ಕೊರೋನಾ ಏರಿಕೆ: ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

Published : Mar 13, 2021, 08:28 AM IST
ಕೊರೋನಾ ಏರಿಕೆ: ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

ಸಾರಾಂಶ

 ರಾಜ್ಯದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ| ಮಹಾ ಕೇಸು ಹೆಚ್ಚಳಕ್ಕೆ ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

ಮುಂಬೈ(ಮಾ.13): ರಾಜ್ಯದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ ಕಾಣುತ್ತಿರುವುದರ ಹಿಂದೆ ಕಳೆದ ಜನವರಿಯಲ್ಲಿ ಪ್ರಕಟವಾದ ಗ್ರಾಮ ಪಂಚಾಯತ್‌ ಚುನಾವಣೆಯ ಫಲಿತಾಂಶ, ರಾಜ್ಯದ ಹಲವೆಡೆ ನಡೆದ ರಾಜಕೀಯ ಸಭೆ ಮತ್ತು ಜನರ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ತಜ್ಞರು ದೂರಿದ್ದಾರೆ.

12000 ಗ್ರಾಮಗಳನ್ನು ಒಳಗೊಂಡ ಗ್ರಾ.ಪಂ ಪಲಿತಾಂಶ ಜನವರಿ 3ನೇ ವಾರದಲ್ಲಿ ಪ್ರಕಟವಾಗಿತ್ತು. ಈ ವೇಳೆ ಸಂಭ್ರಮಾಚರಣೆ ಸೇರಿದಂತೆ ನಾನಾ ಕಾರಣಗಳಿಗಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದರು. ಇದು ಸೋಂಕು ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೋವಿಡ್‌ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿರುವ ಡಾ. ಸುಭಾಷ್‌ ಸಲುಂಕೆ ಹೇಳಿದ್ದಾರೆ.

ಇನ್ನು ಮುಂಬೈ ಮೂಲದ ರಾಜಕೀಯ ವೀಕ್ಷಕರೊಬ್ಬರ ಅನುಸಾರ ರಾಜ್ಯದ ನಾನಾ ಕಡೆ ಕಳೆದ 2 ತಿಂಗಳಲ್ಲಿ ನಡೆದ ಬೃಹತ್‌ ರಾಜಕೀಯ ಕಾರ್ಯಕ್ರಮಗಳು, ಅದರಲ್ಲಿ ಭಾಗಿಯಾದ ಜನತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್‌ ಧರಿಸದೇ ಇದ್ದದ್ದು, ಫೆಬ್ರವರಿ ಅಂತ್ಯದಲ್ಲಿ ದಿಢೀರಣೆ ಹೊಸ ಕೇಸುಗಳ ಏರಿಕೆಗೆ ಕಾರಣವಾಗಿದೆ.

ಇನ್ನು ಈ ಕಾರ್ಯಕ್ರಮಗಳು ಟೀವಿಗಳಲ್ಲಿ ನೇರಪ್ರಸಾರವಾಗಿತ್ತು. ಇದು ಕೋವಿಡ್‌ ಕುರಿತು ಜನರಲ್ಲಿ ಇದ್ದ ಅಲ್ಪಸ್ವಲ್ಪ ಭೀತಿಯನ್ನೂ ದೂರ ಮಾಡಿತು. ಜನಸಾಮಾನ್ಯರೂ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದರು. ಪರಿಣಾಮ ರಾಜ್ಯದಲ್ಲಿ ಹೊಸ ಕೇಸುಗಳ ಸಂಖ್ಯೆಯಲ್ಲಿ ಮತ್ತೆ ಗಣನೀಯ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆ ಹಾದಿಯಲ್ಲಿ ಸಾಗಿ ಫೆಬ್ರುವರಿ ಮೊದಲ ವಾರದಲ್ಲಿ 9000 ಆಸುಪಾಸಿಗೆ ಬಂದಿದ್ದು, ಮಾಸಾಂತ್ಯದ ವೇಳೆಗೆ ಏರಿಕೆ ಕಾಣಲು ಆರಂಭವಾಗಿತ್ತು. ಇದೀಗ ಮಾಚ್‌ರ್‍ನಲ್ಲಿ ಆ ಪ್ರಮಾಣ 14000 ಗಡಿ ದಾಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ