ಸೋನಿಯಾರಿಂದ ಯುಪಿಎ ಸೋಲು, ಮೋದಿ ಮೊದಲ ಅವಧಿ ನಿರಂಕುಶ

Published : Dec 12, 2020, 07:39 AM ISTUpdated : Dec 12, 2020, 01:47 PM IST
ಸೋನಿಯಾರಿಂದ ಯುಪಿಎ ಸೋಲು, ಮೋದಿ ಮೊದಲ ಅವಧಿ ನಿರಂಕುಶ

ಸಾರಾಂಶ

 ನಾನು ರಾಷ್ಟ್ರಪತಿಯಾದ ಬಳಿಕ ಕಾಂಗ್ರೆಸ್‌ ರಾಜಕೀಯ ಲಕ್ಷ್ಯ ಕಳೆದುಕೊಂಡಿತು| ಮೋದಿ ಮೊದಲ ಅವಧಿ ನಿರಂಕುಶ: ಪ್ರಣಬ್‌ ಮುಖರ್ಜಿ ಪುಸ್ತಕದಲ್ಲಿ ಮಾಹಿತಿ

ನವದೆಹಲಿ(ಡಿ.12): ಕಾಂಗ್ರೆಸ್‌ ನಾಯಕತ್ವದ ವಿರುದ್ಧ 20ಕ್ಕೂ ಹೆಚ್ಚು ನಾಯಕರು ದನಿ ಎತ್ತಿದ ಬೆನ್ನಲ್ಲೇ, 2014ರಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರೇ ಕಾರಣ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್‌ ಮುಖರ್ಜಿ ಅವರು ಬರೆದಿರುವುದು ಸಂಚಲನಕ್ಕೆ ಕಾರಣವಾಗಿದೆ.

ಕಳೆದ ಆಗಸ್ಟ್‌ನಲ್ಲಿ ನಿಧನರಾದ ಪ್ರಣಬ್‌ ಅವರು ‘ದ ಪ್ರೆಸೆಡೆನ್ಷಿಯಲ್‌ ಇಯ​ರ್‍ಸ್’ ಎಂಬ ಪುಸ್ತಕ ಬರೆದಿದ್ದಾರೆ. ಅದು ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಅದರಲ್ಲಿ ಅಡಕವಾಗಿರುವ ಅಂಶಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ.

ಸೋನಿಯಾ ನಿವೃತ್ತ : UPA ಅಧ್ಯಕ್ಷ ಪಟ್ಟಕ್ಕೆ ಮಹತ್ವದ ಹೆಸರು

‘2004ರಲ್ಲಿ ನಾನೇನಾದರೂ ಒಂದು ವೇಳೆ ಪ್ರಧಾನಿಯಾಗಿದ್ದರೆ, 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ ಎಂದು ಕೆಲವು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ಇದಕ್ಕೆ ನನ್ನ ಸಹಮತ ಇಲ್ಲವಾದರೂ, ನಾನು ರಾಷ್ಟ್ರಪತಿಯಾದ ನಂತರ ಪಕ್ಷದ ನಾಯಕತ್ವ ರಾಜಕೀಯ ಲಕ್ಷ್ಯವನ್ನು ಕಳೆದುಕೊಂಡಿತು ಎಂದು ನಾನು ಭಾವಿಸಿದ್ದೇನೆ. ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಸೋನಿಯಾ ಗಾಂಧಿ ಅವರಿಂದ ಆಗಲಿಲ್ಲ. ಮನಮೋಹನ ಸಿಂಗ್‌ ಅವರು ಸದನದಿಂದ ದೀರ್ಘಾವಧಿಗೆ ದೂರ ಉಳಿದರು. ಇದರಿಂದ ಸಂಸದರೊಂದಿಗಿನ ವೈಯಕ್ತಿಕ ಸಂಪರ್ಕ ಕಡಿತಗೊಂಡಿತು’ ಎಂದು ಪುಸ್ತಕದಲ್ಲಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆ.

'ಶಾಲಾ ಪಠ್ಯಕ್ಕೆ ಸೋನಿಯಾ ಸಾಧನೆ ಸೇರಿಸಿ' ಸಿಎಂಗೆ ಒತ್ತಾಯ

ಮೋದಿಯದ್ದು ಸರ್ವಾಧಿಕಾರಿ ಆಳ್ವಿಕೆ:

ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಮೈತ್ರಿಕೂಟವನ್ನು ರಕ್ಷಿಸಿಕೊಳ್ಳುವುದರಲ್ಲೇ ವ್ಯಸ್ತರಾಗಿದ್ದರು. ಇದರಿಂದಾಗಿ ಅವರ ಆಡಳಿತಕ್ಕೆ ಹೊಡೆತ ಬಿತ್ತು. ಆದರೆ ನರೇಂದ್ರ ಮೋದಿ ಅವರು ತಮ್ಮ ಮೊದಲ ಅವಧಿಯಲ್ಲಿ ನಿರಂಕುಶ ಆಡಳಿತದ ಮೊರೆ ಹೋದರು. ಇದರಿಂದಾಗಿ ಸರ್ಕಾರ, ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ತಿಕ್ಕಾಟ ಕಂಡುಬಂತು. ಈ ವಿಷಯಗಳಲ್ಲಿ ಮೋದಿ ಅವರು 2ನೇ ಅವಧಿಯಲ್ಲಿ ಉತ್ತಮ ಸಂಬಂಧ ಹೊಂದಿರುತ್ತಾರಾ ಎಂಬುದನ್ನು ಕಾಲವೇ ಹೇಳಬೇಕು ಎಂದು ಪ್ರಣಬ್‌ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ