
ಬಲ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚೊಚ್ಚಲ ಜಯದಿಂದ ಪಕ್ಷಕ್ಕೊಂದು ಬಲವಾದ ನೆಲೆ ಸೃಷ್ಟಿ. ಪ್ರಧಾನಿ ಮೋದಿ ವರ್ಚಸ್ಸು ಕೂಡ ಮತದಾನದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆ. ಭರ್ಜರಿ ಪ್ರಚಾರದ ಸಾಮರ್ಥ್ಯ.
ದೌರ್ಬಲ್ಯ: ರಾಜ್ಯಾಡಳಿತದ ಮೇಲೆ ದಶಕಗಳಿಂದ ಹಿಡಿತ ಹೊಂದಿರುವ ವಿಪಕ್ಷಗಳ ಎದುರು ಸೆಣಸುವ ದೊಡ್ಡ ಸವಾಲು. ಕೇಂದ್ರದ ಬಿಜೆಪಿ ಸರ್ಕಾರದಿಂದ ಕೇರಳಕ್ಕೆ ಅನ್ಯಾಯ ಎಂಬ ಆಕ್ರೋಶವೂ ದೊಡ್ಡ ಪೆಟ್ಟು.
ಅವಕಾಶ: ಯುವಕರು, ಕೆಲ ಸಮುದಾಯ ಒಗ್ಗೂಡಿಸಬಹುದು. ಇತ್ತೀಚೆಗೆ ಮಿತ್ರಕೂಟ ಸೇರಿದ ಟ್ವೆಂಟ್ 20 ಪಕ್ಷದಿಂದಾಗಿ ಇದು ಸಾಧ್ಯ. ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತದಾರರ ಮನವೊಲಿಸಬಹುದು.
ಸವಾಲು: ವಿವಿಧ ಸಮುದಾಯ ಒಗ್ಗೂಡಿಸುವುದು ಕಷ್ಟ. ಸಾಂಪ್ರದಾಯಿಕವಾಗಿ ತಮ್ಮ ಎದುರಾಳಿಗಳ ಪರವಾಗಿರುವವರ ಸೆಳೆವುದು ಸುಲಭವಲ್ಲ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕ್ರೈಸ್ತರ ಮೇಲಿನ ದಾಳಿಗಳ ವ್ಯತಿರಿಕ್ತ ಪರಿಣಾಮ ಇಲ್ಲಿ ಪ್ರತಿಫಲಿಸುವ ಸಾಧ್ಯತೆಯಿದೆ.
ಬಲ: ಆಡಳಿತಾರೂಢ ಸರ್ಕಾರದ ವಿರುದ್ಧದ ಅಲೆಯ ಲಾಭ. ಉಪಚುನಾವಣೆಗಳಲ್ಲಿನ ಗೆಲುವು, 2024ರ ಲೋಕಸಭಾ ಚುನಾವಣೆಯ ಜಯ.ವಿವಾದ ಹಾಗೂ ಆಂತರಿಕ ಕಲಹ ರಹಿತವಾಗಿರುವ ಕಾರಣ ಬಲ ಇಮ್ಮಡಿ.
ದೌರ್ಬಲ್ಯ: ಮಿತ್ರಕೂಟದ ಭಾಗವಾಗಿರುವ ಕಾಂಗ್ರೆಸ್ನಲ್ಲಿ ಆಂತರಿಕ ಗುಂಪುಗಾರಿಕೆಯಿಂದ ಒಳಗೊಳಗೇ ಪೆಟ್ಟು. ಮುಖ್ಯಮಂತ್ರಿಯೆಂದು ಬಿಂಬಿಸಲು ಪ್ರಭಾವಿ ಮುಖದ ಕೊರತೆ.
ಅವಕಾಶ: ಮುಸಲ್ಮಾನ, ಕ್ರೈಸ್ತರಂತಹ ಅಲ್ಪಸಂಖ್ಯಾತರ ಮತಗಳನ್ನು ಆಕರ್ಷಿಸಬಹುದು. ರಾಜ್ಯದಲ್ಲಿ ಬಿಜೆಪಿ ಪ್ರಭಾವ ವೃದ್ಧಿಯಿಂದ ಹಿಂದೂ ಮತಗಳ ವಿಭಜನೆಯ ಲಾಭ. ಶಬರಿಮಲೆ ಚಿನ್ನ ಕಳವು ಪ್ರಕರಣ ಬಳಸಿ ಸರ್ಕಾರದ ವಿರುದ್ಧ ಪ್ರಚಾರಕ್ಕೆ ಅವಕಾಶ.
ಸವಾಲು: ಅಭಿವೃದ್ಧಿ ತೋರಿಸಿ ಎಲ್ಡಿಎಫ್ ಮಾಡುತ್ತಿರುವ ಪ್ರಚಾರದತ್ತ ಮತದಾರರು ಒಲಿಯುವ ಸಂಭವ. ಜಮಾತೆ ಇಸ್ಲಾಮಿ ಜತೆ ಕೈಜೋಡಿಸಿರುವುದರಿಂದ ಹಿಂದೂ ಮತಗಳು ಬೀಳದೇ ಇರಬಹುದು. ಹಿಂದುಳಿದ ವರ್ಗಗಳನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವಿಫಲ. ತಿರುವನಂತಪುರಂ, ಪಟ್ಟಣಂತಿಟ್ಟ, ಆಲಪ್ಪುಳದಲ್ಲಿ ಬಿಜೆಪಿ ಪ್ರಭಾವ ವೃದ್ಧಿಯೂ ಮಾರಕ. ಕಾಂಗ್ರೆಸ್ನ ಉಚ್ಛಾಟಿತ ಶಾಸಕ ರಾಹುಲ್ ಮಮಕೂಟತಿಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಕಪ್ಪುಚುಕ್ಕಿ.
ಬಲ: ವಿವಿಧ ಅಭಿವೃದ್ಧಿ ಯೋಜನೆ ಮುಂದಿಟ್ಟು ಜನಪರ ಸರ್ಕಾರವೆಂದು ಬಿಂಬಿಸಿಕೊಳ್ಳಬಹುದು. ಈ ಬಾರಿಯ ಬಜೆಟ್ ಕೂಡ ಅನೇಕ ಕಲ್ಯಾಣ ಯೋಜನೆಗಳನ್ನು ಒಳಗೊಂಡಿದ್ದರಿಂದ ಮತ ಸೆಳೆಯಲು ಸುಲಭ.
ದೌರ್ಬಲ್ಯ: ಕಲ್ಯಾಣ ಯೋಜನೆಗಳ ಹೊರತಾಗಿಯೂ ಸ್ಥಳೀಯ ಚುನಾವಣೆಯಲ್ಲಿ ಗೆಲುವಿಲ್ಲ. ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಸಿಪಿಎಂ ನಾಯಕರ ಹೆಸರು ತಳುಕು ಹಾಕಿಕೊಂಡಿರುವುದು ಹಿನ್ನಡೆಗೆ ಕಾರಣವಾದೀತು. ಕೂಟದ ಒಳಗೇ ಒಡಕು.
ಅವಕಾಶ: ಶಬರಿಮಲೆ ಪ್ರಕರಣದ ಆರೋಪಿಗಳು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಜತೆ ಕಾಣಿಸಿಕೊಂಡದ್ದನ್ನು ದಾಳವಾಗಿ ಬಳಸಬಹುದು. ರಾಹುಲ್ ಮಮಕೂಟತಿಲ್ ವಿರುದ್ಧದ ಆರೋಪವೂ ಅಸ್ತ್ರವಾಗಿ ಬಳಕೆಯಾಗಬುದು.
ಸವಾಲು: ಸಿಪಿಐ(ಎಂ) ಮತ್ತು ಸಿಪಿಐ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ. ಪ್ರತಿಪಕ್ಷಗಳು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ರ ಪತ್ನಿ ಮಾಡಿರುವ ದಾಂಪತ್ಯ ದ್ರೋಹದ ಆರೋಪದಿಂದ ಪೆಟ್ಟು ಬೀಳಬಹುದು. ವಯನಾಡು, ಇಡುಕ್ಕಿಯಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳದಿಂದ ಜನರಲ್ಲಿ ಅಸಮಾಧಾನ.
ಇದನ್ನೂ ಓದಿ: ಬಹು ನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ
ಇದನ್ನೂ ಓದಿ: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ: ಯಾರಿಗೆ ಸಿಗಲಿದೆ ಅಧಿಕಾರದ ಗದ್ದುಗೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ