
ಕೊಲ್ಕತ್ತಾ(ಮಾ.05): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾ ಕ್ಯಾಂಟೀನ್ ಯೋಜನೆ ಆರಂಭಿಸಿದ್ದಾರೆ. ಫೆಬ್ರವರಿಯಲ್ಲಿ ಯೋಜನೆ ಲಾಂಚ್ ಮಾಡಲಾಗಿದೆ.
ಇದೀಗ ಮಾ ಕ್ಯಾಂಟೀನ್ನಲ್ಲಿ 5 ರೂಪಾಯಿಗೆ ಆಹಾರ ಒದಗಿಸಲಾಗುತ್ತಿದೆ. ಕ್ಯಾಂಟೀನ್ಗಳು 12.30 ರಿಂದ 3 ಗಂಟೆಯ ತನಕ ತೆರೆದಿರಲಿದೆ. ಅನ್ನ, ದಾಲ್, ಸಾರು, ಮೊಟ್ಟೆ ಸಾರನ್ನೂ ನೀಡಲಾಗುತ್ತಿದೆ. ಕ್ಯಾಂಟೀನ್ ಭಾರೀ ಫೇಮಸ್ ಆಗಿದ್ದು ಕ್ಯಾಂಟೀನ್ ಮುಚ್ಚುವ ಮುನ್ನವೇ ಆಹಾರ ಖಾಲಿಯಾಗುತ್ತಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!
ಆಹಾರ ಚೆನ್ನಾಗಿದೆ. ನಾವೆಲ್ಲರೂ ಆಹಾರ 5 ರೂಪಾಯಿಗೆ ಪಡೆಯುತ್ತಿದ್ದೇವೆ. ಇಲ್ಲದಿದ್ದರೆ ಪ್ರತಿದಿನ ಊಟಕ್ಕೆ 35 ರೂಪಾಯಿ ವ್ಯಯಿಸುತ್ತಿದೆ. ಈಗ ಹೆಚ್ಚು ಹಣ ಸೇವ್ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಜಾಕಿರ್ ನಾಸ್ಕರ್.
ಆಹಾರ ಪಡೆಯಲು ಸಾಲಿನಲ್ಲಿದ್ದ ಇತರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಈ ಯೋಜನೆ ಅನುಷ್ಠಾನಗೊಳಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಶ್ಲಾಘಿಸಿ ಆಹಾರ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.
ಚಿನ್ನ ಸಾಲ ಮನ್ನಾ: ಚುನಾವಣೆ ಪ್ರಕಟಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಭರ್ಜರಿ ಗಿಫ್ಟ್!
ಟಿಎಂಸಿ ಎಂಪಿ ಪ್ರತಿಕ್ರಿಯಿಸಿ ಇದು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆ ಎಂದಿದ್ದಾರೆ. ಚುನಾವಣೆ ಸಮೀಪಿಸುವಾಗಲೇ ಯೋಜನೆ ಆರಂಭಿಸಿದ್ದರ ಬಗ್ಗೆ ಪ್ರತಿಕ್ರಿಯಸಿ, ಚುನಾವಣೆಗೆ ಮೊದಲು ಅಲ್ಲದಿದ್ದರೆ, ಮತ್ತೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ