ಓಡಿಹೋಗಲು ಇದ್ದ ಧೈರ್ಯ ಬದುಕಲು ಇರಲಿಲ್ವೆ?: ಅಂತರ್ಜಾತಿ ವಿವಾಹವಾದ ಯುವಜೋಡಿ ಸಾವಿಗೆ ಶರಣು

Published : Aug 02, 2025, 12:55 PM IST
Love story ends in tragedy

ಸಾರಾಂಶ

ಬಿಹಾರದ ಬೇಗುಸರಾಯ್‌ನಲ್ಲಿ ಅಂತರ್ಜಾತಿ ವಿವಾಹವಾದ ಯುವ ಜೋಡಿಯೊಂದು ಸಾವಿಗೆ ಶರಣಾಗಿದೆ.

ಓಡಿ ಹೋಗಿ ಅಂರ್ಜಾತಿ ಮದುವೆಯಾದ ಜೋಡಿಯೊಂದು ನಂತರ ಸಾವಿಗೆ ಶರಣಾದಂತಹ ಅಘಾತಕಾರಿ ಘಟನೆ ಬಿಹಾರದ ಬೇಗಸರಾಯ್‌ನಲ್ಲಿ ನಡೆದಿದೆ. ಸಾವಿಗೂ ಮೊದಲು ಯುವಕ ತಮ್ಮಿಬ್ಬರ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಗುಡ್‌ಬಾಯ್‌ ಎಂದು ಪೋಸ್ಟ್ ಮಾಡಿದ್ದಾನೆ. ಬಳಿಕ ಇಬ್ಬರು ಸಾವಿಗೆ ಶರಣಾಗಿದ್ದಾರೆ.

ಬಿಹಾರದ ಬೇಗುಸರಾಯ್‌ನಲ್ಲಿ ಈ ಘಟನೆ ನಡೆದಿದೆ. ಈಗ ಸಾವಿಗೆ ಶರಣಾದ ಜೋಡಿ ಕೇವಲ 8 ತಿಂಗಳ ಹಿಂದಷ್ಟೇ ತಮ್ಮ ಗ್ರಾಮದಿಂದ ಓಡಿ ಹೋಗಿ ಮದುವೆಯಾಗಿದ್ದು, ಬೇಗುಸರಾಯ್‌ನ ಬಹುದೂರ್‌ಪುರದಲ್ಲಿ ವಾಸ ಮಾಡುತ್ತಿದ್ದರು.

19 ವರ್ಷದ ಶುಭಂ ಕುಮಾರ್ ಆತನ 18 ವರ್ಷದ ಪತ್ನಿ ಮುನ್ನಿ ಕುಮಾರಿ ಸಾವಿಗೆ ಶರಣಾದ ಜೋಡಿ. ಇವರು ತಮ್ಮ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಇಬ್ಬರು ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಿತರಾಗಿದ್ದರು. ನಂತರ 2024ರ ಆಕ್ಟೋಬರ್‌ನಲ್ಲಿ ಮನೆಯವರ ವಿರೋಧ ಲೆಕ್ಕಿಸದೇ ಮನೆಯಿಂದ ಓಡಿ ಬಂದು ವಿವಾಹವಾಗಿದ್ದರು.

ಆದರೆ ಮದುವೆಯ ನಂತರ ಹುಡುಗಿ ಮುನ್ನಿ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಇಬ್ಬರನ್ನು ಕರೆಸಿ ಪಂಚಾಯ್ತಿ ಮಾಡಿದ್ದರು. ಈ ವೇಳೆ ಮುನ್ನಿ ಹಣೆಯಲ್ಲಿದ್ದ ಮದುವವೆಯ ಸಂಕೇತವಾದ ಸಿಂಧೂರವನ್ನು ಸ್ಪ್ರೈಟ್‌ನಿಂದ ತೊಳೆದಿದ್ದರು. ನಂತರ ಆಕೆಯನ್ನು ಮತ್ತೆ ಆಕೆಯ ಕುಟುಂಬದವರ ಸುಪರ್ದಿಗೆ ನೀಡಿದ್ದರು.

ಆದರೂ ಈ ಜೋಡಿ ಡಿಸೆಂಬರ್‌ನಲ್ಲಿ ಮತ್ತೆ ಜೊತೆಯಾಗಿದ್ದು, ಒಟ್ಟಿಗೆ ಜೀವಿಸಲು ಶುರು ಮಾಡಿದ್ದರು. ಅವರ ಕುಟುಂಬಗಳು ಮತ್ತು ನೆರೆಹೊರೆಯವರ ಪ್ರಕಾರ, ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯದ ಲಕ್ಷಣಗಳು ಇರಲಿಲ್ಲ. ಆದರೂ ಜೋಡಿ ಈಗ ಸಾವಿಗೆ ಶರಣಾಗಿದ್ದಾರೆ.

ಘಟನೆ ನಡೆದ ದಿನ ಈ ಯುವಕನ ಕುಟುಂಬದವರು ಕುಟುಂಬದಲ್ಲಿದ್ದ ಮಗುವೊಂದರ ಚಿಕಿತ್ಸೆಗಾಗಿ ವೈದ್ಯರನ್ನು ನೋಡಲು ಹೊರಗೆ ಹೋಗಿತ್ತು. ಮಧ್ಯಾಹ್ನ ಕುಟುಂಬ ಸದಸ್ಯರು ಹಿಂತಿರುಗಿದಾಗ ಮನೆ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಕಿಟಕಿಯ ಮೂಲಕ ನೋಡಿದಾಗ ಶುಭಂ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ ಮತ್ತು ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದರು. ಇದನ್ನು ನೋಡಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ ಡಿವೈಎಸ್ಪಿ ಆನಂದ್ ಪಾಂಡೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಸಹ ಕರೆಸಲಾಯಿತು. ಈ ನವ ಜೋಡಿಯ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಆದಾರೂ ಮುನ್ನಿ ನೇಣು ಬಿಗಿದುಕೊಂಡು ಮೊದಲು ಸಾವಿಗೆ ಶರಣಾಗಿದ್ದರು. ಆಕೆಯ ಶವವನ್ನು ನೋಡಿದ ನಂತರ ಆಕೆಯ ಶವವನ್ನು ಕೆಳಗೆ ಹಾಸಿಗೆಯ ಮೇಲೆ ಇರಿಸಿ ಆತನೂ ಅದೇ ನೇಣಿಗೆ ಕೊರಳೊಡ್ಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಬಹದ್ದೂರ್‌ಪುರ ಗ್ರಾಮದ ವಿವಾಹಿತ ದಂಪತಿಗಳಾದ ಶುಭಂ ಕುಮಾರ್ ಮತ್ತು ಮುನ್ನಿ ಕುಮಾರಿ ಅವರ ಶವಗಳು ಪತ್ತೆಯಾಗಿವೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆಸಾವಿಗೆ ಕಾರಣವೇನೆಂದು ಈಗಲೇ ಹೇಳಲಾಗದು. ಮರಣೋತ್ತರ ಪರೀಕ್ಷೆ ಮತ್ತು ಪೂರ್ಣ ತನಿಖೆಯ ನಂತರವೇ ನಾವು ನಿಖರವಾದ ಕಾರಣ ಹೇಳಬಹುದು ಎಂದು ಡಿವೈಎಸ್‌ಪಿ ಆನಂದ್ ಪಾಂಡೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್