ಬಿಜೆಪಿ ಜೊತೆ ಕೈಜೋ​ಡಿ​ಸಿ: ಶಿವ​ಸೇನೆ ಶಾಸ​ಕ​ನಿಂದ ಸಿಎಂ ಉದ್ಧವ್‌​ಗೆ ಪತ್ರ!

Published : Jun 21, 2021, 09:08 AM ISTUpdated : Jun 21, 2021, 11:01 AM IST
ಬಿಜೆಪಿ ಜೊತೆ ಕೈಜೋ​ಡಿ​ಸಿ: ಶಿವ​ಸೇನೆ ಶಾಸ​ಕ​ನಿಂದ ಸಿಎಂ ಉದ್ಧವ್‌​ಗೆ ಪತ್ರ!

ಸಾರಾಂಶ

* ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ಜಾರಿ ನಿರ್ದೇ​ಶ​ನಾ​ಲ​ಯದಿಂದ ತನಿ​ಖೆ ಎದು​ರಿ​ಸು​ತ್ತಿ​ರುವ ಸರ್‌ ನಾಯಕ್ * ಬಿಜೆಪಿ ಜೊತೆ ಕೈಜೋ​ಡಿ​ಸಿ: ಶಿವ​ಸೇನೆ ಶಾಸ​ಕ​ನಿಂದ ಸಿಎಂ ಉದ್ಧವ್‌​ಗೆ ಪತ್ರ  * ಬಿಜೆಪಿ ಹಾಗೂ ಶಿವ​ಸೇನೆ ಮುಖಂಡರ ನಡು​ವಿನ ವೈಯ​ಕ್ತಿಕ ಸಾಮರಸ್ಯಕ್ಕೆ ಧಕ್ಕೆ ಬಂದಿಲ್ಲ

ಮುಂಬೈ(ಜೂ.21): ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ಜಾರಿ ನಿರ್ದೇ​ಶ​ನಾ​ಲ​ಯದಿಂದ ತನಿ​ಖೆ ಎದು​ರಿ​ಸು​ತ್ತಿ​ರುವ ಶಿವ​ಸೇನಾ ಶಾಸಕ ಪ್ರತಾಪ್‌ ಸರ್‌ ನಾಯಕ್, ಬಿಜೆ​ಪಿಯ ಜೊತೆ ರಾಜಿ ಮಾಡಿ​ಕೊ​ಳ್ಳು​ವಂತೆ ಒತ್ತಾ​ಯಿಸಿ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ಅವ​ರಿಗೆ ಪತ್ರ ಬರೆ​ದಿ​ದ್ದಾರೆ.

ಬಿಜೆ​ಪಿಯ ಜೊತೆ ಮೈತ್ರಿ ಕಡಿ​ದು​ಕೊಂಡಿ​ದ್ದರೂ ಬಿಜೆಪಿ ಹಾಗೂ ಶಿವ​ಸೇನೆ ಮುಖಂಡರ ನಡು​ವಿನ ವೈಯ​ಕ್ತಿಕ ಸಾಮರಸ್ಯಕ್ಕೆ ಧಕ್ಕೆ ಬಂದಿಲ್ಲ. ತಡ​ವಾ​ಗುವ ಮುನ್ನ ಬಿಜೆ​ಪಿಯ ಜೊತೆ ಸಖ್ಯ ಬೆಳೆ​ಸು​ವುದು ಉತ್ತಮ ಎಂದು ಅವರು ಪತ್ರ​ದಲ್ಲಿ ತಿಳಿ​ಸಿ​ದ್ದಾರೆ. ಮಹಾ​ರಾ​ಷ್ಟ್ರ​ದಲ್ಲಿ ಮಹಾ ವಿಕಾಸ್‌ ಅಘಾಡಿ ಮೈತ್ರಿ​ಕೂ​ಟ​ ಸರ್ಕಾ​ರ​ದಲ್ಲಿ ಬಿರುಕು ಕಾಣಿ​ಸಿ​ಕೊಂಡಿದೆ ಎಂಬ ವದಂತಿ​ಗಳ ಬೆನ್ನಲ್ಲೇ ಇಂಥ​ದ್ದೊಂದು ಪ್ರಸ್ತಾ​ವನೆ ಇಟ್ಟಿ​ರು​ವುದು ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

‘ಕಳೆದ ಏಳು ತಿಂಗ​ಳಿ​ನಿಂದ ನಾನು ಏಕಾಂಗಿ​ಯಾಗಿ ಹೋರಾಟ ನಡೆ​ಸು​ತ್ತಿ​ದ್ದೇನೆ. ನಮ್ಮ ನಾಯ​ಕ​ರಿಂದಾ​ಗಲೀ ಅಥವಾ ಸರ್ಕಾ​ರ​ದಿಂದಾ​ಗಲಿ ಯಾವುದೇ ಸಹಾಯ ದೊರೆ​ತಿಲ್ಲ. ಮಹಾ​ಭಾ​ರ​ತದ ಅಭಿ​ಮನ್ಯು ಅಥವಾ ಕರ್ಣನ ರೀತಿ ಶರ​ಣಾ​ಗ​ತ​ನಾ​ಗುವ ಬದಲು ಅರ್ಜುನನ ರೀತಿ ಹೋರಾ​ಟ​ದಲ್ಲಿ ನಾನು ನಂಬಿಕೆ ಇಟ್ಟಿ​ದ್ದೇನೆ. ಸದ್ಯ​ದಲ್ಲೇ ಮುಂಬೈ ಸೇರಿ​ದಂತೆ ಹಲವು ನಗ​ರ​ಗ​ಳಲ್ಲಿ ನಗರ ಪಾಲಿ​ಕೆ ಚುನಾ​ವಣೆ ಎದು​ರಾ​ಗ​ಲಿದೆ. ಕಾಂಗ್ರೆಸ್‌ ಮತ್ತು ಎನ್‌​ಸಿಪಿ ಶಿವ​ಸೇ​ನೆ​ಯನ್ನು ಒಡೆ​ಯಲು ಯತ್ನಿ​ಸು​ತ್ತಿವೆ. ಹೀಗಾಗಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೈಜೋ​ಡಿ​ಸಿ​ದರೆ ಪಕ್ಷ​ವನ್ನು ಉಳಿ​ಸ​ಬ​ಹು​ದಾ​ಗಿದೆ ಎಂದು ನನ್ನಂತಹ ಹಲವು ಕಾರ್ಯ​ಕ​ರ್ತರ ಅಭಿ​ಪ್ರಾ​ಯ​ವಾ​ಗಿದೆ’ ಎಂದು ಸರ್‌ ನಾಯಕ್ ಹೇಳಿ​ದ್ದಾ​ರೆ.

ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಜಾರಿ ನಿರ್ದೇ​ಶ​ನ​ಲಾಯ ಕಳೆದ ನವೆಂಬ​ರ್‌​ನಲ್ಲಿ ಸರ್‌ ನಾಯಕ್ ಅವರ ಮನೆಯ ಮೇಲೆ ದಾಳಿ ನಡೆ​ಸಿತ್ತು. ಆದ​ರೆ, ಇದನ್ನು ರಾಜ​ಕೀಯ ಷಡ್ಯಂತ್ರ ಎಂದು ಶಿವ​ಸೇನೆ ಆರೋ​ಪಿ​ಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!