ಇಂಥಾ ಮಕ್ಕಳು ಬೇಕಾ? ಅಪ್ಪ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಸಾವಿಗೆ ಶರಣಾದ 21 ವರ್ಷದ ಯುವಕ

Published : Jun 03, 2025, 12:31 PM IST
Telangana Teenager Ends Life Over Luxury Car

ಸಾರಾಂಶ

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಹೈದರಾಬಾದ್‌: ಕೆಲವರಿಗೆ ಒಂದು ಹೊತ್ತಿನ ಊಟಕ್ಕೆ ಹಣವಿಲ್ಲ ಎಂಬ ಚಿಂತೆಯಾದರೆ ಮತ್ತೆ ಕೆಲವರಿಗೆ ಓಡಾಡಲು ಬೈಕ್ ಇಲ್ಲ, ಕಾರಿಲ್ಲ ಎಂಬ ಚಿಂತೆ ಅದೇ ರೀತಿ ಇಲ್ಲೊಬ್ಬ ಯುವಕ ಅಪ್ಪ ಐಷಾರಾಮಿ ಕಾರು ಖರೀದಿಸಿ ನೀಡಿಲ್ಲ ಎಂದು ಸಾವಿಗೆ ಶರಣಾಗಿದ್ದಾನೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃಷಿ ಭೂಮಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಂದೆಗೆ, ಮಗನಿಗೆ ಶಿಕ್ಷಣ ಕೊಡಿಸಿ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಹಸವಾಗಿತ್ತು. ಹೀಗಿರುವಾಗ ಐಷಾರಾಮಿ ಕಾರನ್ನು ತೆಗೆದು ಕೊಡುವುದಾದರು ಹೇಗೆ? ಆದರೆ ಅಪ್ಪ ಅಮ್ಮನ ಕಷ್ಟ ಅರಿಯದ ಮಗ ಸೀದಾ ಹೋಗಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾನೆ.

ಚಟಪಲ್ಲಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೃಷಿಭೂಮಿಗೆ ಹೋದ ಯುವಕ ಅಲ್ಲಿ ಕೀಟನಾಶಕ ಸೇವಿಸಿದ್ದಾನೆ. ಬಳಿಕ ಮನೆಗೆ ಬಂದು ತಾನು ಕೀಟನಾಶಕ ಸೇವಿಸಿದ್ದಾಗಿ ಹೇಳಿದ್ದಾನೆ. ಬಳಿಕ ಮನೆಯವರು ಆತನನ್ನು ಆಸ್ಪತ್ರೆಗೆ ಸೇವಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಈತ ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗಳಿಸಿದ್ದ, ಜೊತೆಗೆ ಕುಡಿತಕ್ಕೆ ದಾಸನಾಗಿದ್ದ ಈತನ ಮಾನಸಿಕ ಸ್ಥಿತಿಯೂ ಸರಿ ಇರಲಿಲ್ಲ, ಹೀಗಾಗಿ ಬಡ ಪೋಷಕರ ಬಳಿ ಈತ ದಿನವೂ ಐಷಾರಾಮಿ ವಸ್ತುಗಳನ್ನು ಕೊಡಿಸುವಂತೆ ಹಿಂಸೆ ನೀಡಿ ಜಗಳ ಮಾಡುತ್ತಿದ್ದ, ಆಧುನಿಕ ಮನೆ ಐಷಾರಾಮಿ ಕಾರು ಬೇಕು ಎಂದು ಆತ ಜಗಳ ಮಾಡುತ್ತಿದ್ದ ಎಂದು ಜಗದೇವ್‌ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈತನ ಪೋಷಕರಿಗೆ ಎರಡು ಎಕರೆ ಕೃಷಿ ಭೂಮಿ ಇತ್ತು. ಆದರೆ ಉತ್ತಮ ಆದಾಯ ಇರಲಿಲ್ಲ, ಹೀಗಾಗಿ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಹೀಗಾಗಿ ಮಗನಿಗೆ ತಮ್ಮ ಸ್ಥಿತಿಯನ್ನು ಅರ್ಥ ಮಾಡಿಸಿ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಪೋಷಕರ ಮಾತನ್ನು ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ, ಹೀಗಾಗಿ ಅವರು ಮಗನ ಆಸೆಯನ್ನು ಈಡೇರಿಸುವುದಕ್ಕಾಗಿ ಐಷಾರಾಮಿ ಕಾರಿನ ಬದಲು ಮತ್ತೊಂದು ಕಾರನ್ನು ಖರೀದಿಸುವುದಕ್ಕಾಗಿ ಅವರು ಸಿದ್ದಿಪೇಟ್‌ಗೆ ಬಂದಿದ್ದರು. ಆದರ ಆತ ಈ ಕಾರನ್ನು ನಿರಾಕರಿಸಿದ್ದ ಇದಾದ ನಂತರ ಆತ ಅದೇ ದಿನ ಮಧ್ಯಾಹ್ನ ವಿಷ ಸೇವಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್