
ಮುಂಬೈ(ಡಿ.25): ಮಹರಾಷ್ಟ್ರ ನಗರಾಭಿವೃದ್ಧಿ ಸಚಿವ ಎಕನಾಥ್ ಶಿಂಧೆ ಕಾರು ಅಪಘಾತವಾಗಿದೆ. ವಾಶಿ ಟೋಲ್ಗೇಟ್ ಬಳಿ ಸಚಿವ ಎಕನಾಥ್ ಶಿಂಧೆ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸಚಿವರ ಕೈ ಸೇರಿದಂತೆ ಸಣ್ಣ ಪುಟ್ಟ ಗಾಯಗಳಾಗಿದೆ.
ಕರ್ನಾಟಕ ಮಾಜಿ ಸಚಿವರ ಅಪಹರಣ ಯತ್ನ? ಕಾರು ಫಾಲೋ ಮಾಡಿದ ಅಪರಿಚಿತರು
ಕಾರ್ಯಕ್ರಮದ ನಿಮಿತ್ತ ಎಕನಾಥ್ ಶಿಂಧೆ ಮುಂಬೈನಿಂದ ವಾಶಿಗೆ ತೆರಳಿದ್ದರು. ಸಂಜೆ 4.30ಕ್ಕೆ ವಾಶಿಯಿಂದ ಮತ್ತೆ ಮುಂಬೈಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಈ ಕುರಿತು ನವಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಿಂದ ಸಚಿವರ ಫಾರ್ಚುನರ್ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.
ಟೋಲ್ ಗೇಟ್ ಬಳಿ ಕಾರು ಅಪಘಾತವಾಗಿದೆ. ಆದರೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಸುರಕ್ಷಿತವಾಗಿದ್ದೇನೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಸಚಿವರ ಕಾರು ಅಪಘಾತ ಪ್ರಕರಣ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ