
ನವದೆಹಲಿ(ಜು.18): ಕೊರೋನಾ ನಿಗ್ರಹಕ್ಕೆ ಹೇರಲಾದ ಲಾಕ್ಡೌನ್ನಿಂದಾಗಿ ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆಯಾಗಿದ್ದು, ಇದರಿಂದ ದೇಶದ ಪ್ರಮುಖ ಐದು ನಗರಗಳಲ್ಲಿ 630 ಜೀವಗಳು ಉಳಿದಿವೆ. ಅಲ್ಲದೇ ಚಿಕಿತ್ಸೆಗೆ ವ್ಯಯಿಸಬೇಕಿದ್ದ .517 ಕೋಟಿ ಉಳಿತಾಯವಾಗಿದೆ ಎಂದು ವರದಿಯೊಂದು ತಿಳಿಸಿದೆ
ಲಾಕ್ಡೌನ್ನಿಂದಾಗಿ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಗಾಳಿಯಲ್ಲಿ ಸೇರುತ್ತಿದ್ದ ಹಾನಿಕಾರಕ ಪಿಎಂ2.5 ಅಣು ಮಿಶ್ರಣ ಕಡಿಮೆಯಾಗಿದ್ದೇ, ಇಷ್ಟೆಲ್ಲಾ ಜೀವ ಹಾಗೂ ಹಣ ಉಳಿತಾಯಕ್ಕೆ ಕಾರಣ ಎಂದು ಬ್ರಿಟನ್ನ ಅಧ್ಯಯನ ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.
ಕೋವಿಡ್ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ!
ಲಾಕ್ಡೌನ್ ಹೇರಲಾದ ಮಾ.25 ರಿಂದ ಏ.11ರ ವರೆಗಿನ ಅವಧಿಯನ್ನು ಮೂಲವಾಗಿಟ್ಟುಕೊಂಡು, ಹಿಂದಿನ 5 ವರ್ಷಗಳ ಇದೇ ಅವಧಿಯನ್ನು ಅವಲೋಕಿಸಿ ಈ ವರದಿ ತಯಾರಿಸಲಾಗಿದೆ. ಮುಂಬೈನಲ್ಲಿ ಈ ಅವಧಿಯಲ್ಲಿ ಗಾಳಿಗೆ ಹಾನಿಕಾರಕ ಅಣು ಮಿಶ್ರಣ ಶೇ.10ರಷ್ಟು, ದೆಹಲಿಯಲ್ಲಿ ಶೇ.54ರಷ್ಟುಕಡಿಮೆಯಾಗಿದೆ. ಒಟ್ಟಾರೆಯಾಗಿ ಈ ನಗರಗಳಲ್ಲಿ ಶೇ.24-35ರಷ್ಟುಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ