ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ

Published : Mar 16, 2026, 05:06 PM IST
Rajeev Chandrasekhar

ಸಾರಾಂಶ

ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಪ್ರಮುಖ ನಾಯಕಿ ಶೋಭಾ ಸುರೇಂದ್ರನ್ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ

ನವದೆಹಲಿ (ಮಾ.16) ಪಂಚ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಪೈಕಿ ಕೇರಳದಲ್ಲಿ ಚುನಾವಣಾ ಕಣ ರಂಗೇರಿದೆ. ಚುನಾವಣಾ ದಿನಾಂಕ ಘೋಷಣೆಯಾದ ಮರುದಿನ ಬಿಜೆಪಿ ಕೇರಳಂ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಕೇರಳಂ ವಿಧಾನಸಭೆ ಚುನಾವಣೆಗೆ ಬಿಜೆಪಿ 47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕೇರಳಂ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೆಮಾಮ್ ಕ್ಷೇತ್ರದಿಂದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಕಾಸರಗೋಡಿನಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತ ಪ್ರಮುಖ ನಾಯಕಿ ಶೋಭಾ ಸುರೇಂದ್ರನ್ ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನೆಮಾಮ್ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಕಣಕ್ಕೆ

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬರವು ಈ ನೆಮಾಮ್ ವಿಧಾನಸಭೆ ಕ್ಷೇತ್ರದಲ್ಲಿ ಸದ್ಯ ಕಮ್ಯೂನಿಸ್ಟ್ ಪಾರ್ಟಿಯ ಶಿವಂಕುಟ್ಟಿ ಶಾಸಕರಾಗಿದ್ದಾರೆ. 2011 ಹಾಗೂ 2021ರ ಚುನಾವಣೆಯಲ್ಲಿ ಸಿಪಿಎಂನ ಶಿವಂಕುಟ್ಟಿ ಗೆದ್ದಿದ್ದಾರೆ. ಆದರೆ 2016ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿತ್ತು. 2016ರಲ್ಲಿ ಬಿಜೆಪಿಯ ರಾಜಗೋಪಾಲ್ ಈ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಈ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಪ್ರಾಬಲ್ಯ ಹೊಂದಿದೆ. ಇದೀಗ ರಾಜೀವ್ ಚಂದ್ರಶೇಖರ್ ಈ ನೆಮಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಯಕಿ ನವ್ಯ ಹರಿದಾಸ್ ಭಾರಿ ಗಮನಸೆಳೆದಿದ್ದರು. ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ನವ್ಯ ಹರಿದಾಸ್, ಪ್ರಿಯಾಂಕಾ ಗಾಂಧಿ ವಾದ್ರಾಗೆ ನಡುಕು ಹುಟ್ಟಿಸಿದ್ದರು. ಇದೀಗ ನವ್ಯ ಹರಿದಾಸ್ ಉತ್ತರ ಕೋಝಿಕ್ಕೋಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಸುಲ್ತಾನ್ ಬತ್ತೇರಿ ಕ್ಷೇತ್ರದಿಂದ ಕವಿತಾ ಎಎಸ್, ತ್ರಿಶೂರ್‌ನಿಂದ ಪದ್ಮಜಾ ವೇಣುಗೋಪಾಲ್, ಕನ್ನತ್ತೂರು ಕ್ಷೇತ್ರದಿಂದ ರಾಜಿ ಪ್ರಸಾದ್, ಕೊಟ್ಟಾಕರ ಕ್ಷೇತ್ರದಿಂದ ರೇಶ್ಮಿ, ವಟ್ಟಿಯೂರ್ಕಾವು ಕ್ಷೇತ್ರದಿಂದ ಶ್ರೀಲೇಖಾ ಸ್ಪರ್ಧಿಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ
ಬೈಕ್‌ಗೆ ನಾಯಿಮರಿ ಕಟ್ಟಿ ಎಳೆದೊಯ್ದ ದಂಪತಿ; ಪೊಲೀಸರೇ ಪ್ರಾಣಿಹಿಂಸೆ ಮಾಡಿದವರ ಬಂಧನಕ್ಕೆ ನೆಟ್ಟಿಗರ ಆಗ್ರಹ!