ಬೆಂಗಳೂರು- ಮೈಸೂರು ರೈಲು ಹಳಿ ಮೇಲೆ ನೀರಿನ ಗ್ಲಾಸ್‌ ಇಟ್ಟು ಪರೀಕ್ಷೆ..!

By Kannadaprabha NewsFirst Published Oct 31, 2020, 8:16 AM IST
Highlights

ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ| ಈ ವಿಡಿಯೋ ಟ್ವೀಟ್‌ ಮಾಡಿದ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌| ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ ರೈಲ್ವೆ ಸಚಿವರು|
 

ನವದೆಹಲಿ(ಅ.31): ರೈಲ್ವೆ ಇಲಾಖೆ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲ್ವೆ ಹಳಿಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ. ಕಾಮಗಾರಿಯ ನೈಪುಣ್ಯತೆಯನ್ನು ನೀರು ತುಂಬಿದ ಗಾಜಿನ ಲೋಟದ ಮೂಲಕ ಪರೀಕ್ಷೆ ಮೂಲಕ ಅದು ಜನರ ಮುಂದಿಟ್ಟಿದೆ. 

ಈ ವೇಳೆ ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಈ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮಾಡಿದ್ದು, ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ್ದಾರೆ.

 

The results of intensive track 🛤️ maintenance carried out between Bengaluru & Mysuru in Karanataka are there for everyone to see.

The journey has become so smooth that not even a single drop of water 💧 spilled out of the glass while the train was traveling at high speed. pic.twitter.com/r7aFp55gSA

— Piyush Goyal (@PiyushGoyal)

ಕೊರೋನಾದ ನಡುವೆಯೂ  ದೊಡ್ಡ ಶುಭ ಸಮಾಚಾರ ತಿಳಿಸಿದ ಪಿಯೂಶ್ ಗೋಯಲ್!

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಬೆಂಗಳೂರು- ಮೈಸೂರು ನಡುವಿನ ರೈಲ್ವೆ ಮಾರ್ಗ ಹಾಗೂ ಸೇತುವೆಗಳ ದುರಸ್ತಿ ಕಾಮಗಾರಿಯನ್ನು ಲಾಕ್‌ಡೌನ್‌ ವೇಳೆ ಕೈಗೊಳ್ಳಲಾಗಿತ್ತು.
 

click me!