
ನವದೆಹಲಿ (ಮೇ.18): ನಟಿ ರಶ್ಮಿಕಾ ಮಂದಣ್ಣ ಅವರು ನರೇಂದ್ರ ಮೋದಿ ಅವಧಿಯಲ್ಲಿ ನಿರ್ಮಿತ ಆಗಿರುವ ಅಟಲ್ ಸೇತುವನ್ನು ವಿಡಿಯೋದಲ್ಲಿ ಹೊಗಳಿರುವುದಕ್ಕೆ ಕೇರಳ ಕಾಂಗ್ರೆಸ್ ಘಟಕ ಕಿಡಿಕಾರಿದೆ. ‘ಇದು ಇ.ಡಿ. ನಿರ್ದೇಶನದ ಬಾಡಿಗೆ ಜಾಹೀರಾತು’ ಎಂದು ಕಿಡಿಕಾರಿದೆ. ರಶ್ಮಿಕಾ ಈ ಹಿಂದೆ ತೆರಿಗೆ ಇಲಾಖೆ ನೋಟಿಸ್ ಬಂದಿತ್ತು ಎನ್ನಲಾಗಿತ್ತು. ಹೀಗಾಗಿ ಕಾಂಗ್ರೆಸ್ ಈ ಆರೋಪ ಮಾಡಿದೆ.
ಇದೇ ವೇಳೆ, ‘ರಶ್ಮಿಕಾ ತೋರಿಸಿದ ಅಟಲ್ ಸೇತು ಖಾಲಿ ಆಗಿದೆ ಎಂಬುದನ್ನು ಗಮನಿಸಿದ್ದೇವೆ. ಹೀಗಾಗಿ ಕಾಂಗ್ರೆಸ್ ಕಾಲದಲ್ಲಿ 2009ರಲ್ಲಿ ಉದ್ಘಾಟನೆಯಾದ ಮುಂಬೈನ ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯನ್ನು ನಾವು ಪರಿಶೀಲಿಸಿದೆವು. ₹ 1,634 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 5.6 ಕಿ.ಮೀ ಬಾಂದ್ರಾ-ವರ್ಲಿ ಸೀ ಲಿಂಕ್ ಯಾವುದೇ ಪ್ರಾಯೋಜಿತ ಜಾಹೀರಾತಿಲ್ಲದೆ ಜನಪ್ರಿಯತೆ ಗಳಿಸಿತು. ಇಲ್ಲಿ ಪ್ರತಿ ಕಾರಿಗೆ ₹85 ಶುಲ್ಕ ವಿಧಿಸಲಾಗುತ್ತದೆ. ಇದರ ಆದಾಯವು ಮಾರ್ಚ್ 2022 ರಲ್ಲಿ ₹9.95 ಕೋಟಿಗಳಷ್ಟಿತ್ತು’ ಎಂದಿದೆ.
ಅಟಲ್ ಸೇತುಗೆ ನಟಿ ರಶ್ಮಿಕಾ ಮೆಚ್ಚುಗೆಗೆ ಮೋದಿ ಕೃತಜ್ಞತೆ: ನ್ಯಾಷನಲ್ ಕ್ರಶ್ ಈಗ ನ್ಯಾಷನಲಿಸ್ಟ್ ಎಂದು ಕಾಮೆಂಟ್
‘ಆದರೆ ಅಟಲ್ ಸೇತು ₹17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಒಂದೇ ಟ್ರಿಪ್ಗೆ ಪ್ರತಿ ಕಾರಿಗೆ ₹250 ಟೋಲ್ ದರವನ್ನು ನಿಗದಿಪಡಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಅಸಹನೀಯವಾಗಿದೆ. ಇದರ ಉದ್ಘಾಟನೆಯ ನಂತರ, 102 ದಿನಗಳಲ್ಲಿ ಒಟ್ಟು ₹22.57 ಕೋಟಿ ಸಂಗ್ರಹಿಸಲಾಗಿದೆ. ಇದು ಕೇವಲ ₹6.6 ಕೋಟಿಯ ಮಾಸಿಕ ಆದಾಯಕ್ಕೆ ಸಮ’ ಎಂದು ಟೀಕಿಸಿದೆ.
ಮೋದಿ ಅಭಿವೃದ್ಧಿ ರಾಜಕೀಯಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಪರಾಕ್!
‘ಈ ದರದಲ್ಲಿ, ₹17,840 ಕೋಟಿ ಹೂಡಿಕೆಯನ್ನು ಮರುಪಡೆಯಲು 225 ವರ್ಷಗಳು ಬೇಕಾಗುತ್ತವೆ, ಆದರೆ ಬಡ್ಡಿಗೆ ಲೆಕ್ಕವಿಲ್ಲ. ಬಾಂದ್ರಾ-ವರ್ಲಿ ಸೀ ಲಿಂಕ್ಗೆ ಹೋಲಿಸಿದರೆ ಸೇತುವೆಯನ್ನು ಸರಿಸುಮಾರು 20% ವಾಹನಗಳು ಬಳಸುತ್ತಿವೆ ಎಂದು ಇದು ಸೂಚಿಸುತ್ತದೆ. ಉದ್ಘಾಟನೆಗೂ ಮುನ್ನ ಅಂದಾಜು ಮಾಸಿಕ ಆದಾಯ ₹30 ಕೋಟಿ ಬರಬೇಕಿತ್ತು. ಹೀಗಾಗಿ ಪ್ರತಿ ತಿಂಗಳು ₹23.4 ಕೋಟಿ ಕೊರತೆಯಾಗುತ್ತಿದೆ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ