ಗೋಡ್ಸೆ, ಮೋದಿ ಸಿದ್ಧಾಂತ ಒಂದೇ: ರಾಹುಲ್ ವಾಗ್ದಾಳಿ!

Suvarna News   | Asianet News
Published : Jan 30, 2020, 02:13 PM ISTUpdated : Jan 30, 2020, 06:09 PM IST
ಗೋಡ್ಸೆ, ಮೋದಿ ಸಿದ್ಧಾಂತ ಒಂದೇ: ರಾಹುಲ್ ವಾಗ್ದಾಳಿ!

ಸಾರಾಂಶ

ಮೋದಿ ಗೋಡ್ಸೆ ಸಿದ್ಧಾಂತದ ಪ್ರತಿಪಾದಕ ಎಂದ ರಾಹುಲ್ ಗಾಂಧಿ| 'ಪ್ರಧಾನಿ ಮೋದಿ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಅನುಯಾಯಿ'| 'ಗೋಡ್ಸೆಯನ್ನು ನಂಬುವುದಾಗಿ ಹೇಳುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ'| 'ನಾನು ಭಾರತೀಯನೋ ಅಥವಾ ಅಲ್ಲವೋ ಎಂದು ನಿರ್ಧರಿಸಲು ಮೋದಿ ಯಾರು'?| 'ಎನ್‌ಆರ್‌ಸಿ ಹಾಗೂ ಸಿಎಎ ಜಾರಿಯಿಂದ ಜನರಿಗೆ ಉದ್ಯೋಗ ಸಿಗುವುದಿಲ್ಲ'|

ವಯನಾಡ್(ಜ.30): ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ  ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ಮೋದಿ ಇಬ್ಬರ ಸಿದ್ಧಾಂತ ಒಂದೇ ಆಗಿದ್ದು, ಇದನ್ನು ಬಹಿರಂಗವಾಗಿ ಹೇಳುವ ಧೈರ್ಯ ಪ್ರಧಾನಿಗೆ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇರಳದ ವಯನಾಡ್‌ನಲ್ಲಿ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಮಾತನಾಡಿರುವ ರಾಹುಲ್,  ತಾವು ಗೋಡ್ಸೆಯನ್ನು ನಂಬುವುದಾಗಿ ಹೇಳುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ ಎಂದು ಲೇವಡಿ ಮಾಡಿದರು. 

"

ಗಾಂಧಿ ಅವರನ್ನು ಕೊಂದ ಗೋಡ್ಸೆ ನಂಬುತ್ತಿದ್ದ ಸಿದ್ಧಾಂತವನ್ನೇ ಪ್ರಧಾನಿ ಮೋದಿ ಪಾಲಿಸುತ್ತಿದ್ದು, ಭಾರತವನ್ನು ಅಸಹಿಷ್ಣು ರಾಷ್ಟ್ರವನ್ನಾಗಿ ಪರಿವರ್ತಿಸಲು ಹೊರಟಿದ್ದಾರೆ ಎಂದು ಈ ವೇಳೆ ರಾಹುಲ್ ಕಿಡಿಕಾರಿದರು. 

ಸಿಎಎ ಜಾರಿ ಮೂಲಕ ಭಾರತೀಯರು ತಾವು ಭಾರತೀಯರೆಂದು ಸಾಬೀತುಪಡಿಸುವಂತೆ ಮಾಡಲಾಗುತ್ತಿದೆ. ನಾನು ಭಾರತೀಯನೋ ಅಥವಾ ಅಲ್ಲವೋ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಎಂದು ರಾಹುಲ್ ಹರಿಹಾಯ್ದರು. 

ಶಹೀದ್ ದಿವಸ್: ಗಾಂಧಿ ಸಮಾಧಿಗೆ ಪ್ರಧಾನಿ ಮೋದಿ ನಮನ

ಜನತೆ ನಿರುದ್ಯೋಗ ಪ್ರಶ್ನಿಸಿದರೆ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತದೆ. ಎನ್‌ಆರ್‌ಸಿ ಹಾಗೂ ಸಿಎಎ ಜಾರಿಯಿಂದ ಜನರಿಗೆ ಉದ್ಯೋಗ ಸಿಗುವುದಿಲ್ಲ.  ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ಸುಡುವುದರಿಂದ ಉದ್ಯೋಗ ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ