ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಗ್ಯಾಸ್ ಕೊರತೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದೀಗ ಭಾರತೀಯ ವಿಮಾನಯಾನ ಸಂಸ್ಥೆಗಳಿಗೂ ತಟ್ಟಿದೆ. ವಿಮಾನಗಳ ಇಂಧನ ಬಲೆ ಏರಿಕೆಯಾಗಿದೆ. ಏಷ್ಯಾ ಹಾಗೂ ಯೂರೋಪಿನ್ ದೇಶಗಳಿಗೆ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಕಾರಣ ವಿಮಾನ ಟಕೆಟ್ ದರಗಳು ಏರಿಕೆಯಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಹೇಳಿದ್ದಾರೆ. ಯುದ್ಧದಿಂದ ಭಾರತದಲ್ಲಿ ಆಗುತ್ತಿರುವ ಪರಿಣಾಮ, ಭಾರತದ ರಾಜತಾಂತ್ರಿಕ ಮಾತುಕತೆ, ಪಂಚ ರಾಜ್ಯ ಚುನಾವಣೆ ಸೇರಿದಂತೆ ಇಂದಿನ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.

09:49 AM (IST) Mar 22
ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಮಾಡಿದ ಆರೋಪ 'ಅವಿವೇಕದ್ದು' ಎಂದು ಮಾಜಿ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ. ರಾಜಕೀಯ ದುರುದ್ದೇಶದಿಂದ ಈ ಆರೋಪ ಮಾಡಲಾಗಿದೆ. ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ.
09:27 AM (IST) Mar 22
08:19 AM (IST) Mar 22
ಆಸ್ಪತ್ರೆ ಎಕ್ಸ್ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ, ಆಸ್ಪತ್ರೆ ಡೀನ್ ಕಚೇರಿಯ ಚಾಲಕ ರಹಸ್ಯವಾಗಿ ಮೊಬೈಲ್ ಮೂಲಕ ವಿವಸ್ತ್ರ ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ.
07:13 AM (IST) Mar 22
ಪ್ರತಿ ತಿಂಗಳ ಮೊದಲ ದಿನ ಎವಿಯೇಶನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ನಿರ್ಧಾರಗೊಳ್ಳುತ್ತದೆ. ಈಗಾಗಲೇ ಯುದ್ಧದ ಬಿಸಿ ತಟ್ಟಿರುವ ಕಾರಣ ಎಪ್ರಿಲ್ 1 ರಿಂದ ವಿಮಾನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವ ರಾಮ್ಮೋಹನ್ ನಾಯ್ಡು ಹೇಳಿದ್ದಾರೆ.