ನನಗೆ ಮನಸ್ಸಿರಲಿಲ್ಲ, ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌

Published : Dec 29, 2020, 08:52 AM IST
ನನಗೆ ಮನಸ್ಸಿರಲಿಲ್ಲ, ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌

ಸಾರಾಂಶ

ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌| ಸಿಎಂ ಆಗಲು ನನಗೆ ಮನಸ್ಸಿರಲಿಲ್ಲ

ಪಟನಾ(ಡಿ.29): ‘ನನಗೆ ಮುಖ್ಯಮಂತ್ರಿ ಆಗಲು ಮನಸ್ಸಿರಲಿಲ್ಲ. ಬಿಜೆಪಿಗೆ ಅದರದ್ದೇ ಆದ ಮುಖ್ಯಮಂತ್ರಿ ನೇಮಿಸಲು ಅವಕಾಶವಿತ್ತು. ಆದರೆ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಆದೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಜೆಡಿಯುಗೆ ಕಮ್ಮಿ ಸ್ಥಾನ ಬಂದ ಕೂಡಲೇ ನಿತೀಶ್‌ ಸಿಎಂ ಆಗಲು ಹಿಂದೇಟು ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳನ್ನು ನಿತೀಶ್‌ ದೃಢೀಕರಿಸಿದ್ದಾರೆ.

ಇದನ್ನು ಖಚಿತಪಡಿಸಿದ ಬಿಜೆಪಿ ಮುಖಂಡ ಸುಶೀಲ್‌ ಮೋದಿ, ‘ನಿತೀಶ್‌ಗೆ ಹೊಣೆ ಹೊರುವ ಮನಸ್ಸಿರಲಿಲ್ಲ. ಆದರೆ ಬಿಜೆಪಿ-ಜೆಡಿಯು ನಿತೀಶ್‌ ಹೆಸರಲ್ಲಿ ಒಗ್ಗೂಡಿ ಕಣಕ್ಕಿಳಿದಿದ್ದವು. ಹಾಗಾಗಿ ಅವರನ್ನು ಮನವೊಲಿಸಿದೆವು. ರಾಜ್ಯ ಸರ್ಕಾರ 5 ವರ್ಷ ಪೂರೈಸಲಿದೆ’ ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ ಕಾಯ್ದೆ ಬಗ್ಗೆ ಗರಂ:

ಬಿಜೆಪಿ ರಾಜ್ಯಗಳಲ್ಲಿ ಜಾರಿಗೆ ಬರುತ್ತಿರುವ ಲವ್‌ ಜಿಹಾದ್‌ ಕಾಯ್ದೆ ಹಾಗೂ ಅರುಣಾಚಲ ಪ್ರದೇಶದಲ್ಲಿ ತನ್ನ 6 ಶಾಸಕರನ್ನು ಬಿಜೆಪಿ ಸೆಳೆದ ಬಗ್ಗೆ ಮಿತ್ರಪಕ್ಷ ಜೆಡಿಯು ಅತೃಪ್ತಿ ವ್ಯಕ್ತಪಡಿಸಿದೆ. ‘ಅಂತರ್‌ ಧರ್ಮೀಯ ಮದುವೆ ಎಂಬುದು ಇಬ್ಬರ ಪ್ರಾಪ್ತ ವಯಸ್ಕರ ವೈಯಕ್ತಿಕ ಆಯ್ಕೆ. ಈ ವಿಷಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಬಾರದು’ ಎಂದು ಪಕ್ಷದ ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಇನ್ನು ‘ಅರುಣಾಚಲ ವಿದ್ಯಮಾನವು ಮೈತ್ರಿ ರಾಜಕೀಯಕ್ಕೆ ಒಳ್ಳೇದಲ್ಲ’ ಎಂದು ಅವರು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?