ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

Published : Jun 05, 2021, 08:08 AM IST
ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

ಸಾರಾಂಶ

* ತಮಿ​ಳ್ನಾಡು ಉದ್ಯಾ​ನ​ದ​ಲ್ಲಿ ಕೋವಿಡ್‌ಗೆ ಸಿಂಹ ಬಲಿ * ಕೋವಿಡ್‌ಗೆ ಬಲಿಯಾದ ದೇಶದ ಮೊದಲ ಪ್ರಾಣಿ * ಇನ್ನೂ 8 ಸಿಂಹಗಳಿಗೆ ಸೋಂಕು * ಕೋವಿಡ್‌ ಖಚಿತ ಮಾಡಿಕೊಳ್ಳಲು ಮತ್ತೊಮ್ಮೆ ಪರೀಕ್ಷೆ

ಚೆನ್ನೈ(ಜೂ.05): ತಮಿ​ಳು​ನಾ​ಡಿನ ವಂದ​ಲೂರು ಪಟ್ಟ​ಣ​ದ​ಲ್ಲಿ​ರುವ ಆರಿ​ಗ​ನಾರ್‌ ಅಣ್ಣಾ ಪ್ರಾಣಿ​ಶಾ​ಸ್ತ್ರದ ಮೃಗಾಲಯದಲ್ಲಿ ಕೋವಿಡ್‌ ಸೋಂಕಿನಿಂದ ಸಿಂಹ​ವೊಂದು ಸಾವಿ​ಗೀ​ಡಾ​ಗಿದೆ. ಇದು ಕೋವಿಡ್‌ ಸೋಂಕಿಗೆ ದೇಶದಲ್ಲಿ ಬಲಿಯಾದ ಮೊದಲ ಪ್ರಾಣಿ ಎನ್ನಿಸಿಕೊಂಡಿದೆ.

ಮೊದಲ ಪರೀಕ್ಷೆಯಲ್ಲಿ ಇದಕ್ಕೆ ಕೋವಿಡ್‌ ದೃಢಪಟ್ಟಿದೆ. ಆದಾಗ್ಯೂ, ಮೃಗಾಲಯದ ಅಧಿಕಾರಿಗಳು ‘ನೀಲಾ’ ಎಂಬ ಈ ಸಿಂಹ ನಿಜಕ್ಕೂ ಕೋವಿಡ್‌ಗೇ ಬಲಿಯಾಗಿದೆಯೇ ಅಥವಾ ಪೂರ್ವರೋಗಗಳು ಅಥವಾ ಇನ್ನಾವುದೋ ವೈರಸ್‌ಗೆ ಬಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೈದರಾಬಾದ್‌ ಹಾಗೂ ಉತ್ತರ ಪ್ರದೇಶದ ಬರೇಲಿಯ ಉನ್ನತ ಪ್ರಯೋಗಾಲಯಕ್ಕೆ ಸಿಂಹಗಳ ಸ್ಯಾಂಪಲ್‌ ಕಳಿಸಿಕೊಡಲು ನಿರ್ಧರಿಸಿದ್ದಾರೆ.

ಉದ್ಯಾ​ನ​ದಲ್ಲಿ ಒಟ್ಟಾರೆ 11 ಸಿಂಹ​ಗ​ಳಿದ್ದು, ಅವು​ಗಳ ಗಂಟಲು ದ್ರವದ ಮಾದ​ರಿ​ಯನ್ನು ಪರೀ​ಕ್ಷೆ​ಗೊ​ಳ​ಪ​ಡಿ​ಸ​ಲಾ​ಗಿದೆ. ಈ ಪ್ರಕಾರ, ಮೊದಲಿನ ಪರೀಕ್ಷೆಯಲ್ಲಿ 9 ಸಿಂಹ​ಗ​ಳಲ್ಲಿ ಕೋವಿಡ್‌ ವೈರಾಣು ಪತ್ತೆ​ಯಾ​ಗಿದೆ. ಇದ​ರಲ್ಲಿ ನೀಲಾ ಎಂಬ ಸಿಂಹಿಣಿ ಮೃತ​ಪ​ಟ್ಟಿದೆ. ಉಳಿದ 8 ಸಿಂಹಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಝೂ ಪ್ರಕಟಣೆ ತಿಳಿಸಿದೆ.

ಕೋವಿಡ್‌ ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಲಾಕ್‌​ಡೌನ್‌ ಜಾರಿ​ಯ​ಲ್ಲಿದ್ದು, ಉದ್ಯಾ​ನ​ವ​ನ​ವನ್ನು ಸಹ ಕಳೆ​ದೊಂದು ತಿಂಗ​ಳಿಂದ ಮುಚ್ಚ​ಲಾ​ಗಿದೆ. ಆದಾಗ್ಯೂ, ಸಿಂಹ​ಗ​ಳಿಗೆ ಸೋಂಕು ಹೇಗೆ ಹಬ್ಬಿತು ಎಂಬುದು ಸಿಬ್ಬಂದಿಯ ತಲೆ​ಬಿ​ಸಿ​ಯಾ​ಗಿದೆ.

ಇತ್ತೀ​ಚೆ​ಗಷ್ಟೇ ಹೈದ​ರಾ​ಬಾ​ದ್‌ನ ನೆಹರೂ ಪ್ರಾಣಿ​ಗಳ ಉದ್ಯಾ​ನ​ವ​ನ​ದಲ್ಲಿ 8 ಸಿಂಹ​ಗಳು ಕೋವಿ​ಡ್‌ಗೆ ಸಿಲು​ಕಿ​ದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!