ಪಾಕ್ ನಿರ್ಬಂಧದಿಂದ ಭಾರತೀಯ ವಿಮಾನಯಾನಕ್ಕೆ ₹3700 ಕೋಟಿ ಹೊರೆ

Published : May 01, 2025, 07:16 AM ISTUpdated : May 01, 2025, 07:40 AM IST
ಪಾಕ್ ನಿರ್ಬಂಧದಿಂದ ಭಾರತೀಯ ವಿಮಾನಯಾನಕ್ಕೆ ₹3700 ಕೋಟಿ ಹೊರೆ

ಸಾರಾಂಶ

ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯುಸೀಮೆ ನಿರ್ಬಂಧಿಸಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ವಾರ್ಷಿಕ 3700 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಲಿದೆ.

ಮುಂಬೈ/ನವದೆಹಲಿ: ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯುಸೀಮೆ ನಿರ್ಬಂಧಿಸಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ವಾರ್ಷಿಕ 3700 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಲಿದೆ.

ಉದಾಹರಣೆಗೆ ಉತ್ತರ ಭಾರತದಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ವಿಮಾನ 45 ನಿಮಿಷಗಳ ಕಾಲ ಹೆಚ್ಚುವರಿ ಹಾರಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ಪ್ರತಿ ಗಂಟೆಗೆ 5 ಲಕ್ಷ ರು. ಖರ್ಚಾಗಲಿದೆ. ಮತ್ತೊಂದೆಡೆ ಅಮೆರಿಕ, ಯೂರೋಪ್‌ಗಳಿಗೆ ತೆರಳು ವಿಮಾನಗಳು 1.5 ತಾಸು ಹೆಚ್ಚು ಹಾರಾಟ ನಡೆಸಬೇಕಾಗುತ್ತದೆ. ಇದರಿಂದ ಯೂರೋಪ್‌ ವಿಮಾನಗಳಿಗೆ 22 ಲಕ್ಷ ರು. ಮತ್ತು ಅಮೆರಿಕ ವಿಮಾನಗಳಿಗೆ 29 ಲಕ್ಷ ರು. ಅಧಿಕ ವೆಚ್ಚ ತಗುಲಲಿದೆ.

ಇದೆಲ್ಲಾ ಕೂಡಿಸಿದರೆ ಮಾಸಿಕ 300 ಕೋಟಿ ರು.ಗೂ ಅಧಿಕ ವೆಚ್ಚ ಭಾರತೀಯ ಕಂಪನಿಗಳ ಮೇಲೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಇಂಡಿಗೋ ಕಂಪನಿಯು ಪಾಕ್‌ ನಿರ್ಧಾರದಿಂದ ತನ್ನ ಕಜಾಕಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಹೋಗುವ ವಿಮಾನಗಳನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಇನ್ನು 36 ಗಂಟೆಯಲ್ಲಿ ಭಾರತದಿಂದ ದಾಳಿ : ಪಾಕ್‌ ಸಚಿವ ಆತಂಕ

ಭಾರತ- ಪಾಕ್‌ ಉದ್ವಿಗ್ನ : ಪಾಕ್‌ ಷೇರುಪೇಟೆ 3225 ಅಂಕ ಕುಸಿತ

ಕರಾಚಿ: ಪಹಲ್ಗಾಂ ನರಮೇಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಬಹುತೇಕ ಖಚಿತ ಎಂಬ ಭೀತಿ ಬುಧವಾರ ಪಾಕಿಸ್ತಾನ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ ಪಾಕಿಸ್ತಾನದ ಷೇರುಪೇಟೆಯ ಪಿಎಸ್‌ಎಕ್ಸ್‌ ಸೂಚ್ಯಂಕ 3000 ಅಂಕಗಳಷ್ಟು ಕುಸಿತ ಕಂಡಿದೆ. 

ಇದನ್ನೂ ಓದಿ: ಭಾರತದ ದಾಳಿ ಭೀತಿಗೆ ಪಾಕಿಸ್ತಾನದ ಮುಂಚೂಣಿ ನೆಲೆಗಳು ಖಾಲಿ!

ಇನ್ನೊಂದೆಡೆ ಕೆಎಸ್‌ಇ ಸೂಚ್ಯಂಕವು 1717 ಅಂಕಗಳಷ್ಟು ಕುಸಿತ ಕಂಡು ದಿನದ ಅಂತ್ಯಕ್ಕೆ 1,13,154ರಲ್ಲಿ ಮುಕ್ತಾಯಗೊಂಡಿತು. ಇನ್ನು ಪಿಎಸ್‌ಎಕ್ಸ್‌ 3255 ಅಂಕ ಇಳಿಕೆಯಾಯಿತು. ಪಾಕ್‌ ಸಚಿವ ಅತಾವುಲ್ಲಾ ಮುಂದಿನ 24-36 ಗಂಟೆಗಳಲ್ಲಿ ಭಾರತ ದಾಳಿ ಮಾಡಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಅನಿಶ್ಚಿತತೆ ಉಂಟಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ