು ನಿನ್ನನ್ನು ಕೊಂದರೆ, ದೇಹವು ಸ್ಮಶಾನದಲ್ಲಿ ಬೀಳುತ್ತದೆ ಮತ್ತು 'ಎ ಚೋಬೋಲ್ ಕೀ'ಅಂದರೆ ಹಾವು ಕಡಿತದರೆ ನೀವು ಗೋಡೆ ಮೇಲಿನ ಭಾವಚಿತ್ರವಾಗುವಿರಿ ಎಂದಿದ್ದರು. ಈ ಎರಡು ಡೈಲಾಗ್ಗಳು ಅಸಂವಿಧಾನಿ ಹಾಗೂ ಹಿಂಸೆಗೆ ಪ್ರೇರಣೆ ನೀಡುತ್ತವೆ ಎನ್ನಲಾಗಿದೆ. ಈ ಭಾಷಣದಿಂದ ಹಿಂಸಾಚಾರ ಹುಟ್ಟಿಕೊಂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಹೈಕೋರ್ಟ್ಗೆ ಹೋದರೂ ಸಂಕಷ್ಟ ತಪ್ಪಲಿಲ್ಲ
ಈ ವಿಚಾರವಾಗಿ ಮಿಥುನ್ ದಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಕೂಡಾ ಎಫ್ಐಆರ್ ರದ್ದುಪಡಿಸುವ ಅರ್ಜಿ ನಿರಾಕರಿಸಿದ್ದು, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಆದೇಶಿಸಿದೆ. ಇದೇ ವೇಳೆ ಪೊಲೀಸರಿಗೂ ನಟ ಮಿಥುನ್ ಚಕ್ರವರ್ತಿಯವರ ಇ-ಮೇಲ್ ಇತ್ಯಾದಿಗಳನ್ನು ಸಂಗ್ರಹಿಸಿಡುವಂತೆ ಸೂಚಿಸಿದೆ. ಅಗತ್ಯವಿದ್ದಾಗ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಬಹುದು ಎಂದೂ ತಿಳಿಸಿದೆ. ಅತ್ತ ಮಿಥುನ್ ದಾ ತಾನು ಕೇವಲ ಸಿನಿಮಾ ಡೈಲಾಗ್ ಬಳಸಿದ್ದೆ ಎಂದು ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ