
ಕೊಚ್ಚಿ(ಸೆ.17): ಜನರಿಗೆ ಕೊರೋನಾ ಸೋಂಕು ಬಂದಿದೆಯೇ ಎಂದು ತಿಳಿದುಕೊಳ್ಳಲು ಕೇರಳ ಸರ್ಕಾರ ಕಾಫಿ ಪೌಡರ್ ಪರೀಕ್ಷೆಯ ಮೊರೆ ಹೋಗಿದೆ.
ವ್ಯಕ್ತಿ, ವಾಸನೆ ಗ್ರಹಣ ಶಕ್ತಿಯನ್ನು ಕಳೆದುಕೊಳ್ಳುವುದು ಕೊರೋನಾದ ಲಕ್ಷಣದಲ್ಲಿ ಒಂದು. ಹೀಗಾಗಿ ಕಾಫಿ ಪೌಡರ್ ಅನ್ನು ಮೂಸಿದಾಗ ಯಾರಿಗೆ ವಾಸನೆ ಗೊತ್ತಾಗುವುದಿಲ್ಲವೋ ಅಂಥವರಿಗೆ ಕೊರೋನಾ ಸೋಂಕು ತಲುಲಿದೆ ಎಂದು ಅರ್ಥ. ಜೈಲಿನಲ್ಲಿ ಕೈದಿಗಳಿಗೆ ಕೊರೋನಾ ಬಂದಿದೆಯೇ ಎಂದು ತಿಳಿಯಲು ಆರೋಗ್ಯ ಸೇವೆಗಳ ನಿರ್ದೇಶನಾಲಯ ಕಾಫಿ ಪೌಡರ್ ಟೆಸ್ಟ್ಗೆ ಸೂಚನೆ ನೀಡಿದೆ.
ಈ ಪರೀಕ್ಷೆಗೆ ಒಳಗಾದ 4,298 ಕೈದಿಗಳ ಪೈಕಿ 683 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕಾಫಿ ಪೌಡರ್ ಪರೀಕ್ಷೆಯ ವೇಳೆ ರೋಗದ ಲಕ್ಷಣ ಕಾಣಿಸಿಕೊಂಡವರಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ.
ಒಂದು ವೇಳೆ ಫಲಿತಾಂಶ ನೆಗೆಟೀವ್ ಬಂದರೂ ರೋಗ ಲಕ್ಷಣ ದೂರ ಆಗುವವರೆಗೆ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ