
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ ಪಾಲ್ ಕುರಿಯನ್ ಅವರು 18 ವರ್ಷಗಳ ಕಾಲ ಕೇರಳದ ರಸ್ತೆಗಳಲ್ಲಿ ಬಸ್ ಓಡಿಸಿದ್ದಾರೆ. ಆದರೆ, ಒಂದು ಬಸ್ ಮಾತ್ರ ಅವರ ಪಾಲಿಗೆ ಕೇವಲ ವಾಹನವಾಗಿರಲಿಲ್ಲ, ಬದಲಿಗೆ ಜೀವನದ ಒಂದು ಭಾಗವಾಗಿತ್ತು. ಅದಕ್ಕೇ, ತಮ್ಮ ನಿವೃತ್ತಿಯ ದಿನ ಆ ಬಸ್ಗೆ ಅವರು ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.
ಪಾಲ್ ಕುರಿಯನ್ ಅವರು KSRTCಯಲ್ಲಿ ಒಟ್ಟು 18 ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇಡುಕ್ಕಿ-ಕುಮಿಲಿ ಮಾರ್ಗದಲ್ಲಿ ಒಂದೇ ಬಸ್ ಅನ್ನು ಚಲಾಯಿಸುತ್ತಿದ್ದರು. ನಿವೃತ್ತಿಗೂ ಮುನ್ನ ರಜೆಯ ಮೇಲೆ ತೆರಳುವ ಮೊದಲು, ತಮ್ಮ ಕೊನೆಯ ಕೆಲಸದ ದಿನದಂದು ಡಿಪೋದಲ್ಲಿ ನಿಂತಿದ್ದ ಬಸ್ ಬಳಿ ಹೋದರು.
ಬಸ್ಗೆ ಮುತ್ತಿಟ್ಟು ವಿದಾಯ: ಮನಕಲಕಿದ ದೃಶ್ಯ
ಬಸ್ನ ಮುಂಭಾಗಕ್ಕೆ ಬಂದು, ಅದಕ್ಕೆ ಮುತ್ತಿಟ್ಟು ತಮ್ಮ ಸುದೀರ್ಘ ಸೇವೆಗೆ ವಿದಾಯ ಹೇಳಿದರು. ಈ ದೃಶ್ಯ ಎಲ್ಲರ ಮನಕಲುಕಿದೆ. ಅವರ ಸಹೋದ್ಯೋಗಿಗಳು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿವೃತ್ತಿಗೂ ಮುನ್ನವೇ ಕೊನೆಯ ಟ್ರಿಪ್ ಮುಗಿಸಿದ ಚಾಲಕ
ಕುರಿಯನ್ ಅವರು ಅಕ್ಟೋಬರ್ 31 ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ. ಆದರೆ, ಮಂಗಳವಾರ ಅವರ ಸೇವೆಯ ಕೊನೆಯ ದಿನವಾಗಿತ್ತು. ಇದರ ನಂತರ ಅವರು ನಿವೃತ್ತಿಯಾಗುವವರೆಗೂ ರಜೆಯಲ್ಲಿರುತ್ತಾರೆ.
“ನಾನು ಬಸ್ನ್ನು ಪ್ರೀತಿಸುತ್ತಿದ್ದೆ, ಅದು ನನ್ನನ್ನು ಪ್ರೀತಿಸುತ್ತಿತ್ತು”
Keralam:
KSRTC driver Paul Kurian bids emotional farewell to bus after retirement, says he loved the bus and it loved him back.
After completing the final trip of his official career, Kurian got down from the bus and walked to the front of the vehicle.
He affectionately… pic.twitter.com/D50gcJMuKa— News Arena India (@NewsArenaIndia) September 4, 2026
ಈ ಮನಮಿಡಿಯುವ ವಿದಾಯವು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಗಮನವನ್ನೂ ಸೆಳೆದಿದೆ. ಅವರು ಕುರಿಯನ್ ಅವರ ಈ ಭಾವನಾತ್ಮಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಕುರಿಯನ್ ಅವರು ವರ್ಷಗಳಿಂದ ಶ್ರದ್ಧೆಯಿಂದ ಓಡಿಸಿದ ಬಸ್ಗೆ ತಲೆಬಾಗಿ ಗೌರವ ಸಲ್ಲಿಸಿದ ರೀತಿ ನೋಡಿ ನನಗೆ ಮನತುಂಬಿ ಬಂದಿದೆ. ಕುರಿಯನ್ ಅವರಂತಹ ಸಾವಿರಾರು KSRTC ನೌಕರರ ಬದ್ಧತೆ ಮತ್ತು ಹೆಮ್ಮೆಯೇ ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಿಜವಾದ ಬೆನ್ನೆಲುಬು. KSRTCಯನ್ನು ರಾಜ್ಯದ ಜೀವನಾಡಿಯಾಗಿ ಉಳಿಸಿಕೊಂಡು, ಅದನ್ನು ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ," ಎಂದು ಸತೀಶನ್ ಹೇಳಿದ್ದಾರೆ.
Deeply touched by the moving farewell of Sri Paul Kurian, who bowed in reverence to the bus he steered for years with utmost devotion.
It is the tireless commitment and pride of thousands of workers like him that form the true backbone of our public transport.
The government… https://t.co/WDD3HViw0z— V D Satheesan (@vdsatheesan) September 4, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ