‘ಗುಜ್ರಾಲ್ ಮಾತು ಕೇಳಿದ್ರೆ ನರಸಿಂಹ್ ರಾವ್ 1984ರ ದಂಗೆ ತಪ್ಪಿಸಬಹುದಿತ್ತು’!

Published : Dec 05, 2019, 04:12 PM IST
‘ಗುಜ್ರಾಲ್ ಮಾತು ಕೇಳಿದ್ರೆ ನರಸಿಂಹ್ ರಾವ್ 1984ರ ದಂಗೆ ತಪ್ಪಿಸಬಹುದಿತ್ತು’!

ಸಾರಾಂಶ

ಸಿಖ್ ವಿರೋಧಿ ದಂಗೆ ಕುರಿತು ಮಾತನಾಡಿದ ಮಾಜಿ ಪ್ರಧಾನಿ| ನರಸಿಂಹ್ ರಾವ್ ದೋಷ ಗುರುತಿಸಿದ ಮನಮೋಹನ್ ಸಿಂಗ್| ಐ.ಕೆ. ಗುಜ್ರಾಲ್ ಮಾತು ಕೇಳಿದ್ದರೆ ಸಿಖ್ ವಿರೋಧಿ ದಂಗೆ ಸಂಭವಿಸುತ್ತಿರಲಿಲ್ಲ ಎಂದ ಸಿಂಗ್| ‘ಸೇನೆ ಕರೆಸುವಂತೆ ಗುಜ್ರಾಲ್ ಮಾಡಿದ್ದ ಮನವಿಗೆ ರಾವ್ ಸ್ಪಂದಿಸಲಿಲ್ಲ’| ಗುಜ್ರಾಲ್ ಜೊತೆಗಿನ ಒಡನಾಟ ಸ್ಮರಿಸಿದ ಮಾಜಿ ಪ್ರಧಾನಿ ಡಾ.ಸಿಂಗ್| 

ನವದೆಹಲಿ(ಡಿ.05): 1984ರ ಸಿಖ್ ವಿರೋಧಿ ದಂಗೆ ಸಮಯದಲ್ಲಿ ಅಂದಿನ ಗೃಹ ಸಚಿವ ನರಸಿಂಹ್ ರಾವ್, ಮಾಜಿ ಪ್ರಧಾನಿ ಐ.ಕೆ ಗುಜ್ರಾಲ್ ಮಾತನ್ನು ಕೇಳಿದ್ದರೆ ಹಿಂಸಾಚರಾವನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಸಿಖ್ ನರಮೇಧ: ಆಗಿದ್ದಾಗೋಯ್ತು ಎಂದಿದ್ದ ಪಿತ್ರೋಡಾ ಕ್ಷಮೆಯಾಚನೆ!

ಮಾಜಿ ಪ್ರಧಾನಿ ದಿವಂಗತ ಐ.ಕೆ ಗುಜ್ರಾಲ್ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸಿಂಗ್, ಸಿಖ್ ವಿರೋಧಿ ದಂಗೆ ಸಮಯದಲ್ಲಿ ಆದಷ್ಟು ಬೇಗ ಸೇನೆಯನ್ನು ಕರೆಸುವಂತೆ ಗುಜ್ರಾಲ್ ನರಸಿಂಹ್ ರಾವ್ ಅವರಿಗೆ ಮನವಿ ಮಾಡಿದ್ದರು. ಆದರೆ ಗುಜ್ರಾಲ್ ಮನವಿಗೆ ರಾವ್ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.

ನಾಚಿಕೆಯಾಗಬೇಕು: ಅತ್ಯಾಪ್ತ ಸ್ಯಾಮ್ ಪಿತ್ರೋಡಾಗೆ ರಾಹುಲ್ ತರಾಟೆ!

ತುರ್ತು ಪರಿಸ್ಥಿತಿ ನಂತರ ತಮ್ಮ ಹಾಗೂ ಗುಜ್ರಾಲ್ ನಡುವಿನ ಸಂಬಂಧ ಗಾಢವಾಯಿತು ಎಂದಿರುವ ಸಿಂಗ್, ಗುಜ್ರಾಲ್ ಯೋಜನಾ ಆಯೋಗದ ರಾಜ್ಯ ಖಾತೆ ಸಚಿವರಾಗಿದ್ದಾಗ ನಾನು ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರನಾಗಿದ್ದೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹ ಬೆಳೆಯಿತು ಎಂದು ಸ್ಮರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ