ಮುಂದಿನ 3 ತಿಂಗಳಲ್ಲಿ ಈ ಎಲ್ಲಾ ಟೋಲ್‌ ಪ್ಲಾಜಾ ಬಂದ್, ಗಡ್ಕರಿ ಮಹತ್ವದ ಘೋಷಣೆ!

Published : Mar 23, 2022, 03:44 PM ISTUpdated : Mar 23, 2022, 03:48 PM IST
ಮುಂದಿನ 3 ತಿಂಗಳಲ್ಲಿ ಈ ಎಲ್ಲಾ ಟೋಲ್‌ ಪ್ಲಾಜಾ ಬಂದ್, ಗಡ್ಕರಿ ಮಹತ್ವದ ಘೋಷಣೆ!

ಸಾರಾಂಶ

* ಟೋಲ್‌ ಗೇಟ್‌ನಲ್ಲಿ ಕಾದು ಸುಸ್ತಾಗಿದ್ದೀರಾ? * ಟೋಲ್ ಸಂಗ್ರಹದ ಬಗ್ಗೆ ಮಹತ್ದದ ಹೇಳಿಕೆ ನೀಡಿದ ನಿತಿನ್ ಗಡ್ಕರಿ  * ಎಲೆಕ್ಟ್ರಿಕ್ ವಾಹನಗಳ ಬಗ್ಗೆಯೂ ಮಾಹಿತಿ

ನವದೆಹಲಿ(ಮಾ.23): ಟೋಲ್ ಗೇಟ್‌ನಲ್ಲಿ ಉದ್ದನೆಯ ಸಾಲುಗಳನ್ನು ನೋಡಿ ಪ್ರಯಾಣಿಕರು ಅನೇಕ ಬಾರಿ ಕೋಪಗಗೊಳ್ಳುತ್ತಾರೆ. ಹಲವು ಬಾರಿ ಈ ಸಾಲುಗಳಲ್ಲಿ ಜನರ ಸಮಯ ವ್ಯರ್ಥವಾಗುತ್ತಿದ್ದು, ಸರಿಯಾದ ಸಮಯಕ್ಕೆ ಸೂಕ್ತ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಮುಂಬೈನಲ್ಲಿ ಟೋಲ್ ಸಮಸ್ಯೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಮುಂಬೈನಂತಹ ಜನನಿಬಿಡ ನಗರದಲ್ಲಿ, ಟೋಲ್ ರಶ್‌ನಿಂದ ಮುಂಬೈ ಜನತೆ ಹೆಚ್ಚಾಗಿ ತೊಂದರೆಗೀಡಾಗಿದ್ದಾರೆ. ಆದರೆ, ಇದೀಗ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟೋಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಸ್ಪರ 60 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಟೋಲ್‌ಗಳನ್ನು ಮುಂದಿನ ಮೂರು ತಿಂಗಳಲ್ಲಿ ಮುಚ್ಚಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ (NH) 60 ಕಿ.ಮೀ ಮೊದಲು ಯಾವುದೇ ಟೋಲ್ ತೆರಿಗೆಯನ್ನು ವಿಧಿಸಲಾಗುವುದಿಲ್ಲ. 60 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಎಲ್ಲ ಟೋಲ್‌ ಬೂತ್‌ಗಳನ್ನು ರದ್ದುಪಡಿಸಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಟೋಲ್ ಮುಗಿಯುವುದಿಲ್ಲ, ಸದನದಲ್ಲಿ ಸಾರಿಗೆ ಸಚಿವರು ಹೇಳಿದ್ದೇನು?

ಮುಂದಿನ ದಿನಗಳಲ್ಲಿ ಹೆಚ್ಚಿನ ಟೋಲ್ ಸಂಗ್ರಹವನ್ನು ಜಿಪಿಎಸ್ ಮೂಲಕ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಟೋಲ್ ಕೊನೆಗೊಳ್ಳುತ್ತದೆ ಎಂದು ಇದರ ಅರ್ಥವಲ್ಲ. ಜಿಪಿಎಸ್ ಮೂಲಕ ನಿಮ್ಮ ವಾಹನದೊಂದಿಗೆ ಹೆದ್ದಾರಿಯಲ್ಲಿ ಎಲ್ಲಿಂದ ಪ್ರವೇಶಿಸಿದ್ದೀರಿ ಮತ್ತು ಯಾವ ಸ್ಥಳದಿಂದ ಹೊರಟಿದ್ದೀರಿ ಎಂಬುದನ್ನು ತಿಳಿಯಲಾಗುತ್ತದೆ, ಅದರ ಆಧಾರದ ಮೇಲೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದು ಹೇಳಿದರು. ಬರುವ ಹೊಸ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಟೋಲ್ ಯಾವಾಗ ಮನ್ನಾ ಮಾಡುತ್ತೀರಿ ಎಂದು ಕೆಲವರು ಕೇಳುತ್ತಿದ್ದಾರೆ ಎಂದ ನಿತಿನ್ ಗಡ್ಕರಿ, ನೀವು ಪಂಚತಾರಾ ಹೋಟೆಲ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವಾಗ ಮುಖಕ್ಕೆ ಸಿಗುತ್ತದೆಯೇ ಎಂದು ನಾನು ಹೇಳುತ್ತೇನೆ. ಫೋಕಾಟ್‌ನಲ್ಲಿ ಮಾಡಬೇಕಾದರೆ ರಾಮಲೀಲಾ ಮೈದಾನದಲ್ಲಿ ಮಾಡಬೇಕಿತ್ತು. ಇಲ್ಲಿ ನೀವು ಪಾವತಿಸಬೇಕಾಗುತ್ತದೆ. ಟೋಲ್ ಪಾವತಿಸಬೇಕಾಗುತ್ತದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು

ಸಚಿವ ನಿತಿನ್ ಗಡ್ಕರಿ ಪ್ರಕಾರ, ಮುಂಬರುವ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ತೀವ್ರವಾಗಿ ಕುಸಿಯುತ್ತದೆ ಮತ್ತು ಇದು ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಸರಿಸಮಾನವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಚಾಲನೆಯ ವೆಚ್ಚವು 10 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ದೇಶದಲ್ಲಿ ಬ್ಯಾಟರಿ ಉತ್ಪಾದನೆ ಹೆಚ್ಚಿಸುವುದರೊಂದಿಗೆ ಹೊಸ ತಂತ್ರಜ್ಞಾನ ಆಧಾರಿತ ಬ್ಯಾಟರಿಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು