ಮಹಾ ಸಾರಿಗೆಯಿಂದ ರಾಜ್ಯ ಸಾರಿಗೆ ನಿಗಮಕ್ಕೆ ಧಮ್ಕಿ

Kannadaprabha News   | Asianet News
Published : Feb 22, 2021, 08:10 AM IST
ಮಹಾ ಸಾರಿಗೆಯಿಂದ ರಾಜ್ಯ ಸಾರಿಗೆ ನಿಗಮಕ್ಕೆ ಧಮ್ಕಿ

ಸಾರಾಂಶ

ಪದೇ ಪದೇ ಕರ್ನಾಟಕ ಮೇಲೆ ಹರಿಹಾಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಸಾರಿಗೆ ನಿಗಮದ ವಿರುದ್ಧವೂ ಕಾಲು ಕೆದರಿ ನಿಂತಿದೆ. 

 ಬೆಳಗಾವಿ (ಫೆ.22):   ಗಡಿ ವಿಚಾ​ರ​ವಾಗಿ ಮಹಾರಾಷ್ಟ್ರದ ಮುಖ್ಯ​ಮಂತ್ರಿ, ಶಿವ​ಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಸೇರಿ ಇತರ ನಾಯಕರು ಕರ್ನಾ​ಟ​ಕದ ಜತೆ​ಗೆ ಕಾಲು ಕೆದರಿ ಜಗಳಕ್ಕೆ ನಿಂತಿ​ರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಸಾರಿಗೆ ನಿಗಮವು ಬಸ್‌​ಗಳ ನಿಲು​ಗಡೆ ವಿಚಾ​ರ​ವಾಗಿ ನಮ್ಮ ವಾಯುವ್ಯರಸ್ತೆ ಸಾರಿಗೆ ನಿಗಮಕ್ಕೆ ಅಧಿಕೃತವಾಗಿ ಬೆದ​ರಿಕೆ ಪತ್ರ​ವೊಂದನ್ನು ರವಾ​ನಿ​ಸಿ​ದೆ.

ಕರ್ನಾಟಕದ ಸಾರಿಗೆ ನಿಗಮದಲ್ಲಿ ಪರ್ಮಿಟ್‌ ಇಲ್ಲದ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೆ, ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದು ಅಂತಾರಾಜ್ಯ ಒಪ್ಪಂದಗಳ ಸ್ಪಷ್ಟಉಲ್ಲಂಘ​ನೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ 5 ಜಿಲ್ಲೇಲಿ ಲಾಕ್ಡೌನ್‌, ಕರ್ನಾಟಕಕ್ಕೆ ಇದು ಎಚ್ಚರಿಕೆ ಗಂಟೆ! ...

ಮಹಾ​ರಾ​ಷ್ಟ್ರದ ಮೀರಜ್‌ನ ಶಾಸ್ತ್ರಿ ವೃತ್ತದಲ್ಲಿ ಬಸ್‌ಗಳ ನಿಲುಗಡೆಯೇ ಇಲ್ಲ. ಆದರೆ, ಕರ್ನಾಟಕದ ಪರ್ಮಿಟ್‌ ಇಲ್ಲದ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿ​ದ್ದು, ಇದ​ರಿಂದ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ನಷ್ಟ​ವಾ​ಗು​ತ್ತಿದೆ. ಇದನ್ನು ತಡೆಯದಿದ್ದರೆ ಫೆ.23ರಂದು ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಆರೋ​ಪಿಸಿ ಶಿವಸೇನೆ ಸಾಂಗ್ಲಿ ಜಿಲ್ಲಾ ಘಟಕ ಅಲ್ಲಿನ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಇದನ್ನು ಆಧ​ರಿಸಿ ಮಹಾ​ರಾ​ಷ್ಟ್ರದ ಸಾರಿಗೆ ನಿಗಮದ ಅಧಿ​ಕಾ​ರಿ​ಗಳು ವಾಯುವ್ಯ ಸಾರಿಗೆಯ ಚಿಕ್ಕೋಡಿ ವಿಭಾಗದ ಅಧಿಕಾರಿಗಳಿಗೆ ಫೆ.18ರಂದು ಎಚ್ಚ​ರಿ​ಕೆಯ ಪತ್ರ ಬರೆ​ದಿ​ದ್ದಾ​ರೆ.

ಪರ್ಮಿಟ್‌ ಇಲ್ಲದ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಕಳಿಸಬಾರದು. ಒಂದು ವೇಳೆ ಕಳಿಸಿದಲ್ಲಿ ಶಿವಸೇನೆಯಿಂದಾ​ಗುವ ಪರಿಣಾಮಗಳಿಗೆ ನೀವೇ ಹೊಣೆ ಎಂದು ಬೆದರಿಕೆ ಧಾಟಿಯಲ್ಲಿ ಪತ್ರ​ದಲ್ಲಿ ಹೇಳಿ​ಕೊಂಡಿ​ದ್ದಾ​ರೆ.

ಕರ್ನಾಟಕದ ಸಾರಿಗೆ ನಿಗಮದಲ್ಲಿ ಪರ್ಮಿಟ್‌ ಇಲ್ಲದ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೆ, ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದು ಅಂತಾರಾಜ್ಯ ಒಪ್ಪಂದಗಳ ಸ್ಪಷ್ಟಉಲ್ಲಂಘ​ನೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜತೆಗೆ, ಸಾರಿಗೆ ಸಚಿ​ವರೂ ಆದ ಉಪ ಮುಖ್ಯ​ಮಂತ್ರಿ ಈ ವಿಚಾ​ರ​ವನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸ​ಬೇ​ಕು. ಮಹಾ​ರಾ​ಷ್ಟ್ರಕ್ಕೆ ಲಿಖಿತ​ವಾ​ಗಿಯೇ ಪ್ರತಿ​ಭ​ಟನೆ ದಾಖ​ಲಿ​ಸ​ಬೇಕು ಎಂದು ಆಗ್ರ​ಹಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ