ಮೋಹಿನಿಯಾಟ್ಟಂ ನೃತ್ಯವನ್ನು ಅರ್ಧಕ್ಕೆ ತಡೆದ ಕೇರಳ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಕಲಂ ಪಾಷಾ!

By Suvarna NewsFirst Published Mar 23, 2022, 4:00 PM IST
Highlights

ಪಾಲಕ್ಕಾಡ್ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಕಲಂ ಪಾಷಾ ನಡೆಗೆ ಆಕ್ರೋಶ

ಫೇಸ್ ಬುಕ್ ನಲ್ಲಿ ಬೇಸರ ತೋಡಿಕೊಂಡ ಪ್ರಖ್ಯಾತ ನೃತ್ಯಗಾರ್ತಿ ಡಾ. ನೀನಾ ಪ್ರಸಾದ್

ಪಾಲಕ್ಕಾಡ್ ನ ಸರ್ಕಾರಿ ಮೋಯನ್ ಎಲ್ ಪಿ ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ
 

ತಿರುವನಂತಪುರ (ಮಾ. 23): ಕೇರಳದಲ್ಲಿ ಪಾಲಕ್ಕಾಡ್ ನ ಜಿಲ್ಲಾ ನ್ಯಾಯಾಧೀಶ ಕಲಂ ಪಾಷಾ (Palakkad District Judge Kalam Pasha) ದೊಡ್ಡ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಶನಿವಾರ ಸಂಜೆ ಪಾಲಕ್ಕಾಡ್‌ನ ಸರ್ಕಾರಿ ಮೋಯನ್ ಎಲ್‌ಪಿ ಶಾಲೆಯಲ್ಲಿ (Government Moyan LP School, Palakkad)ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಮೋಹಿನಿಯಾಟ್ಟಂ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್(renowned Mohiniyattam dancer Dr Neena Prasad) ಅವರ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸುವಂತೆ ಒತ್ತಾಯಿಸುವ ಮೂಲಕ ಕೇರಳದಲ್ಲಿ ವಿವಾದ ಸೃಷ್ಟಿಸಿದ್ದಾರೆ.

ವರದಿಗಳ ಪ್ರಕಾರ, ಕಲಂ ಪಾಷಾ, ಸರ್ಕಾರಿ ಮೋಯನ್ ಪ್ರಾಥಮಿಕ ಶಾಲೆಯ ಬಳಿಯಲ್ಲಿಯೇ ವಾಸವಿದ್ದಾರೆ. ಶನಿವಾರ ರಾತ್ರಿ 8.30ರ ಸುಮಾರಿಗೆ ಖ್ಯಾತ ನೃತ್ಯಗಾರ್ತಿ ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ಕಾರ್ಯಕ್ರಮ ಏರ್ಪಾಡಾಗಿತ್ತು. ಈ ಕಾರ್ಯಕ್ರಮ ಆರಂಭವಾದ ಕೆಲ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಕಮಲ್ ಪಾಷಾ, ಧ್ವನಿವರ್ಧಕದ ಶಬ್ದದಿಂದ ನಿದ್ರೆ ಮಾಡಲು ಆಗುತ್ತಿಲ್ಲ ಎನ್ನುವ ಕಾರಣ ನೀಡಿ ಸಂಘಟಕರಿಗೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.  ಈ ಬಗ್ಗೆ ನೀನಾ ಪ್ರಸಾದ್ ಫೇಸ್ ಬುಕ್ ನಲ್ಲಿ ಕೂಡ ಆಕ್ರೋಶ ಹೊರಹಾಕಿದ್ದಾರೆ.

ನ್ಯಾಯಾಧೀಶರ ಆದೇಶದ ಮೇರೆಗೆ ಸ್ಥಳಕ್ಕೆ ನುಗ್ಗಿದ ಪೊಲೀಸರು (Kerala Police), ಕೃಷ್ಣ ಮತ್ತು ಅರ್ಜುನನ ನಡುವಿನ ಸಂಬಂಧದಲ್ಲಿನ ವೈಪರೀತ್ಯಗಳನ್ನು ಬಿಂಬಿಸುವ ‘ಸಖ್ಯಂ’ ಶೀರ್ಷಿಕೆಯ ಒಂದು ಗಂಟೆಯ ಪ್ರದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿದರು. ವೇದಿಕೆಯಲ್ಲೇ ಹಿರಿಯ ಕಲಾವಿದೆ ಹಾಗೂ ತಂಡದವರಿಗೆ ಅವಮಾನ ಮಾಡಿದ್ದರಿಂದ ನೀನಾ ಪ್ರಸಾದ್ ಅವರ ತಂಡ ಕಣ್ಣೀರಿಟ್ಟು ವೇದಿಕೆಯಿಂದ ಕೆಳಗೆ ಇಳಿದಿದೆ.

Yet another example of Talibanization of Kerala under

No artistic freedom under communist rule

Stopping Ms. Neena Prasad's Mohiniyattam performance - Kerala's own dance form abruptly - is an insult to Kerala. pic.twitter.com/zS7whLcZty

— V Muraleedharan / വി മുരളീധരൻ (@VMBJP)


ಘಟನೆಯ ನಂತರ, ಡಾ ಪ್ರಸಾದ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, “ಇದು ನನ್ನ ನೃತ್ಯ ವೃತ್ತಿಜೀವನದ ಕಹಿ ಅನುಭವವಾಗಿದೆ. ಇದು ನನಗೆ ಮಾತ್ರವಲ್ಲದೆ ಎರಡು ವರ್ಷಗಳ ಕರೋನಾ ಕಹಿಯ ನಂತರ ಹೆಚ್ಚಿನ ಭರವಸೆಯೊಂದಿಗೆ ವೇದಿಕೆಯನ್ನು ಏರಿದ ಸಹ ಕಲಾವಿದರಿಗೂ ಅವಮಾನಕರ ಅನುಭವವಾಗಿತ್ತು' ಎಂದಿದ್ದಾರೆ.

Congress vs CPI ವಿರೋಧದ ನಡುವೆ CPI(M) ಸೆಮಿನಾರ್‌‌ ಹಾಜರಾಗಲು ಶಶಿ ತರೂರ್ ಸ್ಪಷ್ಟನೆ, ಕಾಂಗ್ರೆಸ್‌ನಲ್ಲಿ ಜಟಾಪಟಿ!
ಶೇಖರಿಪುರಂ ಗ್ರಂಥಶಾಲೆಯು ಈ ಪ್ರದರ್ಶನವನ್ನು ಆಯೋಜಿಸಿದ್ದು, ಶ್ರೀಚಿತ್ರನ್ ಎಂಜೆ ಅವರು ಬರೆದ ಇತಿಹಾಸಗಳು ತೇದಿ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು. ಇದು ನ್ಯಾಯಾಂಗ ಅಧಿಕಾರಿಯೊಬ್ಬರ ಉದ್ಧಟತನ ಎಂದು ಹೆಸರಾಂತ ಕಲಾವಿದೆ ಆರೋಪಿಸಿದ್ದಾರೆ. ನೃತ್ಯ ಸಂಯೋಜನೆಗಾಗಿ ತಾಸುಗಟ್ಟಲೆ ತಯಾರಿ ನಡೆಸಿ ಪಾಲಕ್ಕಾಡ್‌ಗೆ ಬಂದಿದ್ದೆವು ಎಂದೂ ತಿಳಿಸಿದ್ದಾರೆ. "ಇದು ಸಂಕೀರ್ಣವಾದ ಏಕವ್ಯಕ್ತಿ ಪ್ರದರ್ಶನವಾಗಿದ್ದು, ಇದಕ್ಕಾಗಿ ನಾನು ನನ್ನ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದೇನೆ. ಪಿಟೀಲು, ಮೃದಂಗ, ಎಡಕ್ಕ ಮುಂತಾದ ಸಮಚಿತ್ತವಾದ ವಾದ್ಯಗಳೊಂದಿಗೆ ಇದನ್ನು ಪ್ರದರ್ಶಿಸಲಾಯಿತು. ಇದು ಖಂಡಿತವಾಗಿಯೂ ಕೋಕೋಫೋನಿಯಾಗಿರಲಿಲ್ಲ, ”ಎಂದು ಅವರು ಹೇಳಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಪುರೋಗಮನ ಕಲಾ ಸಾಹಿತ್ಯ ಸಂಘ, ನ್ಯಾಯಾಧೀಶರು ಸಾಂಸ್ಕೃತಿಕ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. , ಸಂಘದ ಅಧ್ಯಕ್ಷ ಶಾಜಿ ಎನ್ ಕರುಣ್ ಮತ್ತು ಪ್ರಧಾನ ಕಾರ್ಯದರ್ಶಿ ಅಶೋಕನ್ ಚರುವಿಲ್ ಅವರು ಕಲಾವಿದರು ಮತ್ತು ಸಾಂಸ್ಕೃತಿಕ ನಾಯಕರ ಬಾಯಿ ಮುಚ್ಚಿಸುವ ಪ್ರಯತ್ನಗಳನ್ನು ನಮ್ಮ ಜನ ವಿರೋಧಿಸಬೇಕು ಎಂದು ಕರೆ ನೀಡಿದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಯತ್ನವನ್ನೂ ಯಾರೂ ಮಾಡಬಾರದು ಎಂದು ಸಾಹಿತ್ಯ ಸಂಘ ಹೇಳಿದೆ.

Football gallery collapses: ಫುಟ್ಬಾಲ್ ಗ್ಯಾಲರಿ ಕುಸಿದು ಇನ್ನೂರಕ್ಕೂ ಅಧಿಕ ಮಂದಿಗೆ ಗಾಯ..!
“ಕೇರಳದ ಜನರು ಯಾವಾಗಲೂ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗಿಂತ ಕಲಾವಿದರಿಗೆ ಹೆಚ್ಚಿನ ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಒಬ್ಬ ಕಲಾವಿದರಿಗೆ (ಎಂ.ಎಸ್. ಸುಬ್ಬುಲಕ್ಷ್ಮಿ) ಉನ್ನತ ಸ್ಥಾನವನ್ನು ನೀಡಿದ ಪ್ರಧಾನಿಯನ್ನು ನಾವು ನೆನಪಿಸಿಕೊಳ್ಳುವ ಸಮಯ ಇದು, ”ಎಂದು ಅವರು ಹೇಳಿದರು. ಕೇರಳದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆಮಾಲ್ ಪಾಷಾ ಅವರ ಸಹೋದರನಾಗಿರುವ ನ್ಯಾಯಾಧೀಶ ಕಲಂ ಪಾಷಾ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಪಾಷಾ ಅವರು "ತ್ರಿವಳಿ ತಲಾಖ್" ನೀಡುವ ಮೂಲಕ ತಮ್ಮ ಪತ್ನಿಗೆ ಕಾನೂನುಬಾಹಿರವಾಗಿ ವಿಚ್ಛೇದನ ನೀಡಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದರು.

 

click me!