ವಿಶ್ವದ ಆದ್ಯತೆಯ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಭಾರತ; ಪ್ರಧಾನಿ ಮೋದಿ!

Published : Nov 05, 2020, 07:49 PM IST
ವಿಶ್ವದ ಆದ್ಯತೆಯ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಭಾರತ; ಪ್ರಧಾನಿ ಮೋದಿ!

ಸಾರಾಂಶ

ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಂವಹನ ನಡೆಸಿದ್ದಾರೆ.  ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದ ಮೂಲಕ  ಮೋದಿ ವಿದೇಶಿ ಹೂಡಿಕೆದಾರರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.  ವರ್ಚುವಲ್  ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದಲ್ಲಿ ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

ನವದೆಹಲಿ(ನ.05):  ವಿಶ್ವದಲ್ಲಿ ಭಾರತ ಅತ್ಯಂತ ವಿಶ್ವಾರ್ಹ ಹಾಗೂ ನಂಬಕಸ್ಥ ಹೂಡಿಕೆ ತಾಣವಾಗಿ ಬೆಳೆದಿದೆ. ಹೀಗಾಗಿ ಭಾರತ ವಿಶ್ವದ ಆದ್ಯತೆಯ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಸಮ್ಮೇಳನದಲ್ಲಿ ಹೂಡಿಕೆದಾರರನ್ನುದ್ದೇಶಿ ಮೋದಿ ಮಾತನಾಡಿದರು.

ಎಲ್ಲಾ ಭಾರತೀಯರಿಗೆ ಕೊರೋನಾ ಲಸಿಕೆ, ಇದು ಮೋದಿ ಭರವಸೆ!

ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆತ್ಮನಿರ್ಭರ್ ಭಾರತ್ ಕೇವಲ ಯೋಜನೆಯಲ್ಲ, ಇದರಲ್ಲಿ ಆರ್ಥಿಕ ತಂತ್ರವೂ ಅಡಗಿದೆ ಎಂದು ಮೋದಿ ಹೇಳಿದರು.  ಕಾರ್ಮಿಕರ ಕೌಶಲ್ಯ, ಪ್ರತಿಭೆ ಹಾಗೂ ಸಾಮರ್ಥ್ಯದಿಂದ  ಜಾಗತಿಕ ಮಟ್ಟದಲ್ಲಿ ಭಾರತ ಅತೀ ದೊಡ್ಡ ಉತ್ಪದಾನ ಕೇಂದ್ರವಾಗಿ ಮಾಡಲು ಆತ್ಮನಿರ್ಭರ್ ಭಾರತ  ನೆರವಾಗಲಿದೆ ಎಂದರು.

 

ಮೋದಿ ಉದ್ಘಾಟಿಸಿದ ಸೀ ಪ್ಲೇನ್‌ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್‌!.

ಭಾರತವು ಪ್ರಜಾಪ್ರಭುತ್ವ ಜನಸಂಖ್ಯಾ ಶಕ್ತಿ, ಬೇಡಿಕೆ ಮತ್ತು ವೈವಿಧ್ಯತೆಯಲ್ಲಿ ಭಾರತ ನಂಬಿಕೆ ಇಟ್ಟಿದೆ.  ಹೂಡಿಕೆದಾರರ ಪ್ರತಿಯೊಂದು ರೂಪಾಯಿ ಸುರಕ್ಷಿತವಾಗಿರಬೇಕು. ಇಷ್ಟೇ ಅಲ್ಲ ಹೂಡಿಕೆದಾರರಿಗೆ ಆದಾಯದಲ್ಲೂ ಯಾವುದೇ ಅಡತಡೆಗಳಿರಬಾರದು. ಈ ನಿಟ್ಟಿನಲ್ಲಿ ಸಮಸ್ಯೆಗಳಳನ್ನು ಪರಿಹರಿಸಿ ಭಾರತದಲ್ಲಿ ಸುಲಭ ಹಾಗೂ ಸರಳವಾಗಿ ಹೂಡಿಕೆ ಮಾಡಿ ಆದಾಯ ತೆಗೆಯುವ ಅವಕಾಶಗಳನ್ನು ಸೃಷ್ಟಿಸಲಿದ್ದೇವೆ ಎಂದು ಮೋದಿ ಹೇಳಿದರು.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಸದ್ಯ ಭಾರತದಲ್ಲಿ ಗುಣಮುಖರ ಸಂಖ್ಯೆ ಶೇಕಡಾ 90 ದಾಟಿದೆ. ಆರ್ಥಿಕತೆ ಚೇತರಿಸಿಕೊಂಡಿದೆ. ಪ್ರತಿ ಕ್ಷೇತ್ರಗಳನ್ನು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಹೂಡಿಕೆ ಮಾಡಿ ಆದಾಯ ಪಡೆಯಲು ಇದು ಸೂಕ್ತ ಕಾಲ. ಇಂತಹ ಅವಕಾಶವನ್ನು ಭಾರತ ಸೃಷ್ಟಿಸಿದೆ ಎಂದು ಮೋದಿ ಹೂಡಿಕೆದಾರರಿಗೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ