
ತಿರುವನಂತಪುರ(ಡಿ.27): ಇತ್ತೀಚೆಗಷ್ಟೇ ಬ್ರಿಟನ್ನಿಂದ ಕೇರಳಕ್ಕೆ ಆಗಮಿಸಿದ್ದ 8 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಭಾರೀ ಆತಂಕ ಸೃಷಿಸಿರುವ ರೂಪಾಂತರದ ಕೊರೋನಾ ಪ್ರಭೇದ ಕೇರಳಕ್ಕೂ ವ್ಯಾಪಿಸಿದೆಯೇ ಎಂಬ ಭೀತಿ ವ್ಯಕ್ತವಾಗಿದೆ.
ಈ 8 ಮಂದಿಯಲ್ಲಿ ಪತ್ತೆಯಾಗಿರುವ ವೈರಸ್ ಕೊರೋನಾ ರೂಪಾಂತರದ್ದೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ಅದರ ನಿಖರತೆಗಾಗಿ ಅವರ ಪರೀಕ್ಷಾ ಮಾದರಿಯನ್ನು ರಾಷ್ಟ್ರೀಯ ಸೂಕ್ಷ್ಮರೋಗಾಣು ಅಧ್ಯಯನ ಸಂಸ್ಥೆ(ಎನ್ಐವಿ)ಗೆ ರವಾನಿಸಲಾಗಿದೆ.
ರೂಪಾಂತರಗೊಂಡ ವೈರಸ್ ಭಾರತದಲ್ಲಿ ಮಾರ್ಚ್ನಲ್ಲೇ ಇತ್ತು: ಜೀನೋಮಿಕ್ಸ್
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ‘ಬ್ರಿಟನ್ನಿಂದ ಬಂದವರ 8 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಅವರ ಪರೀಕ್ಷಾ ವರದಿಯ ಹೆಚ್ಚಿನ ತಪಾಸಣೆಗಾಗಿ ಎನ್ಐವಿಗೆ ರವಾನಿಸಲಾಗಿದೆ’ ಎಂದಿದ್ದಾರೆ.
ರವಾನಿಸಿಕೊಡಲಾಗಿದೆ. ಜೊತೆಗೆ, ವಿದೇಶದಿಂದ ಬರುವವರ ಮೇಲಿನ ಹೆಚ್ಚಿನ ನಿಗಾಕ್ಕಾಗಿ ರಾಜ್ಯದಲ್ಲಿರುವ 4 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಾಗಿ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಲಿದೆ ಎಂಬ ಭೀತಿಯಿಂದ ಸದ್ಯ ಪಾರಾಗಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ