Published : Aug 10, 2025, 07:08 AM ISTUpdated : Aug 11, 2025, 12:00 AM IST

India Latest News Live: ಆಪರೇಷನ್ ಸಿಂದೂರ್ ನಂತರ ಭಾರತ-ಪಾಕ್ ಮತ್ತೆ ಮುಖಾಮುಖಿ! ಒಂದೇ ದಿನ, ಒಂದೇ ಸಮಯದಲ್ಲಿ ಕವಾಯತು!

ಸಾರಾಂಶ

ಬೆಂಗಳೂರು: ಒಂದೇ ವಿಳಾಸದಲ್ಲಿ ಹಲವು ಮತದಾರರು ಇದ್ದಾರೆ, ಗುರುತಿನ ಚೀಟಿ ಹೊಂದಿದ್ದಾರೆ, ಒಬ್ಬನೇ ವ್ಯಕ್ತಿ ಹಲವೆಡೆ ಮತ ಹಕ್ಕು ಹೊಂದಿದ್ದಾನೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಅನೇಕ ಆರೋಪಗಳಿಗೆ ಸ್ಥಳೀಯರು ತಿರುಗೇಟು ಕೊಟ್ಟಿದ್ದಾರೆ. ರಿಯಾಲಿಟಿ ಚೆಕ್‌ ವೇಳೆ ರಾಹುಲ್‌ ಆರೋಪ ಸುಳ್ಳು ಎಂದು ಹಲವರು ಹೇಳಿದ್ದಾರೆ. ರಾಹುಲ್‌, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಮತಗಳ್ಳತನದ ಆರೋಪ ಮಾಡಿರುವ ರಾಹುಲ್ ಗಾಂಧಿ ಅವರಿಗೆ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ, ಕನಿಷ್ಠ ನೈತಿಕತೆಯ ಆಧಾರದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದೇ ರೀತಿಯ ಆರೋಪ ಮಾಡಿರುವ ಕರ್ನಾಟಕ ಸಿಎಂ ಕೂಡ ತ್ಯಾಗಪತ್ರ ಸಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 

12:00 AM (IST) Aug 11

ಆಪರೇಷನ್ ಸಿಂದೂರ್ ನಂತರ ಭಾರತ-ಪಾಕ್ ಮತ್ತೆ ಮುಖಾಮುಖಿ! ಒಂದೇ ದಿನ, ಒಂದೇ ಸಮಯದಲ್ಲಿ ಕವಾಯತು!

ಭಾರತ ಮತ್ತು ಪಾಕಿಸ್ತಾನ ನೌಕಾಪಡೆಗಳು ಆಗಸ್ಟ್ 11, 2025 ರಂದು ಅರೇಬಿಯನ್ ಸಮುದ್ರದಲ್ಲಿ ಏಕಕಾಲಿಕ ಗುಂಡಿನ ಕವಾಯತು ನಡೆಸಲಿವೆ. ಕೇವಲ 60 ನಾಟಿಕಲ್ ಮೈಲುಗಳ ಅಂತರದಲ್ಲಿ ನಡೆಯುವ ಈ ಕವಾಯತುಗಳು ಜಾಗತಿಕ ಗಮನ ಸೆಳೆದಿವೆ. 

Read Full Story

07:04 PM (IST) Aug 10

ಡಿವೋರ್ಸ್​ ದಿನವೇ ನನ್ನನ್ನು ಟ್ರಂಪ್​ ಡೇಟಿಂಗ್​ಗೆ ಕರೆದಿದ್ರು, ಅಂದು ನಾನು ಹೋಗಿದ್ದರೆ... ನಟಿ ಹೇಳಿದ್ದೇನು?

ಸದ್ಯ ಇಡೀ ವಿಶ್ವದ ಕಣ್ಣು ಡೊನಾಲ್ಡ್​ ಟ್ರಂಪ್​ ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ ಹಾಲಿವುಡ್​ ನಟಿ ಎಮ್ಮಾ ಥಾಂಪ್ಸನ್, ಟ್ರಂಪ್​ ಅವರ ಡೇಟಿಂಗ್​ ವಿಷ್ಯವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

 

Read Full Story

05:42 PM (IST) Aug 10

ಏರ್ ಇಂಡಿಯಾ ಪೈಲಟ್‌ಗಳ ನಿವೃತ್ತಿ ವಯಸ್ಸು 65ಕ್ಕೆ ಏರಿಕೆ!

ಏರ್ ಇಂಡಿಯಾ ತನ್ನ ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 58 ರಿಂದ 65ಕ್ಕೆ ಮತ್ತು ಇತರ ಸಿಬ್ಬಂದಿಗಳ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಹೆಚ್ಚಿಸಿದೆ. ವಿಸ್ತಾರಾ ವಿಲೀನದ ನಂತರ ಸಮಾನತೆ ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

04:10 PM (IST) Aug 10

ರಷ್ಯಾದ ತೈಲ ಇಲ್ಲದಿದ್ದರೆ ಗಗನಕ್ಕೆ ಏರೀತು ಭಾರತದ ತೈಲ ಬೆಲೆ!

ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿ ನಿಲ್ಲಿಸಿದರೆ ಭಾರತದ ಇಂಧನ ವೆಚ್ಚ 2026ರಲ್ಲಿ 9 ಬಿಲಿಯನ್ ಡಾಲರ್ ಮತ್ತು 2027ರಲ್ಲಿ 12 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಪರ್ಯಾಯ ಮೂಲಗಳಿಂದ ತೈಲ ಖರೀದಿಸುವುದರಿಂದ ಹೆಚ್ಚಿನ ವೆಚ್ಚ ತಗಲಲಿದೆ.
Read Full Story

01:42 PM (IST) Aug 10

ಮಹಿಳೆಯ ಎದೆಹಾಲಿನಿಂದ ತಯಾರಿಸಿದ ಐಸ್‌ಕ್ರೀಮ್; ಆದ್ರೆ, ಲಿಮಿಟೆಡ್ ಆಫರ್ ಮಾತ್ರ!

ನಮ್ಮ ದೇಶದಲ್ಲಿ ಮಕ್ಕಳಿಗೆ ಎದೆಹಾಲು ಉಣಿಸಲು ಎದೆಹಾಲು ಸಿಗದೇ ಎಷ್ಟೋ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಆದರೆ, ಇಲ್ಲೊಂದು ಕಂಪನಿ ಮಹಿಳೆಯರ ಎದೆ ಹಾಲಿನಿಂದ ಕೆಜಿಗಟ್ಟಲೆ ಐಸ್‌ಕ್ರೀಂ ಅನ್ನು ತಯಾರಿಸಲಾಗಿದೆ ಎಂದು ಹೇಳಿದೆ. ಈ ಐಸ್‌ಕ್ರೀಂ ತಿನ್ನುವುದಕ್ಕೆ ಲಿಮಿಟೆಡ್ ಆಫರ್ ನೀಡಿದೆ.

Read Full Story

01:00 PM (IST) Aug 10

ಡೇಟ್ ಮುಂದೂಡಿಕೆ ನಿರಾಳತೆಯಲ್ಲಿದ್ದ ಕೇರಳ ನರ್ಸ್ ನಿಮಿಷಾ ಪ್ರಿಯಾ ಕುಟುಂಬಸ್ಥರಿಗೆ ಬಿಗ್ ಶಾಕ್

ಯೆಮೆನ್‌ನಲ್ಲಿ ಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ದಿನಾಂಕ ಪ್ರಕಟಿಸುವಂತೆ ತಲಾಲ್ ಸೋದರ ಅಟಾರ್ನಿ ಜನರಲ್ ಅವರನ್ನು ಭೇಟಿ ಮಾಡಿದ್ದಾರೆ. 

Read Full Story

11:59 AM (IST) Aug 10

ಸ್ವಿಗ್ಗಿ, ಜೊಮ್ಯಾಟೋನಲ್ಲಿ ಮದ್ಯ ಮಾರಾಟಕ್ಕೆ ಶಿಫಾರಸ್ಸು ಸಲ್ಲಿಕೆ; ಖರೀದಿಗೆ ಒಂದಿಷ್ಟು ಷರತ್ತು!

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಬೆವ್ಕೊ ಚಿಂತಿಸುತ್ತಿದೆ. ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. 23 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಾಟಕ್ಕೆ ಅವಕಾಶ.

Read Full Story

11:46 AM (IST) Aug 10

Modi in Bengluru: ಪ್ರಧಾನಿ ಮೋದಿ ನೋಡಲು ಎಲ್ಲೆಡೆ ಸೇರಿದ ಜನ

ಎಲೆಕ್ಟ್ರಾನಿಕ್ಸ್ ‌ಸಿಟಿ: ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ಬಳಿ ಸಾರ್ವಜನಿಕರ ಜಮಾವಣೆ. ಪ್ರಧಾನಿ ಮೋದಿ ನೋಡಲು ಕಿಕ್ಕಿರಿದು ಸೇರಿದ ಮಂದಿ. 

ಎಲೆಕ್ಟ್ರಾನಿಕ್ ಸಿಟಿ ಸ್ಕೈ ವಾಕ್, ಎಲಿವೇಟೆಡ್ ಟೋಲ್ ರಸ್ತೆ ಬಳಿ ಸೇರಿರುವ ಜನರನ್ನು ಚದುರಿಸುತ್ತಿರುವ ಪೊಲೀಸರು. ಜಿಟಿ ಜಿಟಿ ಮಳೆಯಲ್ಲೂ ಮೋದಿ ಜಪ. ಜಿಟಿ ಜಿಟಿ ಮಳೆಯಲ್ಲಿಯೂ ನಮೋಗೆ ಜೈಕಾರ. ಮೋದಿ ಪ್ಲೆಕ್ಸ್ ಗಳನ್ನು ಹಿಡಿದು ಜೈಕಾರ.

11:41 AM (IST) Aug 10

ವಂದೇ ಭಾರತ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ವಂದೇ ಭಾರತ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

11:05 AM (IST) Aug 10

ಕೇರಳದಲ್ಲಿ ಮಿಸ್ ಆಗಿದ್ದ ವಿದೇಶಿ ಮಹಿಳೆ ಪ್ರಕರಣಕ್ಕೆ ರೋಚಕ ತಿರುವು; ಮೊಹಮ್ಮದ್ ಅಲಿಗಾಗಿ ಹುಡುಕಾಟ

ಆರು ವರ್ಷಗಳ ಹಿಂದೆ ಕೇರಳಕ್ಕೆ ಬಂದ ನಂತರ ನಾಪತ್ತೆಯಾದ ಜರ್ಮನ್ ಮಹಿಳೆಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದರು. ಲೀಸಾ ಇಸ್ಲಾಂಗೆ ಮತಾಂತರಗೊಂಡಿದ್ದರು.

Read Full Story

More Trending News