ಮಿಗ್ 29 ಯುದ್ಧ ವಿಮಾನ ಪತನ: ಜಿಗಿದು ಪಾರಾದ ಪೈಲಟ್

Published : Nov 05, 2024, 10:35 AM IST
ಮಿಗ್ 29 ಯುದ್ಧ ವಿಮಾನ ಪತನ: ಜಿಗಿದು ಪಾರಾದ ಪೈಲಟ್

ಸಾರಾಂಶ

ಆಗ್ರಾದಲ್ಲಿ ಮಿಗ್-29 ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿ ಜಿಗಿದಿದ್ದಾರೆ. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ಶಂಕಿಸಲಾಗಿದೆ.

ಆಗ್ರಾ: ಭಾರತೀಯ ವಾಯಪಡೆಯ ಮಿಗ್-29 ಯುದ್ಧ ವಿಮಾನವು ಸೋಮವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ. ಜೆಟ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಹಾರಾಟದ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೆಟ್‌ನಲ್ಲಿದ್ದ ಪೈಲಟ್ ಜನವಸತಿ ಪ್ರದೇಶದ ಮೇಲೆ ವಿಮಾನ ಬೀಳದಂತೆ ತಡೆದು ಕೆಳಗೆ ಜಿಗಿದಿದ್ದಾರೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಈ ಹಿಂದೆ ಸೆ.2 ರಂದು ಮಿಗ್ -29 ಯುದ್ಧವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಾಜಸ್ಥಾನದ ಬಾಢಮೇರ್ ನಲ್ಲಿ ಪತನಗೊಂಡಿತ್ತು. ಸುದೈವವಶಾತ್ ಯಾವುದೇ ಸಾವುನೋವು ಸಂಭವಿಸಿರಲಿಲ್ಲ. 

ತೆಲುಗರ ಬಗ್ಗೆ ತಮಿಳು ಅಭಿನೇತ್ರಿ ಕಸ್ತೂರಿ ಶಂಕರ್ ಹೇಳಿಕೆ: ವಿವಾದ

ಚೆನ್ನೈ: ತೆಲುಗು ಭಾಷಿಕರು ತಮಿಳುನಾಡಿಗೆ 300 ವರ್ಷಗಳ ಹಿಂದೆ ವಲಸೆ ಬಂದಿದ್ದು, ತಮಿಳು ರಾಣಿಯರ ಸೇವೆ ಸಲ್ಲಿಸುವ ಸಲುವಾಗಿ, ಅವರು ಸೇವಕರಾಗಿ ತಮಿಳು ರಾಜ್ಯಕ್ಕೆ ಬಂದಿದ್ದರು ಎಂದು ತಮಿಳು ನಟಿ ಕಸ್ತೂರಿ ಶಂಕರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಕಸ್ತೂರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸೇರಿ ಅನೇಕ ರಾಜಕೀಯ ನಾಯಕರು ಹಾಗೂ ತೆಲುಗು ಭಾಷಿಕರು ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ, 'ನಾನು ಎಲ್ಲ ತೆಲುಗರ ಬಗ್ಗೆ ಹೇಳಿಲ್ಲ. ಇತಿಹಾಸವನ್ನು ಉಲ್ಲೇಖಿಸಿ ಕೆಲವು ತೆಲುಗರು 300 ವರ್ಷ ಹಿಂದೆ ತಮಿಳುನಾಡಿಗೆ ಬಂದಿದ್ದರ ಬಗ್ಗೆ ಹೇಳಿದ್ದೆ. ಅವರ ಕುಟುಂಬಸ್ಥರು ಈಗ ತಮಿಳುನಾಡಿನಲ್ಲಿ ಇದ್ದು ತಮಿಳರೇ ಆಗಿದ್ದಾರೆ. ಅವರ ಬಗ್ಗೆ ನಾನು ಹೇಳಿಕೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್