
ನವದೆಹಲಿ (ಮೇ.13): ಹೈದ್ರಾಬಾದ್ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಕೊಠಡಿಯೊಂದಕ್ಕೆ ಐಪಿಎಸ್ ಅಧಿಕಾರಿ ಕರ್ನಾಟಕ ಮೂಲದ ದಿ. ಡಾ. ಕೆ.ಮಧುಕರ್ ಶೆಟ್ಟಿಅವರ ಹೆಸರು ಇಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಕಟ್ಟಡದಲ್ಲಿ ಮುಖ್ಯ ಬೋಧನಾ ಕೊಠಡಿಗೆ ಹೆಸರಿಡುವಂತೆ ಗೃಹ ಸಚಿವಾಲಯ ಸುತ್ತೋಲೆಯಲ್ಲಿ ಸೂಚಿಸಿದೆ. ಐಪಿಎಸ್ ತರಬೇತಿ ನಿರತರಿಗೆ ಮಧುಕರ್ ಶೆಟ್ಟಿರೋಲ್ ಮಾಡೆಲ್ ಆಗಿದ್ದವರು. ಜೊತೆಗೆ ವೃತ್ತಿಗೆ ಅವರು ತೋರುತ್ತಿದ್ದ ಬದ್ಧತೆ ಮತ್ತು ನಿಷ್ಠೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಾಮಾಣಿಕ ಅಧಿಕಾರಿಯ ಹೆಮ್ಮೆಯ ಸತ್ಯಗಳು: ಇದು ಸಿಂಹದ ಹೆಜ್ಜೆ...! .
ಕರ್ತವ್ಯದ ಅವಧಿಯಲ್ಲೇ ಮಧುಕರ್ ಶೆಟ್ಟಿಅವರು ಹೈದ್ರಾಬಾದ್ನ ಆಸ್ಪತ್ರೆಯೊಂದಲ್ಲಿ 2018ರ ಡಿ.28ರಂದು ಎಚ್1ಎನ್1 ಸೋಂಕಿಗೆ ಬಲಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ