ಮುಂಬೈ ರನ್‌ವೇಲೆ ಇಂಡಿಗೋ, ಏರಿಂಡಿಯಾ ವಿಮಾನಗಳ ಡಿಕ್ಕಿ

Kannadaprabha News   | Kannada Prabha
Published : Feb 04, 2026, 06:05 AM IST
air india indigo flight  wingtips collide in mumbai

ಸಾರಾಂಶ

ಇಲ್ಲಿನ ಛತ್ರಪತಿ ಶೀವಾಜಿ ಮಹಾರಾಜ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ವಿಮಾನಗಳು ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೊಯಮತ್ತೂರಿಗೆ ಹೊರಟಿದ್ದ ಏರ್‌ ಇಂಡಿಯಾ ಮತ್ತು ಹೈದರಾಬಾದ್‌ನಿಂದ ಬಂದಿಳಿಯುತ್ತಿದ್ದ ಇಂಡಿಗೋ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿವೆ.

ಮುಂಬೈ: ಇಲ್ಲಿನ ಛತ್ರಪತಿ ಶೀವಾಜಿ ಮಹಾರಾಜ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ವಿಮಾನಗಳು ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೊಯಮತ್ತೂರಿಗೆ ಹೊರಟಿದ್ದ ಏರ್‌ ಇಂಡಿಯಾ ಮತ್ತು ಹೈದರಾಬಾದ್‌ನಿಂದ ಬಂದಿಳಿಯುತ್ತಿದ್ದ ಇಂಡಿಗೋ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿವೆ.

ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು

ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು. ಘಟನೆ ಬಗ್ಗೆ ಏರ್‌ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಯಾರಿಗೂ ಹಾನಿಯಾಗಿಲ್ಲ. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ. ವಿಮಾನಗಳಲ್ಲಿ ಇಂಧನ ತುಂಬಿರುವುದು ರೆಕ್ಕೆಗಳಲ್ಲೇ ಎಂಬುದು ಗಮನಾರ್ಹ.

ಏರಿಂಡಿಯಾದ ಎಲ್ಲಾ 33 ಡ್ರೀಮ್‌ಲೈನರ್‌ ಇಂಧನ ಸ್ವಿಚ್‌ ಮರು ತಪಾಸಣೆ

ನವದೆಹಲಿ: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಬೋಯಿಂಗ್‌ 787 ವಿಮಾನದ ಇಂಧನ ಸ್ವಿಚ್‌ನಲ್ಲಿ ಸೋಮವಾರ ತಾಂತ್ರಿಕ ದೋಷ ವರದಿ ಬೆನ್ನಲ್ಲೇ ಏರಿಂಡಿಯಾ ತನ್ನಲ್ಲಿರುವ ಎಲ್ಲಾ 33 ಡ್ರೀಮ್‌ಲೈನರ್‌ ವಿಮಾನಗಳ ಫ್ಯೂಯಲ್‌ ಸ್ವಿಚ್‌ ತಪಾಸಣೆಗೆ ಮುಂದಾಗಿದೆ. ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬೋಯಿಂಗ್‌ ವಿಮಾನದಲ್ಲಿ ಫ್ಯೂಯಲ್‌ ಸ್ವಿಚ್‌ ಅನ್ನು ರನ್‌ ಮೋಡ್‌ಗೆ ಹಾಕಿದರೂ ಅದು ಆಫ್‌ ಆಗುತ್ತಿತ್ತು. ಇದು ಅಪಘಾತಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಬೆಳವಣಿಗೆ. ಆದರೆ ವಿಮಾನದಲ್ಲಿನ ಎರಡು ಎಂಜಿನ್‌ಗಳ ಪೈಕಿ ಒಂದರ ಸ್ವಿಚ್‌ ಮಾತ್ರ ಹೀಗಾದ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ವಿಮಾನ ಸಂಚಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಉಳಿದ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ಮರುಪರಿಶೀಲನೆ ಆರಂಭಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹55 ಲಕ್ಷದ ಚಿನ್ನ ಮರಳಿ ನೀಡಿದ ಸ್ಚಚ್ಛತಾ ಸಿಬ್ಬಂದಿ ಕರೆಸಿ ರಜನಿ ಸನ್ಮಾನ!
ಅಮೆರಿಕ ಡೀಲ್‌ನಲ್ಲಿ ಭಾರತದ ಕೃಷಿ, ಡೈರಿಗೆ ರಕ್ಷಣೆ