Corona Vaccine: 12-14 ವರ್ಷದವರಿಗೆ ಲಸಿಕಾರಣ ಆರಂಭ, ಒಂದೇ ದಿನ 2.11 ಲಕ್ಷ ಡೋಸ್‌

Published : Mar 17, 2022, 04:53 AM ISTUpdated : Mar 17, 2022, 07:20 AM IST
Corona Vaccine: 12-14 ವರ್ಷದವರಿಗೆ ಲಸಿಕಾರಣ ಆರಂಭ, ಒಂದೇ ದಿನ 2.11 ಲಕ್ಷ ಡೋಸ್‌

ಸಾರಾಂಶ

*  12-14 ವರ್ಷದವರಿಗೆ ಲಸಿಕಾರಣ ಆರಂಭ  * ಮೊದಲ ದಿನ 2.11 ಲಕ್ಷ ಡೋಸ್‌ ವಿತರಣೆ * ಭಾರತ ಲಸಿಕಾಕರಣ ವಿಜ್ಞಾನಾಧರಿತ, ಜನಾಧರಿತ: ಮೋದಿ *ಅತಿದೊಡ್ಡ ಲಸಿಕಾ ಅಭಿಯಾನ ನಡೆಸಿದ್ದ ಭಾರತ

ನವದೆಹಲಿ(ಮಾ. 17) 12-14ರ ವಯೋಮಾನದ ಮಕ್ಕಳಿಗೆ ಲಸಿಕೆ (Vaccine) ನೀಡುವ ಅಭಿಯಾನ ಬುಧವಾರ ಮಧ್ಯಪ್ರದೇಶ (Madya Pradesh) ಹೊರತುಪಡಿಸಿ ದೇಶಾದ್ಯಂತ ಆರಂಭವಾಗಿದೆ. ಮೊದಲ ದಿನ 2.11 ಲಕ್ಷ ಡೋಸ್‌ ವಿತರಣೆ ಮಾಡಲಾಗಿದೆ.

ಇದೇ ವೇಳೆ, ಯಾವುದೇ ಪೂರ್ವ ರೋಗ ಇಲ್ಲದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ (ಮುಂಜಾಗ್ರತಾ) ಡೋಸ್‌ ನೀಡಲು ಆರಂಭಿಸಲಾಗಿದೆ.

ಮಕ್ಕಳಿಗೆ ಕೊರ್ಬೆವ್ಯಾಕ್ಸ್‌ ಲಸಿಕೆ ನೀಡಿದರೆ, ಬೂಸ್ಟರ್‌ ಡೋಸ್‌ ಆಗಿ ಈ ಹಿಂದೆ ಪಡೆದಿರುವ ಲಸಿಕೆಯನ್ನೇ ನೀಡಲಾಗುತ್ತಿದೆ. ಮಾ.1,2021ರ ದತ್ತಾಂಶಗಳ ಪ್ರಕಾರ ದೇಶದಲ್ಲಿ ಈ ವಯೋಮಾನದ 4.7 ಕೋಟಿ ಮಕ್ಕಳಿದ್ದಾರೆ.

ಲಸಿಕೆ ಪಡೆಯಿರಿ- ಮೋದಿ: ಈ ಬಗ್ಗೆ ಮಾತನಾಡಿದ ಪ್ರಧಾನಿ (Narendra Modi) ಮೋದಿ, ‘ಭಾರತದ ಕೋವಿಡ್‌ ಲಸಿಕೆ ಅಭಿಯಾನವು ವಿಜ್ಞಾನ ಆಧರಿತ ಹಾಗೂ ಜನಾಧರಿತವಾಗಿದೆ. ದೇಶವು ಕೊರೋನಾ ಮಾರಣಾಂತಿಕ ವೈರಸ್‌ ವಿರುದ್ಧ ಹೋರಾಡುವಲ್ಲಿ ಉತ್ತಮ ಸ್ಥಿತಿಯಲ್ಲಿದೆ ಆದರೆ, ಎಲ್ಲರೂ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು. ಕೋವಿಡ್‌ ಲಸಿಕೆ ನೀಡುವ ಭಾರತದ ಪ್ರಯತ್ನದಲ್ಲಿ ಇಂದು ಮಹತ್ವದ ದಿನ. 12-14 ವರ್ಷದೊಳಗಿನ ಯುವ ಸಮುದಾಯ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು 60 ವರ್ಷ ಮೇಲ್ಪಟ್ಟವರೆಲ್ಲರೂ ಬೂಸ್ಟರ್‌ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ನಾನು ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ

Coronavirus:  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO

ಚೀನಾದಲ್ಲಿ(China) ಕೋವಿಡ್‌ ಹೆಚ್ಚಳ: ಕೇಂದ್ರದ ಎಚ್ಚರಿಕೆ: ಚೀನಾ, ಪೂರ್ವ ಏಷ್ಯಾ ರಾಷ್ಟ್ರಗಳು ಮತ್ತು ಯುರೋಪ್‌ನಲ್ಲಿ ಕೋವಿಡ್‌ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಅನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ಹೆಚ್ಚಾಗುತ್ತಿರುವುದರಿಂದ ಉನ್ನತ ಮಟ್ಟದ ಸಭೆ ನಡೆಸಿದ ಮಾಂಡವೀಯ ಅವರು, ಅಂತಾರಾಷ್ಟ್ರೀಯ ವಿಮಾನ ಪುನಾರಂಭ, ಲಸಿಕಾಕರಣದ ಪರಿಸ್ಥಿತಿ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಮೇಲೆ ಕಣ್ಗಾವಲು ಕುರಿತಾಗಿ ಚರ್ಚೆ ನಡೆಸಿದರು.

‘ಚೀನಾ, ಸಿಂಗಾಪುರ್‌, ಹಾಂಗ್‌ಕಾಂಗ್‌, ವಿಯೆಟ್ನಾಂ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕೋವಿಡ್‌ ಹೆಚ್ಚಾಗುತ್ತಿದೆ. ಹಾಗಾಗಿ ಜಾಗರೂಕರಾಗಿರಬೇಕು ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಅನ್ನು ಪರಿಣಾಮಕಾರಿಯಾಗಿ ನಡೆಸಬೇಕು’ ಎಂದು ಹೇಳಿದರು.

ಈ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ಡಾ.ರಾಜೇಶ್‌ ಗೋಖಲೆ, ಏಮ್ಸ್‌ನ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಸೇರಿದಂತೆ ಹಲವು ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಲಕ್ನೋ: ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್