ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

Published : Oct 07, 2021, 08:05 AM IST
ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

ಸಾರಾಂಶ

* ಹಿಂದೆ ದೆಹಲಿ ಪ್ರತಿಭಟನೆಯಲ್ಲೂ ಖಲಿಸ್ತಾನಿಗಳು ಭಾಗಿಯಾಗಿದ್ದ ಆರೋಪ * ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ? * ಖಲಿಸ್ತಾನಿ ಬಂಡುಕೋರ ಭಿಂದ್ರ​ನ್‌​ವಾಲೆ ಚಿತ್ರದ ಟೀಶರ್ಟ್‌ ಧರಿ​ಸಿದ ವ್ಯಕ್ತಿ​ಗಳು ಪ್ರತಿಭಟನೆಯಲ್ಲಿ ಪ್ರತ್ಯ​ಕ್ಷ

ಲಖೀಂಪು​ರ(ಅ.07): ಉತ್ತರ ಪ್ರದೇ​ಶದ(Uttar Pradesh) ಲಖೀಂಪು​ರ​ದಲ್ಲಿ(lakhimpur) ರೈತ ಸಂಘ​ಟ​ನೆ​ಗಳು ನಡೆ​ಸು​ತ್ತಿ​ರುವ ಪ್ರತಿ​ಭ​ಟ​ನೆಯ ಹಿಂದೆ ವಿದೇಶಿ ಶಕ್ತಿ​ಗಳ ಕೈವಾಡ ಇದೆಯೇ ಎಂಬ ಗುಮಾನಿ ಉಂಟಾ​ಗಿದೆ. ಪ್ರತ್ಯೇಕ ಖಲಿ​ಸ್ತಾ​ನ(Khalistani) ರಾಷ್ಟ್ರ​ಕ್ಕಾಗಿ ಹೋರಾ​ಡು​ತ್ತಿ​ರುವ ಖಲಿ​ಸ್ತಾನಿ ಉಗ್ರರ ಗುಂಪು​ಗಳು ಈ ಹೋರಾ​ಟ​ದಲ್ಲಿ ಸೇರಿ​ಕೊಂಡಿವೆ ಎಂಬ ಆರೋ​ಪ​ಗಳು ಕೇಳಿ​ಬಂದಿ​ವೆ.

ಇದಕ್ಕೆ ಪುಷ್ಟಿನೀಡು​ವಂತೆ ಖಲಿ​ಸ್ತಾನಿ ಹೋರಾ​ಟಗಾರ ಭಿಂದ್ರ​ನ್‌​ವಾಲೆಯ ಚಿತ್ರ ಇರುವ ಟೀಶ​ರ್ಟ್‌​ಗಳನ್ನು ಧರಿಸಿ ಕೆಲ​ವರು ಹೋರಾ​ಟ​ದಲ್ಲಿ ಭಾಗಿ​ಯಾ​ಗಿರುವುದು ವಿಡಿ​ಯೋ​ಗಳು ಹಾಗೂ ಫೋಟೋ​ಗ​ಳಲ್ಲಿ ಸೆರೆ​ಯಾ​ಗಿದೆ. ‘ಖ​ಲಿ​ಸ್ತಾ​ನಿ​ಗಳು ಹೋರಾ​ಟ​ದ​ಲ್ಲಿ​ದ್ದಾ​ರೆ’ ಎಂದು ಬಿಜೆಪಿ ಸಂಸದ ವಿಜ​ಯಪಾಲ್‌ ಸಿಂಗ್‌ ತೋಮರ್‌ ಕೂಡ ಆರೋ​ಪಿ​ಸಿ​ದ್ದಾರೆ. ಇದೇ ವೇಳೆ, ಭಿಂದ್ರ​ನ್‌​ವಾ​ಲೆ​ಯನ್ನು ರೈತ ಹೋರಾ​ಟದ ನಾಯ​ಕತ್ವ ವಹಿ​ಸಿ​ರುವ ರಾಕೇಶ್‌ ಟಿಕಾ​ಯತ್‌ ಸಮ​ರ್ಥಿ​ಸಿ​ಕೊಂಡಿ​ರು​ವುದು ವಿವಾ​ದಕ್ಕೆ ತುಪ್ಪ ಸುರಿ​ದಿ​ದೆ.

ಈ ಹಿಂದೆ ದಿಲ್ಲಿ​ಯಲ್ಲಿ(Delhi) ನಡೆ​ದಿ​ರುವ ರೈತ ಹೋರಾ​ಟದಲ್ಲಿ ಕೂಡ ಖಲಿ​ಸ್ತಾನಿಗಳು ಪಾಲ್ಗೊಂಡ ಕುರು​ಹು​ಗಳು ಲಭ್ಯ​ವಾ​ಗಿ​ದ್ದ​ವು. ಇದೀಗ ಲಖೀಂಪು​ರ​ದಲ್ಲೂ ಇವರ ಪಾತ್ರ ಕಂಡು​ಬಂದಿ​ದೆ. ಇನ್ನು ಲಖೀಂಪು​ರ​ದಲ್ಲಿ ಸಿಖ್‌ ಜನ​ಸಂಖ್ಯೆ ಸಾಕಷ್ಟಿದ್ದು, ಇದನ್ನು ಮಿನಿ ಪಂಜಾಬ್‌ ಎಂದೇ ಕರೆಯ​ಲಾಗುತ್ತದೆ ಎಂಬುದು ಗಮ​ನಾ​ರ್ಹ.

ಖಲಿಸ್ತಾನಿಗಳಿಗೆ ಬೆಂಬಲ ನೀಡಿದ ರೈತ ನಾಯಕ ಟಿಕಾಯತ್‌

ರೈತರ ಪ್ರತಿ​ಭ​ಟ​ನೆ​ಗ​ಳಲ್ಲಿ ಕೆಲವು ರೈತ ಹೋರಾ​ಟ​ಗಾರು, ಖಲಿ​ಸ್ತಾನಿ(Khalistani) ಹೋರಾ​ಟ​ಗಾರ ಭಿಂದ್ರನ್‌ವಾಲೆಯ ಚಿತ್ರವಿರುವ ಟೀ-ಶರ್ಟ್‌ ಧರಿಸಿರುವುದನ್ನು ಭಾರತೀಯ ಕಿಸಾನ್‌ ಯೂನಿಯನ್‌ನ(Indian Kisan Union) ನಾಯಕ ರಾಕೇಶ್‌ ಟಿಕಾಯತ್‌(rakesh Tikait) ಸಮರ್ಥಿಸಿಕೊಂಡಿದ್ದಾರೆ. ‘ಕೆಲವರಿಗೆ ರಾಮ ಸಂತನಾದರೆ ಕೆಲವರಿಗೆ ರಹೀಮ ಸಂತ’ ಎನ್ನುವ ಮೂಲಕ ಭಿಂದ್ರ​ನ್‌​ವಾ​ಲೆ​ಯನ್ನು ಕೆಲ​ವರು ಸಂತ​ನೆಂದು ಪೂಜಿ​ಸು​ತ್ತಾರೆ ಎಂಬ​ರ್ಥದ ಮಾತು ಹೇಳಿ​ದ್ದಾ​ರೆ.

‘ಭಿಂದ್ರನ್‌ವಾಲೆಯನ್ನು ಸಂತ ಎಂದು ಪೂಜಿಸುವ ಹುಡುಗನೊಬ್ಬ ಅವರ ಚಿತ್ರವಿರುವ ಟೀಶರ್ಟ್‌ ಧರಿಸಿದ್ದಾನೆ. ಆದರೆ ಸರ್ಕಾರ ಮಾತ್ರ ಬಿಂದ್ರನ್‌ವಾಲೆ ಅವರನ್ನು ಉಗ್ರ ಎಂದು ಪರಿಗಣಿಸುತ್ತದೆ’ ಎಂದು ಬುಧ​ವಾರ ಹೇಳಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!