Viral Video: 'ಪಾಪಾ..ಪಾಪಾ..' ಸೈನಿಕ ಅಮ್ಜದ್‌ ಖಾನ್‌ ಮೃತದೇಹದ ಮುಂದೆ ಕರೆದ 1 ವರ್ಷದ ಕಂದ!

Published : Dec 18, 2025, 05:53 PM IST
SOG Amjad Ali Khan

ಸಾರಾಂಶ

Heartbreaking: 1-Year-Old Daughter Calls 'Papa' to Martyred SOG Soldier Amjad Ali Khan ಹುತಾತ್ಮ ಸೈನಿಕನ ಮೃತದೇಹ ಮನೆಗೆ ಬಂದಾಗ ಆತನ 1 ವರ್ಷದ ಪುಟ್ಟ ಮಗಳು ಶವಪೆಟ್ಟಿಗೆಯ ಎದುರು 'ಪಾಪಾ.. ಪಾಪಾ..' ಎಂದು ಕರೆದಿದ್ದು ಎಲ್ಲರ ಕಣ್ಣಾಲಿಗಳನ್ನು ತೇವ ಮಾಡಿದೆ.

ನವದೆಹಲಿ (ಡಿ.18): ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಸೋಹನ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸೈನಿಕ ಅಮ್ಜದ್ ಅಲಿ ಖಾನ್ ಅವರ ಅಂತ್ಯಸಂಸ್ಕಾರ ಡಿಸೆಂಬರ್‌ 16 ರಂದು ನಡೆಯಿತು. ಆದರೆ, ಅಂತ್ಯಸಂಸ್ಕಾರದ ವೇಳೆ ನಿರ್ಮಾಣವಾದ ಭಾವುಕ ಕ್ಷಣ ಇಡೀ ದೇಶದ ಜನರ ಕಣ್ಣಾಲಿ ತೇವ ಮಾಡಿದೆ. ಉಧಮ್‌ಪುರದ ಜಿಲ್ಲಾ ಪೊಲೀಸ್ ಲೈನ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಡಿಜಿಪಿ ನಳಿನ್ ಪ್ರಭಾತ್ ಮತ್ತು ಐಜಿಪಿ ಭೀಮ್ ಸೇನ್ ಟುಟಿ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಪೂಂಚ್‌ನ ಮೆಂಧರ್ ನಿವಾಸಿ ಖಾನ್, ಸೋಮವಾರ ಸಂಜೆ ಮೂರು ಭಯೋತ್ಪಾದಕರ ಗುಂಪಿನೊಂದಿಗೆ ಸಣ್ಣ ಎಸ್‌ಒಜಿ ತಂಡ ನಡೆಸಿದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಸಾವನ್ನಪ್ಪಿದರು.

ಶವಪೆಟ್ಟಿಗೆಯಲ್ಲಿ ಸೈನಿಕ ಅಮ್ಜದ್‌ ಖಾನ್‌ ಮೃತದೇಹ ಮನೆಗೆ ಬಂದಾಗ, ಶವಪೆಟ್ಟಿಗೆಯ ಬಳಿಕ ಆತನ ಒಂದು ವರ್ಷದ ಮಗಳು, 'ಪಾಪಾ..ಪಾಪಾ..ಪಾಪಾ..' ಎಂದು ಮೂರು ಬಾರಿ ಕೂಗಿ ಏಳಿಸುವ ಪ್ರಯತ್ನ ಮಾಡಿದ ಹೃದಯವಿದ್ರಾವಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಕ್ಷಣ ಕುಟುಂಬದವರು ಮಾತ್ರವಲ್ಲ, ಅಲ್ಲಿದ್ದ ಭದ್ರತಾ ಸಿಬ್ಬಂದಿಗಳ ಕಣ್ಣಿನಲ್ಲೂ ನೀರು ತರುವಂತೆ ಮಾಡಿತು.

ಎನ್‌ಕೌಂಟರ್‌ ಆಗಿದ್ದು ಹೇಗೆ?

ಡಿಸೆಂಬರ್ 15 ರ ಸಂಜೆ ಭದ್ರತಾ ಪಡೆಗಳು ಮಜಲ್ಟಾದ ದಟ್ಟ ಅರಣ್ಯ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಈ ಘಟನೆ ಪ್ರಾರಂಭವಾಯಿತು. ಎಲೈಟ್‌ SOG ಘಟಕದ ಒಂದು ಸಣ್ಣ ತಂಡವು ಕಷ್ಟಕರವಾದ ಬೆಟ್ಟದ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆಂದು ನಂಬಲಾದ ಮೂವರು ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಿತು. ಆರಂಭಿಕ ಗುಂಡಿನ ಚಕಮಕಿಯಲ್ಲಿ, ಭಾರತೀಯ ಮೀಸಲು ಪೊಲೀಸ್ (IRP) ನ 22 ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಅಮ್ಜದ್ ಅಲಿ ಖಾನ್ ತೀವ್ರವಾಗಿ ಗಾಯಗೊಂಡರು.

ಭಾರೀ ಗುಂಡಿನ ದಾಳಿಯ ನಡುವೆಯೂ ಖಾನ್ ಅವರನ್ನು ಸ್ಥಳಾಂತರಿಸಲು ಅವರ ಸಹೋದ್ಯೋಗಿಗಳು ಹತಾಶ ಪ್ರಯತ್ನಗಳನ್ನು ಮಾಡಿದರೂ, ಅತಿಯಾದ ರಕ್ತದ ಸ್ರಾವದಿಂದಾಗಿ ಖಾನ್ ನಿಧನರಾದರು. ಪಲಾಯನ ಮಾಡುತ್ತಿರುವ ಉಗ್ರರನ್ನು ಪತ್ತೆಹಚ್ಚಲು ಸೇನೆ, ಸಿಆರ್‌ಪಿಎಫ್ ಮತ್ತು ಜೆ & ಕೆ ಪೊಲೀಸರು ಅರಣ್ಯವನ್ನು ಸುತ್ತುವರೆದಿರುವುದರಿಂದ ಪ್ರಸ್ತುತ ಕಾರ್ಯಾಚರಣೆ ಮುಂದುವರೆದಿದೆ.

ಅಮ್ಜದ್ ಅಲಿ ಖಾನ್ ಕೇವಲ ಒಬ್ಬ ಸೈನಿಕನಿಗಿಂತ ಹೆಚ್ಚಿನವರಾಗಿದ್ದರು. ಅವರು ಇಡೀ ಕುಟುಂಬದ ಏಕೈಕ ಜೀವನಾಧಾರವಾಗಿದ್ದರು ಮತ್ತು ಮೆಂಧರ್‌ನ ಪಠಾಣತೀರ್ ಗ್ರಾಮದ ಪ್ರೀತಿಯ ನಿವಾಸಿಯಾಗಿದ್ದರು. ತ್ರಿವರ್ಣ ಧ್ವಜ ಹೊದಿಸಿದ ಅವರ ಶವಪೆಟ್ಟಿಗೆಯು ಅವರ ಹುಟ್ಟೂರು ತಲುಪುತ್ತಿದ್ದಂತೆ, ಸಾವಿರಾರು ಸ್ಥಳೀಯರು ಅಂತಿಮ ನಮನ ಸಲ್ಲಿಸಲು ನೆರೆದಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?
ಓಲಾ ಎಲೆಕ್ಟ್ರಿಕ್ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಕುಸಿತ, ಹೂಡಿಕೆದಾರರಿಗೆ ಅಪಾರ ನಷ್ಟ! ಕಾರಣವೇನು?