
ಭೋಪಾಲ್[ಡಿ.09]: ಮಧ್ಯಪ್ರದೇಶದ ಮದುವೆಯೊಂದು ಸದ್ಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಇಲ್ಲೊಬ್ಬ ವರ ಒಂದೇ ಮಂಟಪದಲ್ಲಿ ಇಬ್ಬರು ಸಹೋದರಿಯರನ್ನು ವರಿಸಿದ್ದಾನೆ. ಇಲ್ಲಿನ ಭಿಂಡ್ ಜಿಲ್ಲೆಯಲ್ಲಿ ಈ ಮದುವೆ ನಡೆದಿದ್ದು, ಮದುಮಗ ತಾನು ಮದುವೆ ಮಾಡಿಕೊಳ್ಳಬೇಕಿದ್ದ ಯುವತಿಯ ತಂಗಿಯನ್ನೂ ಮದುವೆಯಾಗಿದ್ದಾನೆ. ಕಾರಣವೇನು? ಇಲ್ಲಿದೆ ವಿವರ
ಏನಿದು ಪ್ರಕರಣ?
ಭಿಂಡ್ ಜಿಲ್ಲೆಯ ಗುದಾವಲಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ನಾಯಕಿ ವಿನೀತಾರ ಗಂಡ ಆಕೆಯ ತಂಗಿ ರಚನಾರನ್ನೂ ಮದುವೆಯಾಗಿದ್ದಾರೆ. ದಿಲೀಪ್ ಹಾಗೂ ವಿನೀತಾ ಮದುವೆ 9 ವರ್ಷದ ಹಿಂದೆ ನಡೆದಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.
ಮದುವೆ ಕುರಿತಾಗಿ ಮಾತನಾಡಿದ ದಿಲೀಪ್ 'ಈ ಮದುವೆ ಆಗಲು ನನ್ನ ಹೆಂಡತಿ ವಿನೀತಾಳೇ ಒತ್ತಾಯಿಸಿದ್ದು. ಹೀಗಾಗಿಯೇ ನಾನು ಆಕೆಯ ತಂಗಿ ರಚನಾಳನ್ನು ಮದುವೆಯಾದೆ ಎಂದಿದ್ದಾರೆ'. ದಿಲೀಪ್ ಒಂದೇ ಮಂಟಪದಲ್ಲಿ ತನ್ನ ಹೆಂಡತಿ ವಿನೀತಾರನ್ನು ಎರಡನೇ ಬಾಋಇ ಮದುವೆಯಾಗಿದ್ದು, ಇದೇ ವೆಳೆ ಆಕೆಯ ತಂಗಿ ರಚನಾರನ್ನೂ ವರಿಸಿದ್ದಾರೆ.
ಈ ಮದುವೆಯ ಹಿಂದಿದೆ ಒಂದು ಕಾರಣ
ತನ್ನ ಹೆಂಡತಿ ಇದ್ದರೂ ದಿಲೀಪ್ ಯಾಕೆ ಈ ಮದುವೆಯಾದ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ಹಿಂದಿನ ಕಾರಣವನ್ನೂ ದಿಲೀಪ್ ಬಹಿರಂಗಪಡಿಸಿದ್ದಾರೆ. 'ನನ್ನ ಮೊದಲ ಹೆಂಡತಿಗೆ ಅನಾರೋಗ್ಯ ಕಾಡುತ್ತಿದೆ. ಮಕ್ಕಳು ಕೂಡಾ ತುಂಬಾ ಚಿಕ್ಕವರು. ಅವರಿಗಾಗಿ ನಾನು ಈ ಎರಡನೇ ಮದುವೆಯಾಗಲು ಸಮ್ಮತಿ ಕೊಟ್ಟೆ. ಅಲ್ಲದೇ ನಾನು ರಚನಾಳನ್ನೂ ಬಹಳ ಇಷ್ಟ ಪಡುತ್ತಿದ್ದೇನೆ. ಮನೆಯಲ್ಲಿ ಎರಡನೇ ಮದುವೆ ವಿಚಾರ ಪ್ರಸ್ತಾಪವಾದಾಗ ನಾನು ಈ ವಿಚಾರವನ್ನು ನನ್ನ ಹೆಂಡತಿ ವಿನೀತಾಗೆ ತಿಳಿಸಿದೆ. ಆಕೆ ಸಮ್ಮತಿ ಕೊಟ್ಟ ಬಳಿಕವಷ್ಟೇ ಮದುವೆಯಾದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ