ಮುಂಬೈ(ಏ. 23) ಮಹಾರಾಷ್ಟ್ರದಲ್ಲಿ ಕರೋನಾ ಅಟ್ಟಹಾಸ ಮುಂದುವರಿದಿದೆ. ಮಹಾರಾಷ್ಟ್ರದ ವಸತಿ ಸಚಿವ ಜೀತೇಂದ್ರ ಅವದ್ ಅವರಿಗೂ ಕೊರೋನಾ ಸೋಂಕು ತಗುಲಿದೆ. ಬುಧವಾರ ತಪಾಸಣೆ ಮಾಡಿದಾಗ ನೆಗೆಟಿವ್ ಬಂದಿತ್ತು. ಈಗ ಪಾಸಿಟಿವ್ ಬಂದಿದ್ದು ಆತಂಕ ಹೆಚ್ಚಾಗಿದೆ.
ಬಿಜೆಪಿಯ ಕರಾವಳಿ ಭೀಷ್ಮನಿಗೆ ಪ್ರಧಾನಿ ಮೋದಿ ದೂರವಾಣಿ ಕರೆ
ಜೀತೇಂದ್ರ ಅವರ ಮನೆಯ ಹೌಸ್ ಕೀಪಿಂಗ್ ಕೆಲಸಗಾರರು ಮತ್ತು ಐವರು ಭದ್ರತಾ ಸಿಬ್ಬಂದಿಯಲ್ಲಿ ಕೊರೋನಾ ಇರುವುದು ದೃಢವಾಗಿತ್ತು.
ಆದರೆ ಅನೇಕ ದಿನಗಳಿಂದ ಸಚಿವರು ಹೋಂ ಕ್ವಾರಂಟೈನ್ ನಲ್ಲಿ ಇದ್ದರು'. ಈ ಕಾರಣದಿಂದ ಉಳಿದವರಿಗೆ ಸೋಂಕು ತಗಲುವ ಅಪಾಯ ಕಡಿಮೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟ ಮುಂದುವರಿಸಿಕೊಂಡೇ ಸಾಗುತ್ತಿದೆ. ದೇಶದ ದೃಷ್ಟಿಯಲ್ಲಿ ರೆಡ್ ಝೋನ್ ನಲ್ಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಪಾಸಿಟಿವ್ ಸಂಖ್ಯೆ 450ರ ಬಳಿ ಬಂದು ನಿಂತಿದೆ. ದೇಶಲ್ಲಿ 20 ಸಾವಿರ ಜನರನ್ನು ದಾಟಿ ಮುಂದಕ್ಕೆ ಸಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ