
ನವದೆಹಲಿ (ಆ.27): ಭಾರತೀಯ ರೈಲ್ವೆಯು ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಗೊಳಿಸಿದ್ದು, ಗಲೀಜು ಮಾಡುವುದು ಸೇರಿದಂತೆ ಹಲವು ಕೃತ್ಯಗಳಿಗೆ ದಂಡದ ಮೊತ್ತವನ್ನು ದ್ವಿಗುಣ ಮಾಡಿದೆ. ಈ ದಂಡವನ್ನು ಪಾವತಿಸದಿದ್ದರೆ ಆರೋಪಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈಗ ರೈಲ್ವೆ ಆವರಣದಲ್ಲಿ ಗಲೀಜು ಅಥವಾ ಅಸೌಚ ಮಾಡಿದರೆ ಕನಿಷ್ಠ 1 ಸಾವಿರ ರೂಪಾಯಿ ದಂಡ ವಿಧಿಸಬಹುದು. ಈ ಮೊದಲು ಈ ಮೊತ್ತ 500 ರೂಪಾಯಿ ಆಗಿತ್ತು. ರೈಲ್ವೆ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯ ಪ್ರಕಾರ, Indian Railways (Penalties for Activities Affecting Cleanliness at Railway Premises) Rules, 2012 ಕಾಯ್ದೆಗೆ ರೈಲ್ವೆಯು ತಿದ್ದುಪಡಿ ತಂದಿದೆ. ಹೊಸ ನಿಯಮಗಳು ಗೆಜೆಟ್ನಲ್ಲಿ ಪ್ರಕಟಗೊಂಡಿದ್ದು, ಅವುಗಳನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ.
ತಿದ್ದುಪಡಿ ಮಾಡಿದ ನಿಯಮದಂತೆ ರೈಲ್ವೆ ಆವರಣದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಈಗ 1 ಸಾವಿರ ರೂಪಾಯಿಯವರೆಗೆ ದಂಡ ವಿಧಿಸಬಹುದು. ಒಂದು ವೇಳೆ ವ್ಯಕ್ತಿಯು ದಂಡ ಪಾವತಿಸಲು ನಿರಾಕರಿಸಿದರೆ, ಆತನನ್ನು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಸಕ್ಷಮ ನ್ಯಾಯಾಲಯದ (ಕೋರ್ಟ್) ಮುಂದೆ ಹಾಜರುಪಡಿಸಬಹುದು. ನ್ಯಾಯಾಲಯವು ಅಂತಹ ಪ್ರಕರಣಗಳಲ್ಲಿ ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಬಹುದು.
ರೈಲ್ವೆಯ ಸ್ವಚ್ಛತಾ ನಿಯಮದಂತೆ ನಿಲ್ದಾಣ, ರೈಲು ಅಥವಾ ರೈಲ್ವೆ ಆವರಣದಲ್ಲಿ ಹಲವು ಕೃತ್ಯಗಳನ್ನು ನಿಷೇಧಿಸಲಾಗಿದೆ. ಅವುಗಳಲ್ಲಿ ಕೆಳಗಿನ ವಿಷಯಗಳು ಸೇರಿವೆ:
ಹೊಸ ನಿಯಮಗಳು ಕೇವಲ ಕಸ ಹಾಕುವುದರ ಮೇಲಿನ ಕ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ. ರೈಲು ಕೋಚ್ ಅಥವಾ ಇತರ ರೈಲ್ವೆ ಆಸ್ತಿಯ ಮೇಲೆ ಅನುಮತಿಯಿಲ್ಲದೆ ಪೋಸ್ಟರ್ ಅಂಟಿಸುವುದು, ಬರೆಯುವುದು ಅಥವಾ ಚಿತ್ರ ಬಿಡಿಸುವುದನ್ನು ಸಹ ನಿಷೇಧಿಸಲಾಗಿದೆ. ರೈಲ್ವೆ ಆಸ್ತಿಗೆ ಹಾನಿ ಉಂಟುಮಾಡುವುದು ಅಥವಾ ಅದನ್ನು ಹಾಳುಗೆಡವುವ ಕೃತ್ಯಗಳಿಗೆ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ರೈಲ್ವೆ ಆವರಣದಲ್ಲಿ ಕೆಲಸ ಮಾಡುವ ಅಧಿಕೃತ ವೆಂಡರ್ಗಳು (ಮಾರಾಟಗಾರರು) ಮತ್ತು ಹಾಕರ್ಸ್ಗಳಿಗೂ ಈ ಸ್ವಚ್ಛತಾ ನಿಯಮಗಳು ಅನ್ವಯವಾಗಲಿವೆ. ಅವರು ಕಸ ಸಂಗ್ರಹಿಸಲು ಡಸ್ಟ್ಬಿನ್ (ಡಬ್ಬಿ) ಅಥವಾ ಸೂಕ್ತ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಸಂಗ್ರಹವಾದ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿ ಕೂಡ ಅವರದ್ದೇ ಆಗಿರುತ್ತದೆ.
ರೈಲ್ವೆ ನಿಯಮಗಳ ಪ್ರಕಾರ, ಕೆಲವು ಅಧಿಕಾರಿಗಳಿಗೆ ಈ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲು ಮತ್ತು ಅದನ್ನು ವಸೂಲಿ ಮಾಡಲು ಅಧಿಕಾರ ನೀಡಲಾಗಿದೆ. ಇದರಲ್ಲಿ ಸ್ಟೇಷನ್ ಮಾಸ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್, ವಾಣಿಜ್ಯ ವಿಭಾಗದ ಟಿಕೆಟ್ ಕಲೆಕ್ಟರ್ ಮತ್ತು ಆಪರೇಟಿಂಗ್ ವಿಭಾಗದ ಸಮಾನ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ. ಇದಲ್ಲದೆ ರೈಲ್ವೆ ಆಡಳಿತದ ಪರವಾಗಿ ಅಧಿಕಾರ ಪಡೆದ ಇತರ ಅಧಿಕಾರಿಗಳು ಸಹ ನಿಯಮಗಳ ಉಲ್ಲಂಘನೆಯಾದಾಗ ದಂಡ ವಸೂಲಿ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ