LIVE NOW
Published : Sep 19, 2026, 07:46 AM ISTUpdated : Sep 19, 2026, 09:30 AM IST

India News Live Updates 19th Sep: ವೆಲ್‌ಕಮ್‌ ಟು ನಗೋಯಾ; ನಿಮಗೆ ಗೊತ್ತಾ, ಏಷ್ಯನ್‌ ಗೇಮ್ಸ್‌ನ ಮೊದಲ ಮಾಸ್ಕಾಟ್‌ ಹೆಸರು ‘ಅಪ್ಪು’!

ಸಾರಾಂಶ

ನವದೆಹಲಿ: ಜಾಗತಿಕ ಏರಿಳಿತಗಳು, ಮಧ್ಯಪ್ರಾಚ್ಯ ಸಂಘರ್ಷ, ಎಲ್‌ ನಿನೋ ಎಫೆಕ್ಟ್‌ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಜಾಗತಿಕ ರೇಟಿಂಗ್‌ ಏಜೆನ್ಸಿಗಳಲ್ಲಿ ಒಂದಾಗಿರುವ ಮೂಡೀಸ್‌, ಇದೀಗ ದೇಶದ ಆರ್ಥಿಕ ಬೆಳವಣಿಗೆ ದರದ ಮುನ್ನೋಟವನ್ನು ತನ್ನ ಈ ಹಿಂದಿನ ಶೇ.6ರಿಂದ ಶೇ.7ಕ್ಕೇರಿಸಿದೆ.

ಭಾರತದ ಬಿಎಎ3 ಸಾವರಿನ್‌ ರೇಟಿಂಗ್‌ ಮೇಲಿನ ನಿಯಮಿತ ಪರಿಶೀಲನೆ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮೂಡೀಸ್‌, ದೇಶದ ಸಾಲ ಮರುಪಾವತಿಯು ನಿಧಾನವಾಗಿ ಹೆಚ್ಚಾಗಲಿದೆ ಎಂದು ಹೇಳಿದೆ.

ಆದರೆ, ಮಧ್ಯಏಷ್ಯಾ ಸಂಘರ್ಷ ಮುಂದುವರಿಕೆ, ತೈಲ ದರ ಏರಿಕೆ ಹಾಗೂ ವಾರ್ಷಿಕ ಸರಾಸರಿ ಹಣದುಬ್ಬರದ ಹೆಚ್ಚಳ, ಎಲ್‌ ನಿನೋ ಪರಿಣಾಮಗಳಿಂದಾಗಿ ಆಹಾರ ವಸ್ತುಗಳ ದರ ಏರಿಕೆಯಾಗಬಹುದು. ಇದು ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದೂ ಎಚ್ಚರಿಸಿದೆ.

09:30 AM (IST) Sep 19

ವೆಲ್‌ಕಮ್‌ ಟು ನಗೋಯಾ; ನಿಮಗೆ ಗೊತ್ತಾ, ಏಷ್ಯನ್‌ ಗೇಮ್ಸ್‌ನ ಮೊದಲ ಮಾಸ್ಕಾಟ್‌ ಹೆಸರು ‘ಅಪ್ಪು’!

ಜಪಾನ್‌ನ ಐಚಿ ಮತ್ತು ನಗೋಯಾದಲ್ಲಿ 20ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಡೆಯಲು ಸಜ್ಜಾಗಿದೆ. 1951ರಲ್ಲಿ ಭಾರತದಲ್ಲಿಯೇ ಆರಂಭವಾದ ಈ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 779 ಪದಕಗಳನ್ನು ಗೆದ್ದು ಬೀಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 45 ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.
Read Full Story

09:23 AM (IST) Sep 19

ಮೊಬೈಲ್‌ ಬಳಕೆದಾರರಿಗೆ ಕೇಂದ್ರ ಬಿಗ್‌ ರಿಲೀಫ್! ಏರ್‌ಟೆಲ್, ಜೀಯೋ ದುಬಾರಿ ರೀಚಾರ್ಜ್ ಪ್ಲಾನ್‌ಗೆ ಬೀಳಲಿದೆ ಬ್ರೇಕ್‌

ದುಬಾರಿ ಮೊಬೈಲ್ ರೀಚಾರ್ಜ್‌ಗಳಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ರಿಲೀಫ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಟೆಲಿಕಾಂ ಕಂಪನಿಗಳ ಮೇಲಿನ ತೆರಿಗೆ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಜಿಯೋ, ಏರ್‌ಟೆಲ್ ಮತ್ತು ವಿಐ ಗ್ರಾಹಕರ ಮಾಸಿಕ ರೀಚಾರ್ಜ್ ದರಗಳು ಶೇ. 10 ರಿಂದ 15 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
Read Full Story

08:37 AM (IST) Sep 19

ಸಿಕ್ಕಿಂ ಗಡಿ ದೇಶದಲ್ಲೇ ಅತಿ ವಿಭಿನ್ನ ಟೂರಿಸಂ ತಾಣ, ಅನ್ಯ ಕಾರಣಕ್ಕೂ ಪ್ರಸಿದ್ಧಿ, ಇಲ್ಲಿ ಅದೃಶ್ಯ ಯೋಧನೇ ದೇವರು!

ಸಿಕ್ಕಿಂನ ನಾಥೂ ಲಾ ಪಾಸ್ ಕೇವಲ ಪ್ರವಾಸಿ ತಾಣವಲ್ಲ, ಬದಲಾಗಿ ಭಾರತದ ಗಡಿ ಭದ್ರತೆ ಮತ್ತು ಸೈನಿಕರ ಶೌರ್ಯವನ್ನು ಸಾರುವ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿನ ಬಾಬಾ ಹರ್ಭಜನ್ ಮಂದಿರದಲ್ಲಿ ಅದೃಶ್ಯ ಯೋಧನೊಬ್ಬ ಗಡಿ ಕಾಯುತ್ತಿದ್ದಾನೆ ಎಂಬ ನಂಬಿಕೆ ರೋಚಕವಾಗಿದೆ. ಇದರೊಂದಿಗೆ ತ್ಸ್ಯಾಂಗೋ ಸರೋವರ ಮತ್ತು ಗಡಿ ರಾಜತಾಂತ್ರಿಕತೆಯು ಈ ತಾಣದ ಪ್ರಮುಖ ಆಕರ್ಷಣೆಗಳಾಗಿವೆ.
Read Full Story

08:13 AM (IST) Sep 19

ನೀತಾ ಅಂಬಾನಿ ರಾಯಲ್‌ ನೆಕ್ಲೆಸ್‌ ವೈರಲ್, 14 ಅಕ್ಕಸಾಲಿಗರು 3 ವರ್ಷದಿಂದ ಮಾಡಿರೋ ಬೃಹತ್‌ ಹಾರ! ಬೆಲೆ ಎಷ್ಟು?

ಗಣೇಶ ಹಬ್ಬದಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ 'ಆಮ್ರಪಾಲಿ ಭಾರತಂ' ಎಂಬ ವಿಶೇಷ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ದೇಶದ ವಿವಿಧ ಭಾಗಗಳ ಪ್ರಾಚೀನ ಆಭರಣಗಳನ್ನು3 ವರ್ಷಗಳ ಕಾಲ ಸಂಗ್ರಹಿಸಿ ಈ ಅಪರೂಪದ ಹಾರವನ್ನು ತಯಾರಿಸಲಾಗಿದೆ. ಇದರ ಬೆಲೆ ಬಹಿರಂಗವಾಗಿಲ್ಲದಿದ್ದರೂ, ಇದು ಲಕ್ಷಾಂತರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

Read Full Story

08:09 AM (IST) Sep 19

ಕನ್ನಡಿಗ ನಂದನ್ ನಿಲೇಕಣಿ ಸಮಿತಿಯಿಂದ ಮಾಸಾಂತ್ಯಕ್ಕೆ ನೀಟ್‌ ಸುಧಾರಣಾ ವರದಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

ನೀಟ್‌ ಪರೀಕ್ಷಾ ಸುಧಾರಣೆಗಾಗಿ ರಚಿಸಲಾದ ನಂದನ್‌ ನಿಲೇಕಣಿ ನೇತೃತ್ವದ ಸಮಿತಿಯು ಈ ತಿಂಗಳಾಂತ್ಯಕ್ಕೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಸಲಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಎನ್‌ಟಿಎ ಘಟಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದೆ.
Read Full Story

More Trending News