ನೌಕಾಪಡೆಗೆ 'ಇಂಫಾಲ್‌' ಬಲ: ರಾಡಾರ್ ಕಣ್ತಪ್ಪಿಸಿ ಬರುವ ಗೈಡೆಡ್‌ ಮಿಸೈಲ್‌ ಹೊಡೆದುರುಳಿಸುವ ಶಕ್ತಿ

Published : Dec 27, 2023, 08:10 AM ISTUpdated : Dec 27, 2023, 08:12 AM IST
 ನೌಕಾಪಡೆಗೆ 'ಇಂಫಾಲ್‌' ಬಲ: ರಾಡಾರ್ ಕಣ್ತಪ್ಪಿಸಿ ಬರುವ ಗೈಡೆಡ್‌ ಮಿಸೈಲ್‌ ಹೊಡೆದುರುಳಿಸುವ ಶಕ್ತಿ

ಸಾರಾಂಶ

ರಾಡಾರ್‌ಗಳ ಕಣ್ತಪ್ಪಿಸಿ ದಾಳಿ ನಡೆಸಲು ಬರುವ ಗೈಡೆಡ್‌ ಕ್ಷಿಪಣಿಗಳನ್ನು ಹೊಡೆದುರುಳಿಸುವ ಹಾಗೂ ಅಣು, ಜೈವಿಕ ಮತ್ತು ರಾಸಾಯನಿಕ ಯುದ್ಧಗಳ ಸಂದರ್ಭದಲ್ಲಿ ದೇಶದ ರಕ್ಷಣೆಗೆ ನಿಲ್ಲುವ ಭಾರತೀಯ ನೌಕಾಪಡೆಯ ‘ಇಂಫಾಲ್‌’ ಯುದ್ಧ ನೌಕೆ ರಾಷ್ಟ್ರಕ್ಕೆ ಸಮರ್ಪಣೆಯಾಗಿದೆ. ಇದರಿಂದಾಗಿ ನೌಕಾಪಡೆಗೆ ಹೊಸ ಬಲ ಬಂದಿದೆ.

ಮುಂಬೈ: ರಾಡಾರ್‌ಗಳ ಕಣ್ತಪ್ಪಿಸಿ ದಾಳಿ ನಡೆಸಲು ಬರುವ ಗೈಡೆಡ್‌ ಕ್ಷಿಪಣಿಗಳನ್ನು ಹೊಡೆದುರುಳಿಸುವ ಹಾಗೂ ಅಣು, ಜೈವಿಕ ಮತ್ತು ರಾಸಾಯನಿಕ ಯುದ್ಧಗಳ ಸಂದರ್ಭದಲ್ಲಿ ದೇಶದ ರಕ್ಷಣೆಗೆ ನಿಲ್ಲುವ ಭಾರತೀಯ ನೌಕಾಪಡೆಯ ‘ಇಂಫಾಲ್‌’ ಯುದ್ಧ ನೌಕೆ ರಾಷ್ಟ್ರಕ್ಕೆ ಸಮರ್ಪಣೆಯಾಗಿದೆ. ಇದರಿಂದಾಗಿ ನೌಕಾಪಡೆಗೆ ಹೊಸ ಬಲ ಬಂದಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌ ಅವರು ‘ಇಂಫಾಲ್‌’ ಅನ್ನು ನೌಕಾಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಫಾಲ್‌ ಎಂಬುದು ಮಣಿಪುರದ ರಾಜಧಾನಿಯ ಹೆಸರು. ಇದೇ ಮೊದಲ ಬಾರಿಗೆ ಯುದ್ಧ ನೌಕೆಯೊಂದಕ್ಕೆ ಈಶಾನ್ಯ ಭಾರತದ ನಗರವೊಂದರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂಬುದು ಗಮನಾರ್ಹ.

ಕರಾಚಿಯಲ್ಲಿ ಚೀನಾ ಯುದ್ಧನೌಕೆ, ಸಬ್‌ಮರೀನ್‌ ಲಂಗರು: ಪಾಕ್‌ ಜತೆ ಸೇರಿ ಜಂಟಿ ನೌಕಾ ತಾಲೀಮು

ಮಜಗಾಂವ್‌ ಡಾಕ್‌ ಕಂಪನಿ ಈ ನೌಕೆಯನ್ನು ನಿರ್ಮಾಣ ಮಾಡಿ ಕಳೆದ ಅ.30ರಂದು ನೌಕಾಪಡೆಗೆ ಹಸ್ತಾಂತರಿಸಿತ್ತು. ಶೇ.75ರಷ್ಟು ಸ್ವದೇಶಿ ವಸ್ತುಗಳನ್ನೇ ಬಳಸಿ ಇಂಫಾಲ್‌ ಅನ್ನು ನಿರ್ಮಿಸಲಾಗಿದೆ. ದೇಶದ ಕರಾವಳಿ ಭದ್ರತೆಯನ್ನು ಬಲಗೊಳಿಸುವ ಉದ್ದೇಶದಿಂದ ಇಂಫಾಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ನೌಕೆಯ ವಿಶೇಷತೆ:

ಶತ್ರುಪಡೆಗಳಿಗೆ ಅತ್ಯಂತ ಅಪಾಯಕಾರಿ ಯುದ್ಧ ನೌಕೆ ಇದಾಗಿದ್ದು, 163 ಮೀಟರ್‌ ಉದ್ದವಿದೆ. 17 ಮೀಟರ್‌ ಅಗಲವಿದ್ದು, 7400 ಟನ್‌ ತೂಕವಿದೆ. ಮಧ್ಯಮ ವ್ಯಾಪ್ತಿಯ, ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಇಂಫಾಲ್‌ ಹೊಂದಿದೆ. ಕಣ್ಗಾವಲು ಇಡುವ ಅತ್ಯಾಧುನಿಕ ರಾಡಾರ್‌ ಅನ್ನು ಕೂಡ ಹೊಂದಿದೆ. ಬ್ರಹ್ಮೋಸ್‌ ಕ್ಷಿಪಣಿಗಳನ್ನು ಕೂಡ ಉಡಾಯಿಸಬಲ್ಲದು.

Breaking: ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಭಾರತೀಯ Navy ಅಧಿಕಾರಿಗಳಿಗೆ ಕತಾರ್‌ನಿಂದ ಗಲ್ಲು ಶಿಕ್ಷೆ!

ಭಾರತದ ಬಳಿ ಸದ್ಯ 132 ಯುದ್ಧ ನೌಕೆಗಳು ಇವೆ. 2035ರ ವೇಳೆಗೆ ಇವುಗಳ ಸಂಖ್ಯೆಯನ್ನು 170ರಿಂದ 175ಕ್ಕೆ ಹೆಚ್ಚಿಸುವ ಗುರಿಯನ್ನು ನೌಕಾಪಡೆ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!