ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಆಗುತ್ತೆ, ಇದು ನನ್ನ ಗ್ಯಾರಂಟಿ: ಪ್ರಧಾನಿ ಮೋದಿ

Published : Jul 26, 2023, 08:04 PM ISTUpdated : Jul 26, 2023, 08:11 PM IST
ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಆಗುತ್ತೆ, ಇದು ನನ್ನ ಗ್ಯಾರಂಟಿ: ಪ್ರಧಾನಿ ಮೋದಿ

ಸಾರಾಂಶ

ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಇದು ನನ್ನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಐಟಿಪಿಓ ಸಂಕಿರ್ಣದಲ್ಲಿ ಭಾರತ ಮಂಟಪಂ ಅನಾವರಣದ ವೇಳೆ ಹೇಳಿದ್ದಾರೆ.  

ನವದೆಹಲಿ (ಜು.26): ದೆಹಲಿಯ ಹೊಸ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ ಆಗಿರುವ 'ಭಾರತ ಮಂಟಪಂ' ಅನ್ನು ಪ್ರಧಾನಿ ಮೋದಿ ಬುಧವಾರ ಸಂಜೆ ಉದ್ಘಾಟನೆ ಮಾಡಿದರು. ಸಾಮಾನ್ಯವಾಗಿ ರಾಜಕೀಯ ಹೊರತಾದ ಭಾಷಣಗಳಲ್ಲಿ ದೇಶದ ಅಭಿವೃದ್ಧಿ ವಿಚಾರವಾಗಿಯೇ ಅಥವಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಹಾಗೆ ಮಾತನಾಡುವ ಪ್ರಧಾನಿ ಮೋದಿ, ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವಿಪಕ್ಷಗಳ ಮೇಲೆ ಟೀಕೆ ಮಾಡಲು ಕೂಡ ಬಳಸಿಕೊಂಡರು. ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಒಟ್ಟುಗೂಡಿಸಿ, ಭಾರತ್ ಮಂಟಪದಂತಹ ಕೇಂದ್ರಗಳು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದರೆ, ಅದನ್ನು ತಡೆಯಲು ಪ್ರಯತ್ನಿಸುವವರೂ ಇದ್ದಾರೆ ಎಂದು ಪ್ರಧಾನಿ ಮೋದಿ ವಿಪಕ್ಷದವರ ಹೆಸರು ಹೇಳದೆ ಅವರನ್ನು ಟೀಕಿಸಿದರು. "ಇವರು ಈ ಭಾರತ ಮಂಟಪವನ್ನು ನಿಲ್ಲಿಸಲು ಪ್ರಯತ್ನಿಸಿದರು, ಪ್ರತಿ ಕೆಲಸವನ್ನು ನಿಲ್ಲಿಸಲು ಒಬ್ಬರಲ್ಲಾ ಒಬ್ಬರು ಪ್ರಯತ್ನ ಮಾಡಿದರು. ಬ್ರೇಕಿಂಗ್ ನ್ಯೂಸ್‌ನಲ್ಲಿ, ಎಲ್ಲವನ್ನೂ ತೋರಿಸಿದರು. ಹಲವಾರು ಪ್ರಕರಣಗಳು ದಾಖಲಾಗಿವೆ. ಇನ್ನು ಕೆಲವೇ ದಿನಗಳು ಹೋಗಲಿ, ಅದೇ ವ್ಯಕ್ತಿಗಳು ತಮ್ಮ ಉಪನ್ಯಾಸಗಳಿಗೆ ಕಾರ್ಯಕ್ರಮಗಳಿಗೆ ಇದೇ ವೇದಿಕೆಗೆ ಬರುತ್ತಾರೆಸ್ವಲ್ಪ ಸಮಯದ ನಂತರ, ಆ ಜನರು ಕೆಲವು ಉಪನ್ಯಾಸಗಳಿಗೆ / ಕಾರ್ಯಕ್ರಮಕ್ಕೆ ಇಲ್ಲಿಗೆ ಬರುತ್ತಾರೆ" ಎಂದು ಅವರು ಹೇಳಿದರು.

ನಾನು ಭಾರತದ ನಿವಾಸಿಗಳಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ನನ್ನ ಸರ್ಕಾರದ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೆಮ್ಮೆಯಿಂದ ಎದ್ದು ನಿಲ್ಲಲಿದೆ. ಇದು ಮೋದಿಯ ಗ್ಯಾರಂಟಿ' ಎಂದು ಹೇಳಿದರು.

ಕೆಲವರಿಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಿ ಒಳ್ಳೆಯ ಕೆಲಸಗಳನ್ನು ನಿಲ್ಲಿಸುವ ಪ್ರವೃತ್ತಿ ಇರುತ್ತದೆ. ‘ಕರ್ತವ್ಯ ಪಥ’ ನಿರ್ಮಾಣವಾಗುತ್ತಿದ್ದಾಗ ಪತ್ರಿಕೆಗಳ ಮುಖಪುಟದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹಲವು ವಿಷಯಗಳು ರಾರಾಜಿಸುತ್ತಿದ್ದವು. ಕೋರ್ಟುಗಳಲ್ಲಿ ಕೂಡ ಇದರ ನಿರ್ಮಾಣದ ಪ್ರಶ್ನೆ ಮಾಡಿದ್ದರು. ಅದರ ನಿರ್ಮಾಣ ಪೂರ್ತಿಯಾದಾಗ ಇದೇ ಜನ ಚೆನ್ನಾಗಿದೆ ಎಂದಿದ್ದರು.  ಈ ಟೋಲಿಗಳು, ಭಾರತ ಮಂಟಪ'ವನ್ನು ಒಪ್ಪಿಕೊಳ್ಳುತ್ತದೆ ಎನ್ನುವ ಖಾತ್ರಿ ನನಗೆ ಇದೆ. ಅವರು ಸೆಮಿನಾರ್‌ನಲ್ಲಿ ಉಪನ್ಯಾಸ ನೀಡಲು ಇಲ್ಲಿಗೆ ಬರುವ ಸಾಧ್ಯತೆಯೂ ಇದೆ ಎಂದು ಪ್ರಧಾನಿ ಹೇಳಿದರು.

ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು

ಕಳೆದ 5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದಲ್ಲಿ ಕಡು ಬಡತನ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೂ ಹೇಳುತ್ತಿವೆ. ಕಳೆದ 9 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ನೀತಿಗಳು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದರು.

ಮುಜಾಹೀದ್ದೀನ್, ಈಸ್ಟ್ ಇಂಡಿಯಾದಲ್ಲೂ I-N-D-I-A ಹೆಸರಿದೆ, ವಿಪಕ್ಷ ಒಕ್ಕೂಟಕ್ಕೆ ಮೋದಿ ತಿರುಗೇಟು!

ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ: ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್-ಭಾರತ್ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!