ವಿಧಾನಸಭೆಯಲ್ಲೇ ರಾಜ್ಯಪಾಲರಿಗೆ ಮುತ್ತಿಗೆ: ಸಿಎಎ ಪ್ರಸ್ತಾಪ ಬಂದಾಗ ಮಾತು ನಿಲ್ಲಿಸಿದ ಆರೀಫ್!

Suvarna News   | Asianet News
Published : Jan 29, 2020, 11:40 AM IST
ವಿಧಾನಸಭೆಯಲ್ಲೇ ರಾಜ್ಯಪಾಲರಿಗೆ ಮುತ್ತಿಗೆ: ಸಿಎಎ ಪ್ರಸ್ತಾಪ ಬಂದಾಗ ಮಾತು ನಿಲ್ಲಿಸಿದ ಆರೀಫ್!

ಸಾರಾಂಶ

ತಾರಕಕ್ಕೇರಿದ ಕೇರಳ ಸರ್ಕಾರ-ರಾಜ್ಯಪಾಲರ ನಡುವಿನ ಸಂಘರ್ಷ| ವಿಧಾನಸಭೆಯಲ್ಲೇ ಆರೀಫ್ ಮೊಹ್ಮದ್ ಖಾನ್ ಅವರಿಗೆ ಘೇರಾವ್| ಕೇರಳ ಬಜೆಟ್ ಕಲಾಪದ ವೇಳೆ ನಡೆದ ಘಟನೆ| ಸದನವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್| ಸಿಎಎ ಕುರಿತಾದ ವಿರೋಧ ಉಲ್ಲೇಖವನ್ನು ತಮ್ಮ ಅಭಿಪ್ರಾಯ ಅಲ್ಲ ಎಂದು ಹೇಳಿದ ಓದಿದ ರಾಜ್ಯಪಾಲ| ಮಾರ್ಷಲ್ ಭದ್ರತೆಯಲ್ಲಿ ಸದನ ಪ್ರವೇಶಿಸಿದ ಕೇರಳ ರಾಜ್ಯಪಾಲ| 

ತಿರುವನಂತಪುರಂ(ಜ.29): ಕೇರಳ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ವಿಧಾನಸಭೆಯಲ್ಲೇ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.

ಕೇರಳ ವಿಧಾನಸಭೆಯಲ್ಲಿ ಬಜೆಟ್ ಕಲಾಪ ಆರಂಭವಾಗಿದ್ದು, ಇದಕ್ಕೂ ಮೊದಲು ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಸದನವನ್ನುದ್ದೇಶಿಸಿ ಭಾಷಣ ಮಾಡಿದರು.

ಈ ವೇಳೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಓದುತ್ತಿದ್ದ ರಾಜ್ಯಪಾಲರು, ಒಂದು ಕ್ಷಣ ವಿರಾಮ ಪಡೆದು ಸಿಎಎ ಕುರಿತಾದ ವಿರೋಧ ಟಿಪ್ಪಣಿಯನ್ನು ಓದುತ್ತಿರುವುದಾಗಿ ತಿಳಿಸಿದರು.

ಇದು ಸರ್ಕಾರ ಬರೆದುಕೊಟ್ಟ ಭಾಷಣವಾಗಿದ್ದು, ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿ ಬಳಿಕ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ತಮ್ಮ ಭಾಷಣವನ್ನು ಮುಂದುವರೆಸಿದರು.

ಮುಖ್ಯಮಂತ್ರಿಗಳ ಮೇಲಿನ ಗೌರವದಿಂದಾಗಿ ಈ ಉಲ್ಲೇಖವನ್ನು ಓದುತ್ತಿರುವುದಾಗಿ ಹೇಳಿ, ಸಿಎಎ ಕಾನೂನು ಸಾಂವಿಧಾನಿಕ ಮೌಲ್ಯಗಳನ್ನು ಉಲಲಂಘಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಇದಕ್ಕೂ ಮೊದಲು ಭಾಷಣ ಮಾಡಲು ಸದನಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು ಘೇರಾವ್ ಹಾಕಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ರಾಜ್ಯಪಾಲರ ವಿರುದ್ಧವೇ ಕೇರಳದಲ್ಲಿ ಗೊತ್ತುವಳಿ?

ಮಾರ್ಷಲ್’ಗಳು ಶಾಸಕರನ್ನು ಬದಿಗೆ ಸರಿಸಿ ರಾಜ್ಯಪಾಲರಿಗೆ ಭದ್ರತೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸ್ಪೀಕರ್ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ರಕ್ಷಣೆಗೆ  ಧಾವಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!