ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

Published : Feb 14, 2023, 06:22 AM ISTUpdated : Feb 14, 2023, 06:30 AM IST
ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

ಸಾರಾಂಶ

 ಕರ್ನಾ​ಟ​ಕಕ್ಕೆ ಮಹ​ದಾಯಿ ನದಿ ನೀರು ಬಳ​ಕೆಗೆ ಕೇಂದ್ರ ಜಲ ಆಯೋ​ಗವು ನೀಡಿದ್ದ ಅನು​ಮ​ತಿಗೆ ಮಧ್ಯಂತರ ತಡೆ ನೀಡು​ವಂತೆ ಕೋರಿ ಗೋವಾ ಮಾಡಿದ್ದ ಮನ​ವಿ​ಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮ​ವಾರ ತಿರ​ಸ್ಕ​ರಿ​ಸಿ​ದೆ. ಇದೊಂದು ಆತು​ರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿ​ಯನ್ನು ಸೋಮ​ವಾರ ಇತ್ಯ​ರ್ಥ​ಗೊ​ಳಿ​ಸಿ​ದೆ.

ನವದೆಹಲಿ:  ಕರ್ನಾ​ಟ​ಕಕ್ಕೆ ಮಹ​ದಾಯಿ ನದಿ ನೀರು ಬಳ​ಕೆಗೆ ಕೇಂದ್ರ ಜಲ ಆಯೋ​ಗವು ನೀಡಿದ್ದ ಅನು​ಮ​ತಿಗೆ ಮಧ್ಯಂತರ ತಡೆ ನೀಡು​ವಂತೆ ಕೋರಿ ಗೋವಾ ಮಾಡಿದ್ದ ಮನ​ವಿ​ಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮ​ವಾರ ತಿರ​ಸ್ಕ​ರಿ​ಸಿ​ದೆ. ಇದೊಂದು ಆತು​ರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿ​ಯನ್ನು ಸೋಮ​ವಾರ ಇತ್ಯ​ರ್ಥ​ಗೊ​ಳಿ​ಸಿ​ದೆ. ಇದೇ ವೇಳೆ, ಮಹ​ದಾಯಿ ನದಿ ನೀರು ತಿರು​ಗಿ​ಸುವ ಮೊದಲು ಶಾಸ​ನ​ಬದ್ಧ ಸಂಸ್ಥೆ​ಗ​ಳಿಂದ ಎಲ್ಲಾ ರೀತಿಯ ಅನು​ಮತಿ ಪಡೆ​ಯು​ವುದು ಕಡ್ಡಾ​ಯ​ವೆಂಬ ತನ್ನ ಈ ಹಿಂದಿನ ಆದೇಶ ಇನ್ನೂ ಊರ್ಜಿ​ತ​ದ​ಲ್ಲಿ​ರ​ಲಿದೆ ಎಂದು ನ್ಯಾಯಾ​ಲಯ ಸ್ಪಷ್ಟ​ಪ​ಡಿ​ಸಿ​ದೆ.

ಸುಪ್ರೀಂ ಕೋರ್ಟ್‌ನ (Supreme Court) ಈ ಆದೇ​ಶ​ವನ್ನು ಗೋವಾ ಮುಖ್ಯ​ಮಂತ್ರಿ (Goa Chief Minister) ಪ್ರಮೋದ್‌ ಸಾವಂತ್‌ (Pramod Sawant) ಸ್ವಾಗ​ತಿ​ಸಿ​ದ್ದಾರೆ. ನ್ಯಾಯಾ​ಲ​ಯದ ಆದೇ​ಶವು ನದಿ ನೀರು ತಿರು​ಗಿ​ಸುವ ಮೊದಲು ಎಲ್ಲಾ ಅನು​ಮತಿ ಪಡೆ​ಯು​ವುದು ಕಡ್ಡಾಯ ಎಂಬ ನಿಲು​ವನ್ನು ಪುನ​ರು​ಚ್ಚ​ರಿ​ಸಿದೆ ಎಂದು ಹೇಳಿ​ದ್ದಾ​ರೆ. 

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಖನ್ನಾ ನೇತೃ​ತ್ವದ ಪೀಠ:

ಮಹದಾಯಿ ಯೋಜನಾ ಪ್ರದೇಶದಲ್ಲಿ ಅನುಮತಿ ಪಡೆಯದೆ ಕರ್ನಾಟಕ ಸರ್ಕಾ​ರ​ವು (Karnataka government) ಕಾಮಗಾರಿ ಶುರು ಮಾಡಿದೆ ಎಂಬ ತಗಾದೆ ತೆಗೆದು ಗೋವಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನ್ಯಾ. ಸಂಜೀವ್‌ ಖನ್ನಾ (Sanjeev Khanna) ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಗೋವಾ ತಕರಾರು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗೋವಾ ಆರೋ​ಪಕ್ಕೆ ತಕ್ಕ ಉತ್ತರ ನೀಡಿದ ಕರ್ನಾಟಕದ ವಕೀಲರು, ಈವ​ರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದರು. ವಾದ-ಪ್ರತಿ​ವಾದ ಆಲಿ​ಸಿದ ನ್ಯಾಯಾ​ಲ​ಯವು ನಿಮ್ಮ ಅರ್ಜಿ (ಗೋವಾ ಅರ್ಜಿ) ಆತುರದ್ದಾಗಿದೆ ಎಂದು ಹೇಳಿ ವಿಲೇವಾರಿ ಮಾಡಿತು. ಜತೆ​ಗೆ ಈ ಹಿಂದಿನ ಆದೇ​ಶ​ದಂತೆ ಕಾಮಗಾರಿಗಳು ಕೈಗೊಳ್ಳುವಾಗ ಸಂಬಂಧಪಟ್ಟ ಶಾಸನಬದ್ಧ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು ಎಂದು ಕರ್ನಾಟಕಕ್ಕೆ ಸೂಚಿಸಿತಲ್ಲದೆ, ಪ್ರಕರಣದ ವಿಚಾರಣೆಯನ್ನು ನ್ಯಾಯಾ​ಲ​ಯವು ಜುಲೈಗೆ ಮುಂದೂಡಿತು.

ಮಹದಾಯಿ ವಿವಾದ ಬಗೆಹರಿಸಿದ್ದೇವೆ: ಅಮಿತ್‌ ಶಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು