ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಅರೆಸ್ಟ್

Published : Sep 27, 2025, 03:06 PM IST
I Love Muhammad

ಸಾರಾಂಶ

ಹಿಂಸಾಚಾರಕ್ಕೆ ತಿರುಗಿದ ಐ ಲವ್ ಮೊಹಮ್ಮದ್, ಮುಸ್ಲಿಂ ಗುರು ತೌಕೀರ್ ರಾಜಾ ಖಾನ್ ಅರೆಸ್ಟ್ ಮಾಡಲಾಗಿದೆ. ಹಿಂಸಾಚಾರದಲ್ಲಿ ಗುಂಡಿನ ದಾಳಿಯಾಗಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮುಸ್ಲಿಂ ಗುರು ಕೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.

ಬರೇಲಿ (ಸೆ.27) ಐ ಲವ್ ಮೊಹಮ್ಮದ್ ಆಂದೋಲನ ಇದೀಗ ಗಲಭೆಯಾಗಿ ಪರಿವರ್ತನೆಗೊಂಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಹಿಂಸಾಚಾರದ ಪರಿಸ್ಥಿತಿ ಕೈಮೀರುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿದೆ. ಐ ಲವ್ ಮೊಹಮ್ಮದ್ ಆಂದೋಲನ ರೂಪದಲ್ಲಿ ಆರಂಭಗೊಂಡು ಬಳಿಕ ಗಲಭೆಯಾಗಿ ಪರಿವರ್ತನೆಗೊಳ್ಳಲು ಕಾರಣರಾದ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಅರೆಸ್ಟ್ ಮಾಡಲಾಗಿದೆ.

ಐ ಲವ್ ಮೊಹಮ್ಮದ್ ಅಭಿಯಾನ ಬೆಂಬಲಿಸಲು ಕರೆ

ಐ ಲವ್ ಮೊಹಮ್ಮದ್ ಅಭಿಯಾನ ಆರಂಭಗೊಂಡು ಕೆಲ ದಿಗಳಾಗಿವೆ.ಕಾನ್ಪುರದಲ್ಲಿ ಆಯೋಜಿಸಿದ ಈದ್ ಮಿಲಾದ್ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಐ ಲವ್ ಮೊಹಮ್ಮದ್ ಪ್ಲಕಾರ್ಡ್, ಬ್ಯಾನರ್‌ ರಾರಾಜಿಸಿತ್ತು. ಹಲವರು ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಈದ್ ಮಿಲಾದ್ ಮೆರವಣಿಗೆಯಲ್ಲಿನ ಐ ಲವ್ ಮೊಹಮ್ಮದ್ ಅಭಿಯಾನಕ್ಕೆ ಬ್ರೇಕ್ ಹಾಕಿದ್ದರು. ಇದರ ಬೆನ್ನಲ್ಲೇ ಹಲೆವೆಡೆ ಐ ಲವ್ ಮೊಹಮ್ಮದ್ ಆಂದೋಲನ ಆರಂಭಗೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗಿತ್ತು. ಇದರ ಬೆನ್ನಲ್ಲೇ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮುಸ್ಲಿಂ ಗುರು ತೌಕೀರ್ ರಜಾ ಖಾನ್ ಐ ಲವ್ ಮೊಹಮ್ಮದ್ ಆಂದೋಲನ ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ರಜಾ ಖಾನ್ ಬಂಧನವಾಗಿದೆ.

ಮಸೀದಿ ಪ್ರಾರ್ಥನೆ ವೇಳೆ ಕರೆ, ಭುಗಿಲೆದ್ದ ಹಿಂಸಾಚಾರ

ಶುಕ್ರವಾರ ಪ್ರಾರ್ಥನೆ ವೇಳೆ ಮುಸ್ಲಿ ಗುರು ಐ ಲವ್ ಮೊಹಮ್ಮದ್ ಬೆಂಬಲಿಸಿ ಪ್ರತಿಭಟನೆಗೆ ಕರೆ ನೀಡಿದ್ದು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಶುಕ್ರವಾರ ಪ್ರಾರ್ಥನೆ ಬಳಿಕ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ಪ್ರತಿಭಟನೆ ಹಿಂಸಾಚಾರವಾಗಿ ತಿರುಗಿದೆ. ಪೊಲೀಸರು ರಜಾ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ಗಲಭೆಯಲ್ಲಿ ಗುಂಡಿನ ದಾಳಿ

ಹಿಂಸಾಚಾರ ಪ್ರಕರಣ ಸಂಬಂಧ ಬರೇಲಿ ಪೊಲೀಸರು ಒಟ್ಟು 10 ಎಫ್ಐಆರ್ ದಾಖಲಿಸಿದ್ದಾರೆ. ಈ ಪೈಕಿ 7ರಲ್ಲಿ ರಜಾ ಖಾನ್ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇತ್ತ ಗಲಭೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಗಲಭೆಯಲ್ಲಿ ಗುಂಡಿನ ದಾಳಿ ಶಬ್ದ ಕೇಳಿಬಂದಿದೆ. ಗಲಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪೊಲೀಸರು ಗಾಯಗೊಂಡಿದ್ಕಾರೆ.

ರಜಾ ಖಾನ್ ಬೆಂಬಲಿಸಿ ಭಾರಿ ಪ್ರತಿಭಟೆನೆ

ರಜಾ ಖಾನ್ ಬಂಧನ ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ರಜಾ ಖಾನ್ ನಿವಾಸದ ಬಳಿಕ ಜಮಾಯಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..