'ರಾಜ್ಯಸಭೆ, ಲೋಕಸಭೇಲಿ ಬ್ರಾಹ್ಮಣರಿಗೆ ನಾಯಕತ್ವ'

Kannadaprabha News   | Asianet News
Published : Jan 17, 2020, 10:23 AM IST
'ರಾಜ್ಯಸಭೆ, ಲೋಕಸಭೇಲಿ ಬ್ರಾಹ್ಮಣರಿಗೆ ನಾಯಕತ್ವ'

ಸಾರಾಂಶ

ರಾಜ್ಯ ಸಭೆ ಹಾಗೂ ಲೋಕಸಭೆಯಲ್ಲಿ ಬ್ರಾಹ್ಮಣರಿಗೆ ನಾಯಕತ್ವ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಾಯಾ ಈ ರೀತಿ ನೇಮಕ ಮಾಡಿದ್ದಾರೆ. 


ಲಖನೌ [ಜ.17]: ದಲಿತ ನಾಯಕಿ, ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ರಿತೇಶ್‌ ಪಾಂಡೆ ಅವರನ್ನು ನೇಮಕ ಮಾಡಿದ್ದಾರೆ. 

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಆಯ್ಕೆಯಾದ ಪಾಂಡೆ ಅವರಿಗೆ ಈ ಮಹತ್ವದ ಹೊಣೆ ವಹಿಸಲಾಗಿದೆ. ಇದುವರೆಗೆ ಈ ಹೊಣೆ ಹೊತ್ತಿದ್ದ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಜಾತ್ಯತೀಯ ಜನತಾ ದಳ ಮೂಲದ ಡ್ಯಾನಿಶ್‌ ಅಲಿ ಅವರ ಬದಲಿಗೆ ಪಾಂಡೆಗೆ ಹೊಸ ಹೊಣೆ ವಹಿಸಲಾಗಿದೆ. 

ಈಗಾಗಲೇ ರಾಜ್ಯದಲ್ಲಿ ಪಕ್ಷದ ಘಟಕದ ಅಧ್ಯಕ್ಷರಾಗಿ ಮುಸ್ಲಿಮರು ಇದ್ದಾರೆ. ಹೀಗಾಗಿ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡುವ ಸಲುವಾಗಿ ಬ್ರಾಹ್ಮಣ ಸಮುದಾಯದ ಪಾಂಡೆ ಆಯ್ಕೆ ಮಾಡಲಾಗಿದೆ ಎಂದು ಮಾಯಾ ಹೇಳಿದ್ದಾರೆ. 

ದಲಿತ ದೌರ್ಜನ್ಯ ನಿಲ್ಲದಿದ್ದಲ್ಲಿ ಬೌದ್ಧ ಧರ್ಮ ಸೇರುವೆ : ಮಾಯಾವತಿ...

ಈಗಾಗಲೇ ರಾಜ್ಯಸಭೆಯಲ್ಲೂ ಬಿಎಸ್‌ಪಿ ನಾಯಕರಾಗಿ ಬ್ರಾಹ್ಮಣ ಸಮುದಾಯದವರೇ ಆದ ಎಸ್‌.ಸಿ.ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೇಮಕವು ಮುಂಬರುವ ಚುನಾವಣೆಯಲ್ಲಿ ಮೇಲ್ವರ್ಗದ ಜನರ ಗಮನ ಸೆಳೆಯುವ ಯತ್ನ ಎಂದೇ ವಿಶ್ಲೇಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು