ಮಾಡಿದ್ದೆಲ್ಲಾ ಮಾಡಿ, ಟ್ರಾಕ್ಟರ್ ರ‍್ಯಾಲಿ ಹಿಂಪಡೆದ ರೈತ ಸಂಘಟನೆ!

By Suvarna NewsFirst Published Jan 26, 2021, 8:55 PM IST
Highlights

ಪ್ರಧಾನಿ ಜವಾಹರ್‌ಲಾಲ್ ನೆಹರೂನಿಂದ ನರೇಂದ್ರ ಮೋದಿ ವರೆಗೆ ಧ್ವಜಾರೋಹಣ ಮಾಡಿದ್ದ ದೆಹಲಿ ಕೆಂಪು ಕೋಟೆ ಮೇಲೆ ಇಂದು ರೈತರ ಮುತ್ತಿಗೆ ಹಾಕಿ ದೇಶದ ಹೆಮ್ಮೆಯ ಪ್ರತೀಕದ ಮೇಲೆ ವಿಕೃತಿ ಮೆರೆದಿದ್ದಾರೆ. ರಾಷ್ಟ್ರ ಧ್ವಜ ಹಾರುತ್ತಿದ್ದ ಸ್ಥಳದಲ್ಲಿ ಸಿಖ್ ಧ್ವಜ ಹಾರಾಡಿದೆ. ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ವಾಹನ ಜಖಂ ಸೇರಿದಂತೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಿ, ಇದೀಗ ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದ್ದಾರೆ.

ನವದೆಹಲಿ(ಜ.26): ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿದೆ. ದೆಹಲಿಯಲ್ಲಿ ದಂಗೆ ಎಬ್ಬಿಸಿ ದೇಶದ ಮಾನ ಮೂರುಕಾಸಿಗೆ ಹರಾಜು ಹಾಕಿದ್ದಾರೆ. ರೈತರ ಪ್ರತಿಭಟನೆ, ದೆಹಲಿ ಪೊಲೀಸರ ಮೇಲಿನ ದಾಳಿ, ಕೆಂಪು ಕೋಟೆಗೆ ಮುತ್ತಿಗೆ, ರಾಷ್ಟ್ರಧ್ವಜ ಸ್ಥಾನದಲ್ಲಿ ಸಿಖ್ ಧ್ವಜ ಹಾರಾಟ ಸೇರಿದಂತೆ  ಹಲವು ಹಿಂಸಾಚಾರ ಘಟನೆಗಳ ಬಳಿಕ ಇದೀಗ ರೈತ ಸಂಘಟನೆಗಳು ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದೆ.

ಉನ್ನತಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ; ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ!.

ಮಾಡಿದೆಲ್ಲಾ ಮಾಡಿ ಇದೀಗ ನಮಗೇನು ಗೊತ್ತಿನಲ್ಲ. ನಮ್ಮ ಪ್ರತಿಭಟನೆ ಶಾಂತವಾಗಿದೆ. ಆದರೆ ಕೆಲ ಸಮಾಜ ಘಾತುಕ ಶಕ್ತಿ ಪ್ರತಿಭಟನೆಯಲ್ಲಿ ನುಸುಳಿ ಹಿಂಸಾಚಾರದಲ್ಲಿ ತೊಡಗಿದೆ. ಕೆಂಪು ಕೋಟೆಗೆ ಮುತ್ತಿಗೆ, ಧ್ವಜ ಹಾರಾಟದಲ್ಲಿ ರೈತ ಪ್ರತಿಭಟನಾಕಾರರ ಪಾತ್ರವಿಲ್ಲ. ಹಿಂಸಾಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕಿಸಾನ್ ಮೋರ್ಚಾ ಸಂಘಟನೆ ಹೇಳಿದೆ.

 

Samyukt Kisan Morcha (SKM) has called off Kisan Republic Day Parade with immediate effect &appealed to all participants to immediately return to their respective protest sites. SKM announced the movement will continue peacefully& further steps will be discussed & decided soon:SKM

— ANI (@ANI)

ದೆಹಲಿ ಪೊಲೀಸ್ ಕಮಿಶನರ್, ಗುಪ್ತಚರ ಅಧಿಕಾರಿಗಳೊಂದಿಗೆ ಅಮಿತ್ ಶಾ ತುರ್ತು ಸಭೆ!

ಹಿಂಸೆ ಕಾರಣ ತಕ್ಷಣದಿಂದ ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದ್ದೇವೆ. ಎಲ್ಲಾ ರೈತರು ದೆಹಲಿ ಗಡಿಗೆ ತೆರಳಿ ಎಂದಿನ ಪ್ರತಿಭಟನೆ ಮುಂದುವರಿಸಬೇಕು ಎಂದು ಕಿಸಾನ್ ಮೋರ್ಚಾ ಸಂಘಟನೆ ಹೇಳಿದೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಲಿದೆ. ಮುಂದಿನ ಹೋರಾಟದ ಕುರಿತು ಇತರ ಸಂಘಟನೆ ಹಾಗೂ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದಿದೆ.
 

click me!