ದೇಶದ ಪ್ರತಿಷ್ಠಿತ ವಿವಿ JNUಗೆ ಮಹಿಳಾ ಸಾರಥ್ಯ, ಶಾಂತಿಶ್ರೀ ಬಗ್ಗೆ ಒಂದಿಷ್ಟು ಮಾಹಿತಿ

Published : Feb 07, 2022, 12:51 PM ISTUpdated : Feb 07, 2022, 01:45 PM IST
ದೇಶದ ಪ್ರತಿಷ್ಠಿತ ವಿವಿ JNUಗೆ ಮಹಿಳಾ ಸಾರಥ್ಯ, ಶಾಂತಿಶ್ರೀ ಬಗ್ಗೆ ಒಂದಿಷ್ಟು ಮಾಹಿತಿ

ಸಾರಾಂಶ

* ಜೆಎನ್‌ಯುನಲ್ಲಿ ಓದಿದ್ದ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ * ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು

ನವದೆಹಲಿ(ಫೆ.07): ಪ್ರೊಫೆಸರ್ ಶಾಂತಿಶ್ರೀ ಪಂಡಿತ್ ಅವರಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಕಮಾಂಡ್ ನೀಡಲಾಗಿದೆ. ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಮಹಿಳೆಯೊಬ್ಬರು ಉಪಕುಲಪತಿ (JNU) ಆಗಿರುವುದು ಇದೇ ಮೊದಲು. ಈ ಮೊದಲು, ಈ ವಿಶ್ವವಿದ್ಯಾಲಯದ ಆಡಳಿತ ಯಾವುದೇ ಮಹಿಳೆಯ ಕೈಯಲ್ಲಿ ಇರಲಿಲ್ಲ. 1949 ರಲ್ಲಿ, ಹಂಸಾ ಮೆಹ್ತಾ ಬರೋಡಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ಭಾರತದಲ್ಲಿ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಉಪಕುಲಪತಿಯಾಗಿದ್ದರು.

Delhi Riots : "ಬೆಂಕಿ ಹಚ್ಚೋಕೆ ನಾವು ಸಿದ್ಧ", ಉಮರ್ ಖಾಲಿದ್ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಸಮೇತ ವಿವರ ನೀಡಿದ ವಕೀಲರು!

ಜೆಎನ್‌ಯುನಲ್ಲಿ ಓದಿದ್ದ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್

ಪ್ರೊಫೆಸರ್ ಶಾಂತಿಶ್ರೀ ಧೂಳಿಪುಡಿ ಅವರು ಪಂಡಿತ್ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು JNU ನಿಂದಲೇ ಎಂಫಿಲ್ ಮತ್ತು ಪಿಎಚ್‌ಡಿ ಮಾಡಿದ್ದಾರೆ. ಶಾಂತಿಶ್ರೀ 1988 ರಲ್ಲಿ ಗೋವಾ ವಿಶ್ವವಿದ್ಯಾಲಯದಿಂದ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಅವರು 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ಸೇರಿದರು. ಶಾಂತಶ್ರೀ ಪಂಡಿತ್ ಅನೇಕ ಭಾಷೆಗಳಲ್ಲಿ ಪಾರಂಗತರಾಗಿದ್ದಾರೆ. ಅವರಿಗೆ ತಮಿಳು, ತೆಲುಗು, ಸಂಸ್ಕೃತ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳ ಜ್ಞಾನವಿದೆ.

ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು

4 ಫೆಬ್ರವರಿ 2022 ರಂದು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಉಪಕುಲಪತಿ ಎಂ. ಜಗದೇಶ್ ಕುಮಾರ್ ಅವರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸುಮಾರು ಎರಡು ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು. ಜೆಎನ್‌ಯು ಉಪಕುಲಪತಿಯಾಗಿ ಎಂ ಜಗದೇಶ್ ಕುಮಾರ್ ಅವರ ಅಧಿಕಾರಾವಧಿಯು 26 ಜನವರಿ 2021 ರಂದು ಕೊನೆಗೊಂಡಿತು. ಆದರೆ, ಅವರ ಅಧಿಕಾರಾವಧಿಯನ್ನು ಶಿಕ್ಷಣ ಸಚಿವಾಲಯವು ನಂತರ ವಿಸ್ತರಿಸಿತು. ಅಕ್ಟೋಬರ್ 2020 ರಲ್ಲಿ JNU VC ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ ಜೆಎನ್‌ಯುನಲ್ಲಿ 12 ವಿಸಿಗಳಿದ್ದರು, ಆದರೆ ಯಾವುದೇ ಮಹಿಳೆಗೆ ಈ ಹುದ್ದೆ ಸಿಕ್ಕಿರಲಿಲ್ಲ. ಜೆಎನ್‌ಯು ವಿಸಿ ರೇಸ್‌ನಲ್ಲಿ ಪ್ರೊಫೆಸರ್ ಶಾಂತಿಶ್ರೀ ಜೊತೆಗೆ ಪ್ರೊಫೆಸರ್ ಅವಿನಾಶ್ ಕುಮಾರ್ ಪಾಂಡೆ ಅವರ ಹೆಸರೂ ಇತ್ತು.

JNUನಲ್ಲಿ ಸೆಕ್ಸ್ ಹಗರಣ: ರಾಹುಲ್ ದೀಪಿಕಾ ಕೂಡಾ ಹೋಗುತ್ತಾರೆ: ಯೋಗಿ ಸಚಿವನ ವಿವಾದಾತ್ಮಕ ಹೇಳಿಕೆ!

ದೇಶದ 54 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 6ರಲ್ಲಿ ಮಹಿಳಾ ಉಪಕುಲಪತಿಗಳು

ವಿಶ್ವವಿದ್ಯಾಲಯಮಹಿಳಾ ಉಪಕುಲಪತಿ
ಜಾಮಿಯಾ ಮಿಲಿಯಾ ಇಸ್ಲಾಮಿಯಾನಜ್ಮಾ ಅಖ್ತರ್
ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯಅನ್ನಪೂರ್ಣ ನೌಟಿಯಲ್
ಡಾ: ಹರಿಸಿಂಗ್ ಗೌರ್ ವಿಶ್ವವಿದ್ಯಾಲಯನೀಲಿಮಾ ಗುಪ್ತಾ
ಭಾರತೀಯ ಸಾಗರ ವಿಶ್ವವಿದ್ಯಾಲಯಡಾ. ಮಾಲಿನಿ ವಿ ಶಂಕರ್
ನಳಂದಾ ವಿಶ್ವವಿದ್ಯಾಲಯಸುನೈನಾ ಸಿಂಗ್
ಅಲಹಾಬಾದ್ ವಿಶ್ವವಿದ್ಯಾಲಯಸಂಗೀತಾ ಶ್ರೀವಾಸ್ತವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!