
ಚಂಡೀಘಡ(ಜ.15): ಕಾರ್ ಟ್ಯಾಕ್ಸಿ, ವ್ಯಾನ್ ಟ್ಯಾಕ್ಸಿ ಸೇರಿದಂತೆ ಹಲವು ಟ್ಯಾಕ್ಸಿ ಸೇವೆಗಳು ಭಾರತದೆಲ್ಲೆಡೆ ಲಭ್ಯವಿದೆ. ಇದೀಗ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಏರ್ ಟ್ಯಾಕ್ಸಿ ಆರಂಭಿಸಲಾಗಿದೆ. ಸಣ್ಣ ವಿಮಾನ ಈ ಸೇವೆಗೆ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ಈ ಸೇವೆ ಚಂಡೀಘಡದಲ್ಲಿ ಆರಂಭಗೊಂಡಿದೆ.
ಲೇಡಿ ಪೈಲಟ್ಸ್ಗಳಿಂದ ಅತಿ ದೂರದ ರೂಟ್ ಕವರ್..ಎಲ್ಲಿಂದ -ಬೆಂಗಳೂರಿಗೆ?.
ಮೊದಲ ಹಂತದಲ್ಲಿ ಚಂಢೀಘಡದಿಂದ ಹಿಸಾರ್ ಪ್ರಯಾಣಕ್ಕೆ ಏರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ನೂತನ ಏರ್ ಟ್ಯಾಕ್ಸಿ ಸೇವೆಯನ್ನು ಉದ್ಘಾಟನೆ ಮಾಡಿದ್ದಾರೆ. ಹರ್ಯಾಣ ಸರ್ಕಾರದ ಯೋಜನೆ ಇದಾಗಿದ್ದು, ಶೀಘ್ರದಲ್ಲೇ ಹಿಮಾಚಲ ಪ್ರದೇಶ ಸೇರಿದೆಂತೆ ಹಲವೆಡೆ ವಿಸ್ತರಣೆಗೊಳ್ಳುತ್ತಿದೆ.
4 ಸೀಟಿನ ಸಣ್ಣ ವಿಮಾನ ಏರ್ ಟ್ಯಾಕ್ಸಿ ಸೇವೆಗೆ ಬಳಸಲಾಗುತ್ತಿದೆ. ಮುಂದಿನ ವಾರ ಹಿಸಾರ್ನಿಂದ ಡೆಹ್ರಡೂನ್, ಹಿಸಾರ್ನಿಂದ ಧರ್ಮಶಾಲಾ, ಕುಲು, ಮನಾಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಏರ್ ಟ್ಯಾಕ್ಸಿ ಸೇವೆ ವಿಸ್ತರಣೆಯಾಗಲಿದೆ ಎಂದು ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ